*ಕುಂದೂರು ಉಮೇಶಭಟ್ಟ ಮೈಸೂರು
ತಮಿಳುನಾಡಿನ ಮುಖ್ಯಮಂತ್ರಿ ಗಾದಿಗೆ ಏರಲು ಸಿದ್ಧವಾಗಿ ರುವ ಜಯಲಲಿತಾ ಅವರಿಗೂ ಮೈಸೂರಿನ ಚಾಮುಂಡಿ ಬೆಟ್ಟಕ್ಕೂ ವಿಶೇಷ ನಂಟು. ಇದೇ `ಜಯ'ಮಾಲೆ ಧರಿಸಲು ಕಾರಣವಾಗಿರಬಹುದೇ?
ಮುಖ್ಯಮಂತ್ರಿಯಾಗಿರಲಿ, ಇಲ್ಲದೇ ಇರಲಿ ಅವರು ಬಂದು ಹೋಗುವುದು ಚಾಮುಂಡಿಬೆಟ್ಟಕ್ಕೆ. ನಾಡಿನ ಅಧಿದೇವತೆ ಚಾಮುಂಡೇಶ್ವರಿ ತಾಯಿಗೆ ಪೂಜೆ ಸಲ್ಲಿಸಿ ಆಶೀರ್ವಾದ ಪಡೆಯುವುದು ಅವರು ನಡೆಸಿಕೊಂಡು ಬಂದ ಪರಿಪಾಠ. ಅದೂ ಹುಟ್ಟು ಹಬ್ಬದ ಸಂದರ್ಭದಲ್ಲಿ ಪ್ರತಿ ವರ್ಷ ಜಯಲಲಿತಾ ಅವರೇ ಪೂಜೆ ಸಲ್ಲಿಸಿ ಹೋಗುತ್ತಾರೆ. ಅವರು ಬಂದಿಲ್ಲ ಎಂದರೆ ಸ್ನೇಹಿತರು ಇಲ್ಲವೇ ಬೆಂಬಲಿಗರು ಯಾರಾದರೂ ಪೂಜೆ ಸಲ್ಲಿಸುವುದು ವಾಡಿಕೆ.
ಈ ಬಾರಿ ತಮಿಳುನಾಡು ಚುನಾವಣೆ ಕಾರಣಕ್ಕೋ ಏನೋ ತಾವೇ ಅಮ್ಮನಿಗೆ ಪೂಜೆ ಸಲ್ಲಿಸಿ ಹೋಗಿದ್ದರು ತಮಿಳುನಾಡಿನ ಅಮ್ಮ. ಪೂಜಾಫಲವೇನೋ ಎಂಬಂತೆ ಅವರಿಗೆ ನಾಲ್ಕನೇ ಬಾರಿ ಮುಖ್ಯಮಂತ್ರಿ ಗಾದಿ ಒಲಿದಿದೆ.
ತಮಿಳುನಾಡಿನ ಮುಖ್ಯಮಂತ್ರಿ ಗಾದಿಗೆ ಏರಲು ಸಿದ್ಧವಾಗಿ ರುವ ಜಯಲಲಿತಾ ಅವರಿಗೂ ಮೈಸೂರಿನ ಚಾಮುಂಡಿ ಬೆಟ್ಟಕ್ಕೂ ವಿಶೇಷ ನಂಟು. ಇದೇ `ಜಯ'ಮಾಲೆ ಧರಿಸಲು ಕಾರಣವಾಗಿರಬಹುದೇ?
ಮುಖ್ಯಮಂತ್ರಿಯಾಗಿರಲಿ, ಇಲ್ಲದೇ ಇರಲಿ ಅವರು ಬಂದು ಹೋಗುವುದು ಚಾಮುಂಡಿಬೆಟ್ಟಕ್ಕೆ. ನಾಡಿನ ಅಧಿದೇವತೆ ಚಾಮುಂಡೇಶ್ವರಿ ತಾಯಿಗೆ ಪೂಜೆ ಸಲ್ಲಿಸಿ ಆಶೀರ್ವಾದ ಪಡೆಯುವುದು ಅವರು ನಡೆಸಿಕೊಂಡು ಬಂದ ಪರಿಪಾಠ. ಅದೂ ಹುಟ್ಟು ಹಬ್ಬದ ಸಂದರ್ಭದಲ್ಲಿ ಪ್ರತಿ ವರ್ಷ ಜಯಲಲಿತಾ ಅವರೇ ಪೂಜೆ ಸಲ್ಲಿಸಿ ಹೋಗುತ್ತಾರೆ. ಅವರು ಬಂದಿಲ್ಲ ಎಂದರೆ ಸ್ನೇಹಿತರು ಇಲ್ಲವೇ ಬೆಂಬಲಿಗರು ಯಾರಾದರೂ ಪೂಜೆ ಸಲ್ಲಿಸುವುದು ವಾಡಿಕೆ.
ಈ ಬಾರಿ ತಮಿಳುನಾಡು ಚುನಾವಣೆ ಕಾರಣಕ್ಕೋ ಏನೋ ತಾವೇ ಅಮ್ಮನಿಗೆ ಪೂಜೆ ಸಲ್ಲಿಸಿ ಹೋಗಿದ್ದರು ತಮಿಳುನಾಡಿನ ಅಮ್ಮ. ಪೂಜಾಫಲವೇನೋ ಎಂಬಂತೆ ಅವರಿಗೆ ನಾಲ್ಕನೇ ಬಾರಿ ಮುಖ್ಯಮಂತ್ರಿ ಗಾದಿ ಒಲಿದಿದೆ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ