ಇನ್ನೆಲ್ಲಿಯ ಸಮಾಜವಾದದ ವೇದಾಂತ ?

ಸರಳ ಜೀವನ, ನೇರ ನುಡಿಗೆ ಮತ್ತೊಂದು ಹೆಸರು ವೇದಾಂತ ಹೆಮ್ಮಿಗೆ. ಹೋರಾಟಗಾರ, ಕಟ್ಟಾ ಸಮಾಜವಾದಿ, ಸ್ವಾತಂತ್ರ್ಯ ಸೇನಾನಿ, ಕಾರ್ಮಿಕರ ನಾಯಕರಾಗಿಯೂ ದುಡಿದವರು.
ಮೈಸೂರಿನ ಸೌಂದರ್ಯ ಕಾಪಾಡಲು ಯಾರನ್ನು ಬೇಕಾದರೂ ಎದುರು ಹಾಕಿಕೊಳ್ಳುತ್ತಿದ್ದವರು ವೇದಾಂತ ಹೆಮ್ಮಿಗೆ.
ಮೈಸೂರಿನ ನ್ಯಾಯಾಲಯಗಳ ಆವರಣದಲ್ಲಿ ಬೃಹತ್ ಕಟ್ಟಡ ನಿರ್ಮಿಸುವ ಪ್ರಸ್ತಾಪ  ಬಂದಾಗ ಅಂದಿನ ಕಾನೂನು ಸಚಿವ ಲಕ್ಷ್ಮೀಸಾಗರ್ ವಿರುದ್ಧ  ಪ್ರತಿಭಟಿಸಿದವರು. ಅಷ್ಟೆ ಏಕೆ ನಗರ ಯೋಜನೆ ಪ್ರಾಧಿಕಾರ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ಸಚಿವರೆದುರೇ ನಿಷ್ಠುರವಾಗಿ ಮಾತನಾಡಿದವರು. ಬಹಳ ಹಿಂದಿನ ಕಾಲಕ್ಕೇ ಅಂತರ್ಜಾತಿ ವಿವಾಹವಾಗಿ ತಮ್ಮವರಿಂದ ದೂರವಾದವರು. ಶಾಸಕರಾಗಿ, ಪತ್ರಕರ್ತರಾಗಿ, ೧೬ವರ್ಷಗಳ ವರೆಗೆ ಪುರಸಭಾ ಸದಸ್ಯರಾಗಿದ್ದ ವರು. ಶ್ರೀಮಂತ ಕುಟುಂಬದಿಂದ ಬಂದವರಾದರೂ ಬಡವರ ಬಗ್ಗೆ ಮಿಡಿದರು.  ಸ್ವಾತಂತ್ರ್ಯ ಚಳವಳಿಯಲ್ಲಿ ಸಕ್ರಿಯರಾದ ಇವರು ಅನೇಕ ಬಾರಿ ಜೈಲುವಾಸ ಅನುಭವಿಸಿದರು.ತುರ್ತು ಪರಿಸ್ಥಿತಿ ವಿರುದ್ಧದ ಜೆಪಿ ಚಳವಳಿ, ಗೋಕಾಕ್ ಚಳವಳಿಯಲ್ಲಿ ಪಾಲ್ಗೊಂಡಿದ್ದರು. ಗೋವಾ ವಿಮೋಚನಾ ಚಳವಳಿಯಲ್ಲಿ ಭಾಗವಹಿಸಿ  ಪೊಲೀಸರ ಲಾಠಿ ಹೊಡೆತ ತಿಂದಿದ್ದನ್ನು ಆಗಾಗ ಸ್ಮರಿಸಿಕೊಳ್ಳುತ್ತಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ