ಕಠಿಣ ಪರಿಶ್ರಮ ಬೇಕು, ಮನೆಪಾಠ ಅನಿವಾರ್ಯವೇನಲ್ಲ

* ವಿಕ ಸುದ್ದಿಲೋಕ ಮೈಸೂರು
ಪಿಯುಸಿ ಪರೀಕ್ಷೆಯಲ್ಲಿ  ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣ ರಾಗಿ ಅಗ್ರ ಶ್ರೇಯಾಂಕಿತರಾಗುವುದು ಹೇಗೆ?  ರಾಜ್ಯಕ್ಕೆ- ಜಿಲ್ಲೆಗೆ ಟಾಪರ್ ಆಗಲು ಏನು ಮಾಡಬೇಕು?
ಇಂಥದ್ದೊಂದು ಪ್ರಶ್ನೆ ಮುಂದಿಟ್ಟರೆ ಕಷ್ಟಪಟ್ಟು ಓದ ಬೇಕು, ಹೆಸರು ಮಾಡಿದ  ಕಾಲೇಜಿಗೆ ಸೇರಬೇಕು, ಮೊದ ಲಿಂದಲೂ ಇಂಗ್ಲಿಷ್ ಮೀಡಿಯಂನಲ್ಲಿ ಓದಿರ ಬೇಕು, ಕಡ್ಡಾಯವಾಗಿ ಟ್ಯೂಷನ್‌ಗೆ ಹೋಗಿರಬೇಕು, ಸರಕಾರಿ ಕಾಲೇಜು ಬದಲು ಖಾಸಗಿ ಕಾಲೇಜಿನಲ್ಲಿ ವ್ಯಾಸಂಗ ಮಾಡಬೇಕು... ಹೀಗೆ ನಾನಾ ರೀತಿಯ ಅಭಿಪ್ರಾಯಗಳನ್ನು ಸಾಮಾನ್ಯ ವಿದ್ಯಾರ್ಥಿಗಳು ಮುಂದಿಡುತ್ತಾರೆ. ಆದರೆ, ಈ ಎಲ್ಲವೂ ಅರ್ಧ ಸತ್ಯ ಎನ್ನುತ್ತಾರೆ ಸಾಧಕರು.
ಶುಕ್ರವಾರ ಮೈಸೂರು ವಿಜಯ ಕರ್ನಾಟಕ ಕಚೇರಿ ಯಲ್ಲಿ ನಡೆದ  ನಾಲ್ಕು ಜಿಲ್ಲೆಯ ಟಾಪರ್ ವಿದ್ಯಾರ್ಥಿ ಗಳ ಮುಕ್ತ ಸಂವಾದದಲ್ಲಿ ಇಂಥದ್ದೊಂದು ಅಭಿಪ್ರಾಯ ವ್ಯಕ್ತವಾಯಿತು. ಮೈಸೂರು, ಚಾಮರಾಜನಗರ, ಮಂಡ್ಯ ಮತ್ತು ಕೊಡಗು ಜಿಲ್ಲೆಯ ಪಿಯುಸಿ  ಸಾಧಕರ  ಪಟ್ಟಿಯಲ್ಲಿ  ಅಗ್ರ ಸ್ಥಾನ ಪಡೆದು, ಆಯಾಯ ಜಿಲ್ಲೆಯ ಮೊದಲಿಗರು ಎಂಬ ಕಿರೀಟ ತೊಟ್ಟಿರುವ ಆರು ಜನ ವಿದ್ಯಾರ್ಥಿ/ವಿದ್ಯಾರ್ಥಿನಿಯರು ಹಾಗೂ ಅವರ ಪಾಲಕರು  ಮುಕ್ತ ಸಂವಾದದಲ್ಲಿ  ಭಾಗವಹಿಸಿ, ಎರಡು ಗಂಟೆ ಕಾಲ ಮುಕ್ತವಾಗಿ ಚರ್ಚೆ ನಡೆಸಿದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ