ಅಂಚೆಯ ಮನೆ ಅವಸಾನದ ಅಂಚಿಗೆ

 ಜಿ.ಎನ್. ರವೀಶ್‌ಗೌಡ ಶ್ರೀರಂಗಪಟ್ಟಣ
ಜಗದ್ವಿಖ್ಯಾತ ಪಟ್ಟಣದ ಐತಿಹಾಸಿಕ ಕೋಟೆ ಕೊತ್ತಲಗಳಂತೆ ಮತ್ತೊಂದು ಸ್ಮಾರಕ ಸದ್ದಿಲ್ಲದೆ ಜೀರ್ಣಗೊಳ್ಳು ತ್ತಿದೆ. ಅದು ಟಿಪ್ಪು ಕಾಲದ ಡವ್ ಕೋಟ್. ಅಂದರೆ ಪಾರಿವಾಳದ ವಾಸಸ್ಥಾನ.
ಟಿಪ್ಪು ಆಡಳಿತಾವಧಿಯಲ್ಲಿ ಅಂಚೆ ಪತ್ರ ರವಾನೆಗೆ ಪಾರಿವಾಳಗಳನ್ನು ಬಳಸಲಾಗುತ್ತಿತ್ತು.ಅಂಚೆಯಣ್ಣನ ಸೇವೆ ಇಲ್ಲದ ಆ ಕಾಲದಲ್ಲಿ  ಪಾರಿವಾಳಗಳೇ ಕೊರಿ ಯರ್ ಪಾತ್ರ ನಿರ್ವಹಿಸು ತ್ತಿದ್ದವು. ಅದಕ್ಕಾಗಿಯೇ ತರಬೇತಿ ಪಡೆದ ಪಾರಿ ವಾಳಗಳಿಗೆ ಯೋಗ್ಯ ರಾಜಾ ತಿಥ್ಯ ನೀಡಿ ಸೂಕ್ತ ವಸತಿಯನ್ನೂ ಕಲ್ಪಿಸಲಾಗಿತ್ತು.
ತನ್ನ ದುಸ್ಥಿತಿಯಲ್ಲೂ ದೇಶವಿದೇಶಗಳ ಪ್ರವಾಸಿಗರನ್ನು ಕೈಬೀಸಿ ಕರೆಯುವ ಶ್ರೀರಂಗ ಪಟ್ಟಣದಲ್ಲಿ ಇತಿ ಹಾಸದ ಅಧ್ಯಯನಕ್ಕೆ ಅತ್ಯುತ್ತಮ ಉದಾಹರಣೆ ಡವ್‌ಕೋಟ್. ಪ್ರವಾಸೋದ್ಯಮ ಮತ್ತು ಸ್ಮಾರಕ ರಕ್ಷಣೆಗೆ ಸರಕಾರ, ಪ್ರವಾಸೋದ್ಯಮ ಇಲಾಖೆ ಲಕ್ಷಾಂತರ ರೂ. ವೆಚ್ಚ ಮಾಡುತ್ತಿದೆ. ಆದರೆ, ಅಧಿಕಾರಿಗಳ ನಿರ್ಲಕ್ಷ್ಯದಿಂದ ಅನೇಕ ಸ್ಮಾರಕಗಳು ಅವಸಾನದ ಅಂಚು ತಲುಪಿವೆ. ಅವುಗಳ ಪೈಕಿ ಡವ್ ಕೋಟ್ ಒಂದು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ