ಅನುದಾನ ಬಳಕೆಯೊಂದೇ ಸಾಧನೆ

ಜೆ.ಶಿವಣ್ಣ  ಮೈಸೂರು
ಜೆಎನ್-ನರ್ಮ್ ಹಣವನ್ನು ಮೈಸೂರು ನಗರ ಸಾರಿಗೆ ವಿಭಾಗ ಸಂಪೂರ್ಣವಾಗಿ ಬಳಸಿಕೊಂಡಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಹಾಗೆಂದು `ಸಾರಿಗೆ ಸೇವೆ' ಉತ್ತಮಗೊಂಡಿದೆಯೇ ಎಂದರೆ, ಉಹುಂ ಎಂದು ಯಾವುದೇ ತಕರಾರಿಲ್ಲದೆ ಹೇಳಬಹುದು.
ಹೌದು, ಸಾರಿಗೆ ಸೇವೆ ಕಿಂಚಿತ್ ಬದಲಾಗಿಲ್ಲ, ಪ್ರಯಾಣಿಕರು ಬಸ್‌ಗಾಗಿ ಕಾಯುವುದು ತಪ್ಪಿಲ್ಲ. ಮಿಗಿಲಾಗಿ ಪಾರಂಪರಿಕ ನಗರಿ ಎನ್ನುವ ಕಾರಣಕ್ಕೆ ನರ್ಮ್ ಸಿಕ್ಕಿದೆಯಾದರೂ  ಬಸ್ ನಿಲ್ದಾಣಗಳಲ್ಲಿ ಪಾರಂಪರಿಕ ಚಹರೆ ಸಿಗುವು ದಿಲ್ಲ. ಬಸ್ ನಿಲ್ದಾಣಗಳು `ಹೈಟೆಕ್ ಸ್ವರೂಪ' ಪಡೆದುಕೊಂಡಿರುವುದು, ಪ್ರಯಾಣಿಕರಿಗೆ ಸೇವೆ ಒದಗಿಸಲು ಹೈಟೆಕ್ ಬಸ್‌ಗಳು ರಸ್ತೆಗಳಿದಿ ರುವುದು ಯೋಜನೆಯ ಫಲಿತವಾಗಿ ಗೋಚರಿಸುತ್ತವೆ.  ಸಮಯಕ್ಕೆ ಬಾರದ ಬಸ್ಸುಗಳು, ಶೆಲ್ಟರ್ ಇಲ್ಲದೇ ರಸ್ತೆಬದಿ ಕಾಯುವುದು, ನಿಲುಗಡೆ ಸ್ಥಳ ಬಿಟ್ಟು  ಎಲ್ಲೋ ನಿಲ್ಲುವ ಬಸ್‌ಗಳು ತಪ್ಪಿಲ್ಲ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ