ಆರಂಭದಲ್ಲೇ ಜನರ ವಿಶ್ವಾಸಕ್ಕೆ ಧಕ್ಕೆ

ಚೀ.ಜ.ರಾಜೀವ  ಮೈಸೂರು
ಅದು ವಾರ್ಡ್ ಸಂಖ್ಯೆ ೨೦. ಸರಸ್ವತಿಪುರಂ ಹಾಗೂ ಕುಕ್ಕರಹಳ್ಳಿ ಪ್ರದೇಶ. ಕುಡಿಯುವ ನೀರಿನ ಪೂರೈಕೆ ಎಂಬುದು ಇಲ್ಲಿನ ಜನರಿಗೆ ಇತ್ತೀಚಿನವರೆಗೂ ಅಷ್ಟೊಂದು ಸಮಸ್ಯೆ ಆಗಿರಲಿಲ್ಲ.  ಪ್ರತಿ ದಿನ ಮಧ್ಯ ರಾತ್ರಿ ೧೨ ರಿಂದ ಬೆಳಗ್ಗೆ  ೧೧ರವರೆಗೆ  ಎಲ್ಲ ಮನೆಗಳ ಸಂಪುಗಳಿಗೆ ನೀರು ತುಂಬುತ್ತಿತ್ತು.  ಈ ವಾರ್ಡ್ ಪ್ರತಿ ನಿಧಿಸಿದ  ಪಾಲಿಕೆ ಸದಸ್ಯರು  `ನಮ್ಮ ಮನೆಗೆ ನೀರು ಬಂದಿಲ್ಲ...' ಎಂಬ ಸಾರ್ವಜನಿಕ ದೂರನ್ನು ಕೇಳಿಸಿ ಕೊಂಡಿದ್ದು  ಕಡಿಮೆ.
ಆದರೆ ಮೂರು ತಿಂಗಳಿನಿಂದ ವಾರ್ಡ್‌ನಲ್ಲಿನ  ನೀರಿನ ಪೂರೈಕೆ ಚಿತ್ರಣವೇ ಬದಲಾಗಿದೆ.  ವಾರ್ಡಿನ ಎಲ್ಲ ೨೫೦೦ ಮನೆಗಳಿಗೂ ನೀರಿನ ಹೊಸ ಲೈನುಗಳನ್ನು ಜೋಡಿಸಲಾಗಿದೆ. ದಿನದ ಎಲ್ಲ  ಹೊತ್ತಲ್ಲೂ  ನಲ್ಲಿ ಗಳಿಂದಲೇ (ಸಂಪು ಮೂಲಕ ಅಲ್ಲ) ನೇರವಾಗಿ ನೀರು ಪೂರೈಸಲು  ಜೆಎನ್-ನರ್ಮ್ ನಡಿ ಪಾಲಿಕೆ ರೂಪಿಸಿ ರುವ  ಮಹತ್ವಾಕಾಂಕ್ಷಿ ೨೪೭ ಯೋಜನೆ ಪ್ರಾಯೋಗಿಕ ವಾಗಿ   ಜಾರಿಗೊಂಡಿದೆ.  ಸ್ವಾರಸ್ಯ ಅಂದ್ರೆ ಯೋಜನೆ ಜಾರಿಯ ಮರು ದಿನದಿಂದಲೇ, `ನಮ್ಮ ಮನೆಗೆ ನೀರು ಬಂದಿಲ್ಲ...!` ಎಂಬ ಕೂಗು ವಾರ್ಡ್‌ಗಳಲ್ಲಿ  ಎದ್ದಿದೆ  !

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ