ಲಿಂಗಾಂಬುಧಿ ಕೆರೆಯಲ್ಲಿ ಕೊನರಿದ ಆಲದ ಮರ

* ಈಚನೂರು ಕುಮಾರ್ ಮೈಸೂರು
ಆ ದೇವನೊಲಿದರೆ ಕೊರಡು ಕೊನರುವುದಯ್ಯಾ... ಎಂಬುದು  ಆಸ್ತಿಕರ ನಂಬಿಕೆ. ಕಾಳಜಿ ,ಕಳಕಳಿ,ಆರೈಕೆಯ ಪ್ರೀತಿಯಿದ್ದರೆ ಬೇರುಸಹಿತ ನೆಲಕ್ಕುರುಳಿದ ಆಲದ ಮರಕ್ಕೂ ಮರುಜನ್ಮ ನೀಡಬಹುದು ಎಂಬುದು ಪರಿಸರ ಪ್ರೇಮಿಗಳ ಅಚಲ ನಂಬಿಕೆ. ಆ  ನಂಬಿಕೆ ನಿಜವಾದ ರೋಚಕ ಕಥೆಯಿದು.
ಬೋಗಾದಿ-ಮಾನಂದವಾಡಿ ರಸ್ತೆಯಲ್ಲೊಂದು ಶತಾಯುಷಿ ಆಲದ ಮರ ವರ್ತುಲ ರಸ್ತೆ ವಿಸ್ತರಣೆಯಲ್ಲಿ ಬುಡಮೇಲಾಯಿತು. ಈ ಗಜಗಾತ್ರದ ದೊಡ್ಡ ೮-೯ ಕೊಂಬೆಗಳನ್ನು ಕತ್ತರಿಸಲಾಯಿತು. ಬೇರು ಸಮೇತ ಇದ್ದ ಈ ಮರ ನೋಡಿ ವೃಕ್ಷಪ್ರಿಯರು, ಪರಿಸರ ಪ್ರೇಮಿಗಳು ಇದೇ ಮರವನ್ನು ಬೇರೊಂದು ಸ್ಥಳಕ್ಕೆ ಸಾಗಿಸಿ ನೆಟ್ಟರೆ ನೆರಳು-ಗಾಳಿ ಸಿಗಬಹುದೆಂದು ಯೋಜನೆ ಹಾಕಿದರು. ಈ ಪ್ರಯತ್ನವೇ ಯಶಸ್ವಿ ಆಲದ ಮರ ಸ್ಥಳಾಂತರ.
ಎರಡು ಕಿ.ಮೀ. ಪ್ರಯಾಣಿಸಿದ ಮರಕ್ಕೆ ಸೂಕ್ತ ಸ್ಥಳ ಲಿಂಗಾಂಬುಧಿ ಕೆರೆಯ ಒಂದು ತುದಿಯಲ್ಲಿ ಸಿಕ್ಕಿತು. ಅಲ್ಲಿ ವೈಜ್ಞಾನಿಕವಾಗಿಯೇ ಸ್ಥಾಪನೆ ಆಗಿ ಈ ತಿಂಗಳ ೧೮ರಂದು ಸರಿಯಾಗಿ ಎರಡು ತಿಂಗಳು ಭರ್ತಿ. ಈಗ ಇದೇ ಆಲ ಕೊನರಿದೆ (ಚಿಗುರಿದೆ). ಹಸಿರೆಲೆಯ ಗೊಂಚಲು ಕಣ್ಣಿಗೆ ಆನಂದ ಕೊಡುತ್ತಿದೆ. ಈ ಮರದ ನೆರವಿಗೆ ನೀರಿನ ಆಸರೆ ಇದೆ. ಮೈಸೂರು ನಗರದಲ್ಲಿ ಬೃಹತ್ ಮರವನ್ನೇ ಸ್ಥಳಾಂತರಿ ಸಿದ ಘಟನೆ ಇದೇ ಮೊದಲು. ಅಂತೂ ವೃಕ್ಷ ಪರಂಪರೆಗೆ ಸಂರಕ್ಷಣೆಯ ಪರಂಪರೆಯೂ ಸೇರಿಕೊಂಡಿದೆ.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ