ರಾಮದಾಸ್ ನಿರ್ಲಕ್ಷ್ಯ,ಕಾರ್‍ಯಕರ್ತರೂ ಅಲಕ್ಷ್ಯ

* ಕುಂದೂರು ಉಮೇಶಭಟ್ಟ ಮೈಸೂರು
ಮೈಸೂರು ಜಿಲ್ಲೆಯಲ್ಲಿ  ಬಿಜೆಪಿ ಭಿನ್ನಮತದಿಂದ ಕಾರ್‍ಯಕರ್ತರಷ್ಟೇ ಅಲ್ಲ , ಸಚಿವರೂ ಮೂಲೆಗುಂಪು...
ಹುಣಸೂರಿನಲ್ಲಿ ಬುಧವಾರ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನಾನಾ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡುತ್ತಿರುವ ಕಾರ್‍ಯಕ್ರಮಗಳ ಸಿದ್ಧತೆ ಯಿಂದ ಜಿಲ್ಲಾ ಉಸ್ತುವಾರಿ ಸಚಿವ ರಾಮದಾಸ್ ಅವರೇ ದೂರ ಉಳಿದಿದ್ದಾರೆ. ಇದು ಪಕ್ಷದಲ್ಲಿ  ಗುಪ್ತ ಗಾಮಿನಿಯಂತಿರುವ ಭಿನ್ನಮತಕ್ಕೆ ಪುಷ್ಟಿ ನೀಡಿದೆ.
ಇನ್ನು ವರ್ಗಾವಣೆ ಮಾಸವೆಂದು ಸರಕಾರವೇ ಘೋಷಿಸಿ ರುವುದರಿಂದ ತಮ್ಮ ಕಡೆಯವರ ವರ್ಗಾ ವಣೆ ಮೂಲಕ ಒಂದಿಷ್ಟು ಪ್ರತಿಷ್ಠೆ ಹೆಚ್ಚಿಸಿಕೊಳ್ಳಲು ಮುಂದಾದ ಕಾರ್‍ಯಕರ್ತರಿಗೆ ಮಾತ್ರ ಅತ್ತ ಸಚಿವರ ಶಿಫಾರಸು ಇಲ್ಲ, ಶಾಸಕರ ದರ್ಶನವೇ ಇಲ್ಲ ಎನ್ನುವಂಥ ಬೇಸರದ ಸ್ಥಿತಿ.
ಸಚಿವರ ಮನೆಗೆ ತೆರಳಿದರೆ, ಬೆಂಗಳೂರಿಗೆ ಬಂದು ಪತ್ರ ತೆಗೆದುಕೊಂಡು ಹೋಗಿ ಎಂಬ ಸಿದ್ಧ ಉತ್ತರ. ಪಕ್ಷದಲ್ಲಿನ ಮುಖ್ಯಮಂತ್ರಿ ಹಾಗೂ ಎದುರಾಳಿ ಬಣದ ನಡುವೆ ನಡೆದಿರುವ ಮುಸುಕಿನ ಗುದ್ದಾಟದಿಂದ ಸಚಿವರ ಪತ್ರದಿಂದ ಏನಾದರೂ ಕೆಲಸವಾದೀತೇ ಎಂಬ ಅನುಮಾನ. ತಮ್ಮದೇ  ಸರಕಾರ ಬಂತು ಎಂದು ಬೀಗಿದ ಕಾರ್‍ಯಕರ್ತರು, ಮುಖಂಡರು ಈ ರಾಜ ಕೀಯ ಹೊಯ್ದಾಟದಿಂದ ಅಡಕತ್ತರಿಯಲ್ಲಿ ಸಿಲುಕಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ