ಗ್ರಾ.ಪಂ. ಆಡಳಿತ ಚುಕ್ಕಾಣಿಗೆ ಕಾಂಗ್ರೆಸ್, ಬಿಜೆಪಿ ಜಿದ್ದಾಜಿದ್ದಿ

ಫಾಲಲೋಚನ ಆರಾಧ್ಯ ಚಾಮರಾಜನಗರ
ಜಿಲ್ಲೆಯಲ್ಲಿ ಗ್ರಾಮ ಪಂಚಾಯಿತಿಗಳ ಚುಕ್ಕಾಣಿ ಹಿಡಿಯಲು ಕಾಂಗ್ರೆಸ್ ಹಾಗೂ ಬಿಜೆಪಿ ಮಧ್ಯೆ ತೀವ್ರ ಪೈಪೋಟಿ ನಡೆದಿದ್ದು, ನೆರೆ ರಾಜ್ಯಗಳಿಗೆ ಪ್ರವಾಸದ ನೆಪದಲ್ಲಿ ಸದಸ್ಯರನ್ನು ಹೈಜಾಕ್ ಮಾಡಲಾಗಿದೆ.
ಈಗ ಮೇಲ್ಮನೆ ಚುನಾವಣೆ ಕಾವೇರುತ್ತಿದ್ದು, ಇದರೊಂದಿಗೆ ಗ್ರಾಮ ಮಟ್ಟದಲ್ಲಿ ಗ್ರಾ.ಪಂ. ಅಧ್ಯಕ್ಷ-ಉಪಾಧ್ಯಕ್ಷ ಗಾದಿಯನ್ನು ಹಿಡಿಯಲು ಕಾಂಗ್ರೆಸ್, ಬಿಜೆಪಿ ಹಾಗೂ ಜಾ.ದಳ ಹಲವು ಬಗೆಯ ತಂತ್ರಗಳನ್ನು ರೂಪಿಸುತ್ತಿವೆ. ಈ ಪೈಕಿ ಸದಸ್ಯ ರನ್ನು ವಾರಗಟ್ಟಲೆ ಪ್ಯಾಕೇಜ್ ಟೂರ್ ಕರೆದೊಯ್ದಿರುವುದೇ ಹೆಚ್ಚು.
ಹಲವು ಗ್ರಾ.ಪಂ. ಸದಸ್ಯರು ಈಗ ತಮಿಳುನಾಡು, ಕೇರಳ, ದಿಲ್ಲಿ ಸೇರಿದಂತೆ ವಿವಿಧೆಡೆ ಪ್ರವಾಸದ ಮಜಾ ಅನುಭವಿಸು ತ್ತಿದ್ದಾರೆ. ತಮ್ಮ ತಮ್ಮ ಗ್ರಾ.ಪಂ. ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನದ ಚುನಾವಣೆಯವರೆಗೂ ಇವರು ಇತ್ತ ಕಾಲಿಡರು. ಬಿಟ್ಟಿ ಪ್ರವಾಸದೊಂದಿಗೆ ಕೇಳಿದ್ದೆಲ್ಲವೂ ಉಚಿತ.
೨೦ ದಿನದಿಂದ ಕಾಣೆ: ಪುಣಜೂರು ಗ್ರಾಮ ಪಂಚಾ ಯಿತಿಯ ೧೦ ಮಂದಿ ಸದಸ್ಯರು ೨೦ ದಿನದಿಂದ ಕಾಣೆ ಯಾಗಿದ್ದಾರೆ. ಇವರೆಲ್ಲರೂ ಎಲ್ಲಿದ್ದಾರೆ ಎಂಬುದು ಕೆಲವರಿಗಷ್ಟೇ ಗೊತ್ತು. ಇವರನ್ನು ಕಾಂಗ್ರೆಸ್ ಕಡೆ ಯವರು ಪ್ರವಾಸ ಕರೆದೊಯ್ದಿದ್ದಾರೆ ಎನ್ನಲಾಗುತ್ತಿದೆ. ಈ ಪಂಚಾಯಿತಿಯಲ್ಲಿ ೧೦ ಬಿಜೆಪಿ ಹಾಗೂ ೭ ಕಾಂಗ್ರೆಸ್ ಬೆಂಬಲಿತರು ಆಯ್ಕೆಯಾಗಿದ್ದರು. ಹೀಗಾಗಿ ಇಬ್ಬರು ಬಿಜೆಪಿಯವರಿಗೆ ಆಮಿಷವೊಡ್ಡಿ ತಮ್ಮ ಬೆಂಬಲಿಗ ಸದಸ್ಯರನ್ನೂ ಸೇರಿದಂತೆ ತಮಿಳುನಾಡಿನೆಡೆಗೆ ಪ್ರವಾಸ ಕರೆ ದೊಯ್ಯಲಾಗಿದೆ ಎಂದು ಹೇಳಲಾಗು ತ್ತಿದೆ. ಇಲ್ಲಿ ಜೂ.೨೪ ರಂದು ಚುನಾವಣೆ. ಅಲ್ಲಿಯ ವರೆಗೂ ಈ ಸದಸ್ಯ ರಿಗೆ ಪ್ರವಾಸದ ಮಜಾ. ಕೈ ತುಂಬಾ ರೊಕ್ಕ ಗ್ಯಾರಂಟಿ ಎನ್ನಲಾಗುತ್ತಿದೆ.
ಒಬ್ಬರಿಂದ ಎಚ್ಚೆತ್ತು ಕೊಂಡರು: ನಂಜೇ ದೇವನಪುರ  ಗ್ರಾ.ಪಂ. ದ್ದು ಇನ್ನೂ ವಿಚಿತ್ರ. ಇಲ್ಲಿ ಬಿಜೆಪಿ ಬೆಂಬಲಿತರು ೯ ಹಾಗೂ ಕಾಂಗ್ರೆಸ್‌ನ ೮ ಮಂದಿ ಗೆದ್ದಿದ್ದರು. ಇದರಿಂದ ಸಮಬಲ ಸಾಧಿಸಲು ಬಿಜೆಪಿ ಪಾಳಯದಿಂದ ಒಬ್ಬ ಸದಸ್ಯರನ್ನು ಕಾಂಗ್ರೆಸ್ ಕಡೆಯವರು ಖರೀದಿಸಿ ಪ್ರವಾಸಕ್ಕೂ ಕರೆದೊಯ್ದರು. ಇದರಿಂದ ಎಚ್ಚೆತ್ತ ಬಿಜೆಪಿ ಯವರು ಉಳಿದ ೮ ಮಂದಿಯನ್ನು ಮಾರನೇ ದಿನವೇ ಪ್ರವಾಸಿ ತಾಣವೊಂದಕ್ಕೆ ಪ್ಯಾಕೇಜ್ ಟೂರ್ ಹೊರಡಿಸಿ ದರು. ಈಗ ಉಭಯ ಕಡೆಗಳಲ್ಲೂ ಸಮಬಲವಿದೆ. ಯಾರನ್ನು ಯಾರು ಸೆಳೆಯುತ್ತಾರೆ ಎಂಬುದು ನಿಗೂಢ. ಒಟ್ಟಾರೆ ಹೆಚ್ಚು ಹಣ ಬಿಚ್ಚಿದವರ ಕಡೆ.
ಮೂವರು ಒಗ್ಗೂಡಿ ಟೂರ್: ಕೊಳ್ಳೇಗಾಲ ತಾಲೂಕಿ ನಲ್ಲಿ ಟೂರ್ ಭರಾಟೆ ಇನ್ನೂ ಜೋರು. ಚಾ.ನಗರದಲ್ಲಿ ಎರಡು ಪಕ್ಷಗಳ ಮಧ್ಯೆ ಹೋರಾಟ ಏರ್ಪಟಿದ್ದರೆ, ತಾಲೂಕಿನ ಮಧುವನಹಳ್ಳಿ ಗ್ರಾ.ಪಂ.ನಲ್ಲಿ ಒಂದು ಪಕ್ಷವನ್ನು ಮಟ್ಟ ಹಾಕಲು ಇತರೆ ಮೂರು ಪಕ್ಷಗಳ ಬೆಂಬಲಿತರು ಒಗ್ಗೂಡಿದ್ದಾರೆ. ಆ ಮೂರು ಪಕ್ಷದ ಸದಸ್ಯರು ಸೇರಿ ನಿಗೂಢ ಸ್ಥಳವೊಂದರಲ್ಲಿ ಅಧ್ಯಕ್ಷ- ಉಪಾಧ್ಯಕ್ಷ ಚುನಾವಣೆಯ ಚರ್ಚೆಯಲ್ಲಿ ಮಗ್ನರಾಗಿ ದ್ದಾರೆ. ಇಂಥ ಜಾಲಿ ಟೂರ್ ಸಂಗಾತಿಗಳು ಇನ್ನು ಸಾಕಷ್ಟಿವೆ. ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆ ಸಮೀಪಿಸು ತ್ತಿದ್ದಂತೆ ಇಂಥವು ಇನ್ನೂ ಹೆಚ್ಚಾಗಲಿವೆ. ಕಾಂಚಾಣವೂ ಭರ್ಜರಿಯಾಗಿ ನರ್ತಿಸಲಿದೆ.
ಪ್ರತಿಷ್ಠೆ ಹಾಗೂ ಯೋಜನೆ: ಈ ಮೊದಲು ಸರಕಾರದ ಬಲಾಬಲ ಪ್ರದರ್ಶನ, ನಗರಪಾಲಿಕೆ, ನಗರಸಭೆಯಲ್ಲಿ ಇಂಥ ಪ್ರಹಸನ ನಡೆಯುತ್ತಿತ್ತು. ಇದೀಗ ಗ್ರಾ.ಪಂ. ಮಟ್ಟಕ್ಕೂ ಇದು ಕಾಲಿಟ್ಟಿದೆ. ಪಕ್ಷಗಳ ಪ್ರತಿಷ್ಠೆ ಹಾಗೂ ಈಚೆಗೆ ಗ್ರಾ.ಪಂ.ಗೆ ವಿವಿಧ ಯೋಜನೆಗಳಿಂದ ಹರಿದು ಬರುತ್ತಿರುವ ಅನುದಾನ ಇದಕ್ಕೆ ಕಾರಣ.
ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕೋಟಿಗಟ್ಟಲೆ ಹಣಕ್ಕೆ ಕ್ರಿಯಾಯೋಜನೆ ತಯಾರಿಸ ಬಹುದು. ಹಾಗೆಂದು ಸದಸ್ಯರು ಗ್ರಾಮದ ಅಭಿವೃದ್ಧಿ ಗೆಂದು ಇಷ್ಟು ಪೈಪೋಟಿ ನಡೆಸುತ್ತಿಲ್ಲ. ಯೋಜನೆಯ ಕಾಮಗಾರಿಯಿಂದ ದಕ್ಕಬಹುದಾದ ಕಮಿಷನ್ ಮೇಲೆಯೇ ಬಹುತೇಕರ ಕಣ್ಣು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ