ಹಣದ ಮೋಹಕ್ಕೆ ಸಿಲುಕಿ ಕೊನೆಯುಸಿರೆಳೆದ

ಕುಂದೂರು ಉಮೇಶಭಟ್ಟ ಮೈಸೂರು
ಮಧ್ಯಮವರ್ಗದ ಯುವಕನೊಬ್ಬ ಐಷಾರಾಮಿ ಬದುಕಿಗೆ ಜೋತು ಬಿದ್ದು ಬಲಿಯಾದ ದುರಂತಗಾಥೆಯಿದು.
ನಾಲ್ಕು ವರ್ಷದ ಹಿಂದೆಯಷ್ಟೇ ಪರಿಚಯವಾದ ಸ್ನೇಹಿತನ ಸಹವಾಸದಿಂದ ನಾನೂ ಶ್ರೀಮಂತನಾಗಬಹುದು ಎಂದುಕೊಂಡು ಆತನ ಚಟುವಟಿಕೆಗಳಿಗೆ ಬೆನ್ನುಲಬಾಗಿ ನಿಂತು ಆತನಿಂದಲೇ ಅಮಾನುಷವಾಗಿ ಅಂತ್ಯ ಕಂಡಿದ್ದಾನೆ ಮದನಕುಮಾರ್.
ಜಯಚಾಮರಾಜೇಂದ್ರ ಎಂಜಿನಿಯರಿಂಗ್ ಕಾಲೇಜಿನ ಕಚೇರಿ ಸಿಬ್ಬಂದಿ ಕುರಿಮಂಡಿ ನಿವಾಸಿ ಪ್ರಭುಸ್ವಾಮಿ ಅವರ ಮೂವರು ಮಕ್ಕಳಲ್ಲಿ ಮದನಕುಮಾರ್ ಹಿರಿಯ. ರಾಜೇಂದ್ರನಗರ ಇನ್‌ಸ್ಟಿಟೂಟ್ ಆಫ್ ಎಜುಕೇಶನ್‌ನಲ್ಲಿ ಎಸ್‌ಎಸ್‌ಎಲ್‌ಸಿ ಮುಗಿಸಿದ. ಅಲ್ಲಿಂದ ಉತ್ತಮ ಶಿಕ್ಷಣ ಸಿಗಲೆಂದೇ ಸೇಂಟ್‌ಫಿಲೋಮಿನಾ ಕಾಲೇಜಿಗೆ ಸೇರಿಸಿದರು. ಅಲ್ಲಿಯೇ ಪಿಯುಸಿ ಮುಗಿಸಿ ಬಿಬಿಎಂಗೂ ಸೇರಿದ. ಆಗ ಪರಿಚಯ ವಾದವನು ಗದಗ ಮೂಲದ ಮಹಾಂತೇಶ್. ಈತನೂ ಇಲ್ಲಿಯೇ ಬಿಕಾಂ ವಿದ್ಯಾರ್ಥಿ. ಆಗಲೇ ಇವರ ಸ್ನೇಹ ಭಿನ್ನ ಮಾರ್ಗಗಳನ್ನು ತುಳಿದಿತ್ತು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ