ತಗ್ಗಿಗೆ ನುಗ್ಗಿದ ನೀರು: ಉಕ್ಕಿ ಹರಿದ ರಸ್ತೆಗಳು !

ಮೈಸೂರು ನಗರ
ಮುಂಗಾರು ಆರಂಭದ ನಂತರ ಮಳೆ ಕೊರತೆ ಎದು ರಿಸಿದ್ದ ನಗರದಲ್ಲಿ ಗುರುವಾರ ಧಾರಾಕಾರ ಮಳೆ.
ನಡು ಮಧ್ಯಾಹ್ನ ಮೋಡಕವಿದ ವಾತಾವರಣ. ೨ ಗಂಟೆ ನಂತರ ಧಾರಾಕಾರ ಮಳೆ. ಕೆಲ ನಿಮಿಷ ಬಿಡುವಿನ ಹೊರತು ನಿರಂತರ ಎರಡೂವರೆ ತಾಸು ಸುರಿಯಿತು. ನಂತರವೂ ರಾತ್ರಿವರೆಗೆ ಆಗಸ ಜಿಟಿಜಿಟಿ ಜಿನುಗುತ್ತಲೇ ಇತ್ತು.
ಕೆಲವೆಡೆ ತಗ್ಗು ಪ್ರದೇಶಗಳಲ್ಲಿ ಮನೆಗಳಿಗೆ ನೀರು ನುಗ್ಗಿ ಜನ ಜೀವನ ಅಸ್ತವ್ಯಸ್ತವಾಯಿತಾದರೂ,ಹೆಚ್ಚಿನ ಅನಾಹುತ ವರದಿಯಾಗಿಲ್ಲ. ಇನ್ನು ಕೆಲವೆಡೆ ಒಳ ಚರಂಡಿ, ಮಳೆ ನೀರು ಚರಂಡಿ ವ್ಯವಸ್ಥೆ ಹದಗೆಟ್ಟಿದ್ದ ರಿಂದ ರಸ್ತೆಗಳು ನದಿಗಳೋಪಾದಿ ಉಕ್ಕಿ ಹರಿದು ಸಂಚಾರ ಅಸ್ತವ್ಯಸ್ತವಾಗಿತ್ತು. ನಗರದ ಹೃದಯಭಾಗ ಕೆ.ಆರ್.ವೃತ್ತದಲ್ಲಿಯೇ ಮೊಣಕಾಲು ವರೆಗೆ ನೀರು ನಿಂತಿತ್ತು. ರಾಮಾನುಜ ರಸ್ತೆ ಮತ್ತಿತರ ಕಡೆಯೂ ಇದೇ ಸ್ಥಿತಿ. ಪಾದಚಾರಿಗಳು, ದ್ವಿಚಕ್ರ ವಾಹನ ಸವಾ ರರು ಪರದಾಡಿದರು. ಸಂಜೆ ಶಾಲೆಯಿಂದ ಮನೆಗೆ ಹೊರಟ ಮಕ್ಕಳು ತೊಯ್ದು ತೊಪ್ಪೆಯಾದರು.
ಕುವೆಂಪು ನಗರ ಅಕ್ಷಯ ಭಂಡಾರ್ ಸಮೀಪ ರಸ್ತೆ ಪಕ್ಕ ಹೂತು ನಿಂತಿದ್ದ ಕಾರು ಮತ್ತು ಜೀಪ್‌ಗಳನ್ನು ನಗರ ಪಾಲಿಕೆಯ `ಧನುಷ್' ತಂಡ ಎತ್ತಿತು.
ಗ್ರಾಮಾಂತರದಲ್ಲಿ: ಹುಣಸೂರು, ಪಿರಿಯಾಪಟ್ಟಣ,ನಂಜನಗೂಡು,ತಿ.ನರಸೀಪುರ,ಎಚ್.ಡಿ.ಕೋಟೆ, ಕೆ.ಆರ್.ನಗರದಲ್ಲೂ ಮಳೆಯಾಗಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ