ಆಸೆಯು ಈಡೇರಿತು, ಗಂಗೋತ್ರಿಗೆ ಬಂದಾಯಿತು

ಚೀ.ಜ.ರಾಜೀವ ಮೈಸೂರು
ಹದಿನೆಂಟು ವರ್ಷದ ಹಿಂದೆ ಪದವಿ ಕಲಿಯಲೆಂದು ಕಾಲೇಜು ಮೆಟ್ಟಿಲು ತುಳಿದ ಯುವತಿಗೆ ಮದುವೆ ಎಂಬ ವ್ಯವಸ್ಥೆ  ಅವರ ಮುಂದಣ ಹೆಜ್ಜೆಯನ್ನು ಹಿಂದಕ್ಕೆ ತಳ್ಳಿತ್ತು.  ಆದರೆ, ಈ ವರ್ಷ ಅವರ ಕನಸಿಗೆ ಗರಿ ಮೂಡಿದೆ.
  ಯರಗನಹಳ್ಳಿ ಗೃಹಿಣಿ  ಭಾಗ್ಯ ಅವರಿಗೆ  ವಯಸ್ಸು ೪೦ ದಾಟಿದರೂ ಗಂಗೋತ್ರಿಗೆ  ಹೋಗಿ ಏನನ್ನಾದರೂ ಕಲಿಯಬೇಕೆಂಬ ಆಸೆ ಈಗ ಕೈಗೂಡಿದೆ. ಮಾನಸ ಗಂಗೋತ್ರಿಯ ಅಂಗಳಕ್ಕೆ ಬಂದು, ಅಲ್ಲಿನ ಪ್ರಾಧ್ಯಾಪಕರ ನೆರವಿನೊಂದಿಗೆ ಕಲಿಯಲಾರಂಭಿಸಿದ್ದಾರೆ. ವ್ಯತ್ಯಾಸ ಅಂದ್ರೆ ಅವರು ಈಗ ಕಲಿಯುತ್ತಿರುವುದು ಪದವಿಯಲ್ಲ. ಬದಲಿಗೆ ಬದುಕಿಗೆ ಬೇಕಾದ  ಕೌಶಲ್ಯ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ