ವಿಕ ವಿಶೇಷ ಮೈಸೂರು
ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಪ್ರವಾಸ, ಅರಣ್ಯ ಸಚಿವ ಸಿ.ಎಚ್.ವಿಜಯಶಂಕರ್ಗೆ ಕಾರ್ಯಕ್ರಮ ಅನುಷ್ಠಾನದ್ದೇ ತ್ರಾಸ...
ಕಳೆದ ತಿಂಗಳು ಕೇರಳ, ಈಗ ಮಾರಿಷಸ್ ಪ್ರವಾಸ ಹೊರಟ ಮುಖ್ಯಮಂತ್ರಿಯಿಂದಾಗಿ ವಿಜಯಶಂಕರ್ ಒಂಬತ್ತು ತಿಂಗಳಿನಿಂದ ಹೇಳುತ್ತಲೇ ಇರುವ `ದೈವಿವನ ಯೋಜನೆ' ಚಾಲನೆಗೆ ಸಿಗುವ ಭಾಗ್ಯವೇ ಕಾಣುತ್ತಿಲ್ಲ !
ಮುಖ್ಯಮಂತ್ರಿಯಿಂದಲೇ ಯೋಜನೆಗೆ ಚಾಲನೆ ಕೊಡಿಸಬೇಕೆಂದು ಹಠಕ್ಕೆ ಬಿದ್ದಿರುವ ವಿಜಯಶಂಕರ್ ಎರಡು ಬಾರಿ ನಿಗದಿ ಮಾಡಿದ್ದ ಮುಹೂರ್ತ ಮತ್ತೆ ಮುಂದೆ ಹೋಗುವ ಲಕ್ಷಣ ಕಾಣುತ್ತಿವೆ. ದೈವಿವನ ನಿರ್ಮಾಣಕ್ಕೆ ಸಂಬಂಧಿಸಿ ಪೂರ್ವಭಾವಿ ಸಭೆ ನಡೆಸಿ ಜುಲೈ ೨೩ರಂದು ಮುಖ್ಯಮಂತ್ರಿ ಶಂಕುಸ್ಥಾಪನೆ ನೆರವೇರಿಸುವರು ಎಂದು ಸಚಿವರು ೧೫ ದಿನದ ಹಿಂದೆಯೇ ಹೇಳಿಕೆ ನೀಡಿದ್ದರು. ಈಗ ಮುಖ್ಯಮಂತ್ರಿಗಳು ಕುಟುಂಬದ ಸಹಿತ ಮಾರಿಷಸ್ ಪ್ರವಾಸಕ್ಕೆ ತೆರಳಿರುವುದರಿಂದ ಅಂದು ನಡೆಯಬೇಕಾಗಿದ್ದ ಕಾರ್ಯಕ್ರಮದ ಸಾಧ್ಯತೆ ಕ್ಷೀಣಿಸಿದೆ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ