ಪಟ ಪಟ ಗಾಳಿಪಟ ಬಾನಗಲ ಚಟಪಟ

ಮೈಸೂರಿನ ವಿದ್ಯಾರಣ್ಯಪುರಂ ಬೂತಾಳೆ ಪಿಚ್‌ನಲ್ಲಿ ಸೋಮವಾರ `ಗಾಳಿಪಟ'ಹಾರಿಸುವ ಸಂಭ್ರಮ. ನಳಂದ ಎಜುಕೇಷನ್ ಸಂಸ್ಥೆಯ ಪ್ರಾಥಮಿಕ, ಪ್ರೌಢಶಾಲೆಯ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಆಷಾಢದ ಗಾಳಿಯಲ್ಲಿ ಬಣ್ಣ ಬಣ್ಣದ ವೈವಿಧ್ಯಮಯ ಪಟಗಳನ್ನು ಹಾರಿಸಿ ಖುಷಿ ಪಟ್ಟರು. ಮಕ್ಕಳ ಖುಷಿಗಾಗಿ ಶಾಲೆಯ ಆಡಳಿತವೇ `ಪಟದ ಹಬ್ಬ'ವನ್ನು ಆಯೋಜಿಸಿತ್ತು. ಮಾಜಿ ಮೇಯರ್ ಮೋದಾಮಣಿ, ಪಾಲಿಕೆ ಸದಸ್ಯ ಮಾ.ವಿ.ರಾಂಪ್ರಸಾದ್, ಸಂಸ್ಥೆ ಕಾರ್‍ಯದರ್ಶಿ ಎಚ್.ಎಚ್. ಸಾವಿತ್ರಿ, ಮುಖ್ಯ ಶಿಕ್ಷಕ ನಟೇಶ್ ಭಾಗವಹಿಸಿ ಮಕ್ಕಳನ್ನು ಪ್ರೋತ್ಸಾಹಿಸಿದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ