ಗಂಗೋತ್ರಿ ಶಾಲೆ ‘ಕೆಲ’ ಮಕ್ಕಳಿಗೆ ನಿತ್ಯ ಶನಿವಾರ !

ಚೀ.ಜ.ರಾಜೀವ ಮೈಸೂರು
ಮಾನಸ ಗಂಗೋತ್ರಿಯ ಅಂಗಳದಲ್ಲಿರುವ  ಈ ಶಾಲೆಯ ಕೆಲವು ಮಕ್ಕಳಿಗೆ ನಿತ್ಯವೂ ಶನಿವಾರ !
ಏಕೆಂದರೆ ಈ ಎಲ್ಲ ಮಕ್ಕಳು ಬೆಳಗ್ಗೆ ೮ರ ಸುಮಾರಿಗೆ ಶಾಲೆಗೆ ಬಂದರೆ, ವಾಪಸ್ ಮನೆಗೆ ಮರಳುವುದು ಸಂಜೆ ೬ರ ಬಳಿಕವೆ. ಹಿಂದಿರುಗುವ ವಿಚಾರದಲ್ಲಿ ಮಾತ್ರ ಶನಿವಾರ ದೊರಕುವ ಅರ್ಧದಿನದ ರಜೆಯ ಮಜೆ ಇಲ್ಲ. 
ಶೈಕ್ಷಣಿಕವಾಗಿ ಹಿಂದುಳಿದ  ಮಕ್ಕಳಿಗೆ  ನೀಡುವ  ಪರಿಹಾರ ಬೋಧನೆ  ಮಾದರಿಯ ತರಗತಿಗಳು, ಫಲಿತಾಂಶವನ್ನು ಸುಧಾರಿಸಲು ಮಕ್ಕಳಿಗೆ ವಿಶೇಷ ತರಗತಿಗಳು ಇಲ್ಲಿ ನಡೆಯುತ್ತವೆಯಾದರೂ, ಬೆಳಗ್ಗೆ ೮ ರಿಂದ ಸಂಜೆ ೬ರವರೆಗೆ ಶಾಲೆಯಲ್ಲಿ ಉಳಿಯುವ ಮಕ್ಕಳಿಗೂ ಇಂಥ ತರಗತಿಗಳಿಗೂ ನೇರ ಸಂಬಂಧವಿರುವುದಿಲ್ಲ.  ಮೇಷ್ಟ್ರು ಸೇರಿ ದಂತೆ ಯಾರು ಏನೇ ಹೇಳಲಿ- ಬಿಡಲಿ ಕೆಲವು ಮಕ್ಕಳು ಶಾಲೆಗೆ ಬಹುಬೇಗ ಬಂದೇ ಬರುತ್ತಾರೆ. ಏನಿದು ಎಂಬ ಅಚ್ಚರಿಯೇ ?, ಇಂಥದ್ದೊಂದು ಕುತೂಹಲದ ಜಾಡು ಹಿಡಿದು ಹೊರಟರೆ, ಸಿಗುವ ಉತ್ತರ ಮೈಸೂರಿನ ಕೂಲಿ ಕಾರ್ಮಿಕ ಕುಟುಂಬಗಳ  ಕಥೆಯನ್ನೇ ತೆರೆದಿಡುತ್ತದೆ. ಅಂದಹಾಗೆ ಶಾಲೆಗೆ ಬಹುಬೇಗ ಬರುವ ಈ ಎಲ್ಲ ಮಕ್ಕಳು ಕೂಲಿ ಕಾರ್ಮಿಕರ ಕುಟುಂಬದವರು.
ಯಾಕೆ ಬೇಗ ಬರುತ್ತಾರೆ
ಮೈಸೂರು ವಿಶ್ವವಿದ್ಯಾನಿಲಯದ ಅಧೀನದಲ್ಲಿ ರುವ ಮಾನಸ ಗಂಗೋತ್ರಿ ಶಿಕ್ಷಣ ಸಂಸ್ಥೆ ನಡೆಸುವ   ಈ ಪ್ರಾಥಮಿಕ ಹಾಗೂ ಪ್ರೌಢ  ಶಾಲೆಗೆ  ಸುತ್ತ ಮುತ್ತಲಿನ ವಸತಿ ಪ್ರದೇಶಗಳಾದ ವಿಜಯಶ್ರೀ ಪುರ, ತೊಣಚಿ ಕೊಪ್ಪಲು, ಜನತಾ ನಗರ, ಪಡುವಾರಹಳ್ಳಿ, ಹಿನಕಲ್, ಬೋಗಾದಿ ಮತ್ತು ಗಂಗೋತ್ರಿ ಲೇ ಔಟ್‌ನ ಮಕ್ಕಳು ಕಲಿಯಲು ಬರುತ್ತಾರೆ. ಶಾಲೆಗೆ ಕೂಗಳತೆಯಲ್ಲಿರುವ ಗಂಗೋತ್ರಿ ಅಧ್ಯಾಪಕರ  ವಸತಿ ಗೃಹಗಳಿಂದ ಯಾವ ಮಕ್ಕಳೂ ಶಾಲೆಗೆ ಬರುವುದಿಲ್ಲ.  ಸಾಮಾನ್ಯವಾಗಿ ಶಾಲೆಗೆ ಬರುವ ಬಹುತೇಕ ಮಕ್ಕಳು ಬಡ ಕುಟುಂಬದ ಹಿನ್ನೆಲೆಯವರು ಮತ್ತು ಶ್ರಮ ಜೀವಿಗಳು.  ಈ ಸಂಗತಿಯೇ ಪರೋಕ್ಷವಾಗಿ ಮಕ್ಕಳು ಬಹುಬೇಗ ಶಾಲೆಗೆ  ಬರುವಂಥ ಸ್ಥಿತಿಗೆ ತಳ್ಳಿದೆ !
‘ಇಲ್ಲೇ ವಿಜಯಶ್ರೀಪುರದಲ್ಲಿ ನನ್ನ  ಮನೆ ಇದೆ. ಅಪ್ಪ ಬೆಳ್ಳಂಬೆಳಗ್ಗೆ ಗಾರೆ ಕೆಲಸಕ್ಕೆಂದು ಕುವೆಂಪು ನಗರದ ಕಡೆ ಹೋಗುತ್ತಾನೆ. ಅಮ್ಮ ಎದ್ದ ತಕ್ಷಣ ಮನೆಗೆಲಸ ಮಾಡಲು ಹೋಗುತ್ತಾಳೆ. ಉಳಿಯು ವುದು ನಾನು ಮತ್ತು ನನ್ನ ತಮ್ಮ. ಮನೆಯಲ್ಲಿ ಇಬ್ಬರೇ ಉಳಿದರೆ ಜಗಳ ಆಡುತ್ತೇವೆ ಎಂದು, ತಾವು ಕೆಲಸಕ್ಕೆ ಹೋಗುವಾಗಲೇ ನಮ್ಮನ್ನೂ  ಇಲ್ಲಿಗೆ ತಂದು ಬಿಡುತ್ತಾರೆ. ಹಾಗಾಗಿ ದಿನಾ(ನಿತ್ಯ) ಬೆಳಗ್ಗೆನೇ ಶಾಲೆಗೆ ಬರುತ್ತೇನೆ’ ಎನ್ನುತ್ತಾನೆ ಶಾಲೆಯ ವಿದ್ಯಾರ್ಥಿ ಸೋಮು(ಹೆಸರು ಬದಲಿಸ ಲಾಗಿದೆ). ನಾನೂ ಬೆಳಗ್ಗೆನೇ ಶಾಲೆಗೆ ಬರುತ್ತೇನೆ. ಮೊದಲೆಲ್ಲಾ  ಅಪ್ಪ ಒಬ್ಬರೇ ತಳ್ಳೋ ಗಾಡಿಯಲ್ಲಿ  ವ್ಯಾಪಾರ ಮಾಡಲು ಹೋಗುತ್ತಿದ್ದರು.  ವರ್ಷ ದಿಂದ ಅಮ್ಮನೂ  ಅವರ ಜತೆ  ಹೋಗುತ್ತಾರೆ.  ಮನೆಯಲ್ಲಿ ಯಾರೂ ಇರುವುದಿಲ್ಲ. ಹಾಗಾಗಿ ಬಂದು ಬಿಡುತ್ತೇವೆ’ ಎನ್ನುತ್ತಾನೆ  ಜನತಾ ನಗರದಿಂದ ಬರುವ  ರಾಜೇಶ್(ಬೇರೆ ಹೆಸರು). ಹೀಗೆ ಸುಮಾರು ೫ ರಿಂದ ೧೦ ಮಕ್ಕಳು ಶಾಲೆಗೆ ಬಹುಬೇಗನೇ ಬರುತ್ತಾರೆ.
‘ನಮ್ಮ ಶಾಲೆಗೆ ಮಕ್ಕಳನ್ನು ಕಳುಹಿಸುವ ಪಾಲಕರ ಮನೆಯ ಚಿತ್ರಣವೇ ಬದಲಾಗುತ್ತಿದೆ. ತರಕಾರಿ- ಸೊಪ್ಪು ಮಾರಾಟ ಮಾಡೋರು, ಗಾರೆ ಕೆಲಸಕ್ಕೆ ಹೋಗುವವರೇ ಹೆಚ್ಚು. ಇತ್ತೀಚಿನ ವರ್ಷಗಳಲ್ಲಿ ಅಮ್ಮಂದಿರು ಮನೆಯಲ್ಲಿ ಇರು ವುದಿಲ್ಲ. ಹಾಗಾಗಿ, ಕೆಲವು ಮಕ್ಕಳು ಬಹುಬೇಗ ಬರುತ್ತಾರೆ. ಆದರೆ, ಈ ಸಮಸ್ಯೆ ಪ್ರಾಥಮಿಕ ಶಾಲೆಯಲ್ಲಿ ಕಡಿಮೆ ಎನ್ನುತ್ತಾರೆ’  ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಕೆ. ಎಸ್. ಶಾಂತಲ.
ಪ್ರೌಢಶಾಲೆಯಲ್ಲಿ ಹೆಚ್ಚು
ಶಾಲೆಗೆ ಬಹುಬೇಗ ಬರುವವರಲ್ಲಿ ಪ್ರೌಢ ಶಾಲೆ ಮಕ್ಕಳೇ ಹೆಚ್ಚು. ನಮ್ಮಲ್ಲಿ ಪರಿಹಾರ ಬೋಧನೆ ಮಾದರಿ ಒಂದಿಷ್ಟು ತರಗತಿ ನಡೆಸುತ್ತೇವೆ. ಶೈಕ್ಷಣಿಕ ವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ವಿಶೇಷ ತರಗತಿ ನಡೆಸುತ್ತೇವೆ. ಆ ಕಾರಣಕ್ಕೆ ಬಹಳಷ್ಟು ವಿದ್ಯಾರ್ಥಿ ಗಳು ಶಾಲೆ ಆರಂಭವಾಗುವುದಕ್ಕಿಂತ ಮುಂಚಿತ ವಾಗಿಯೇ ಬರುತ್ತಾರೆ.  ಇವರಲ್ಲದೆ, ಬೆಳಗ್ಗೆಯೇ ಕೂಲಿಗೆ ತೆರಳುವ ಕೆಲವು ಪಾಲಕರು ಕೂಡ ಮಕ್ಕಳನ್ನು ಶಾಲೆಗೆ ತಂದು ಬಿಟ್ಟು ಹೋಗುತ್ತಾರೆ. ಅವರ ಸಂಖ್ಯೆ ಕಡಿಮೆ ಎನ್ನುತ್ತಾರೆ  ಪ್ರೌಢಶಾಲೆಯ ಮುಖ್ಯೋ ಪಾಧ್ಯಾಯ ಅಲ್ಲದಾಸಯ್ಯ. ‘ತರಗತಿ ಆರಂಭವಾಗು ವುದಕ್ಕೂ ಮುನ್ನವೇ ಶಾಲೆಗೆ ಬರುವ ಮಕ್ಕಳ ಬಗ್ಗೆ ನಿಗಾ ಇಡುವಂತೆ ಸೂಚಿಸಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ರಘುನಂದನ್ ಪತ್ರಿಕೆಗೆ ತಿಳಿಸಿದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ