ಯುನಾನಿ ಚಿಕಿತ್ಸೆಗೆ ಜಿಂಕೆ ಬೇಟೆ: ಕೋಟ್ಯಾಂತರ ರೂ. ದಂಧೆ

ಕುಂದೂರು ಉಮೇಶಭಟ್ಟ, ಮೈಸೂರು
ಇದು ಚಿತ್ರನಟ ಸಲ್ಮಾನ್‌ಖಾನ್ ಕೃಷ್ಣಮೃಗ ಬೇಟೆ ಯಾಡಿ ಸಿಕ್ಕಿ ಬಿದ್ದ ಪ್ರಕರಣದ ಇನ್ನೊಂದು ಮುಖ. ನಡೆದಿರುವುದು ಚಾಮರಾಜನಗರ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ. ಇಲ್ಲಿ ವರ್ಷಗಳಿಂದ ನಡೆಯುತ್ತಿದ್ದುದು ಮೇಲ್ನೋಟಕ್ಕೆ ಮೋಜಿನ ಸಫಾರಿ. ಆದರೆ ಒಳಸುಳಿ ಯಲ್ಲಿ ಜಿಂಕೆ ಬೇಟೆ. ಇದರ ಹಿಂದೆ ದುಬೈ, ಸೌದಿ ಅರೇಬಿಯಾ ಸೇರಿದಂತೆ ಪ್ರಮುಖ ದೇಶಗಳ ಸಂಬಂಧ.
ಯುನಾನಿ ಚಿಕಿತ್ಸೆಗೆಂದೇ ಕರ್ನಾಟಕದ ವನ್ಯಧಾಮ ಗಳಲ್ಲಿ ಜಿಂಕೆ ಬೇಟೆಯಾಡಿ ವಿದೇಶಗಳಿಗೆ ಸರಬರಾಜು ಮಾಡಿ ಕೋಟ್ಯಂತರ ಹಣ ಮಾಡುತ್ತಿದ್ದ ಅಂತಾ ರಾಷ್ಟ್ರೀಯ ಜಾಲವೊಂದನ್ನು ಚಾಮರಾಜನಗರ ಜಿಲ್ಲೆ ಯಲ್ಲಿ ಬೇಧಿಸಲಾಗಿದೆ. ಅದೂ ಅರಣ್ಯ ಇಲಾಖೆ ಇತಿಹಾಸ ದಲ್ಲೇ ಮೊದಲ ಬಾರಿ ಮೊಬೈಲ್ ಟ್ರ್ಯಾಕರ್ ತಂತ್ರ ಜ್ಞಾನ ಬಳಸಿ ಪ್ರಾಣಿ ಹಂತಕರನ್ನು ಪತ್ತೆ ಹಚ್ಚಿರು ವುದು ವಿಶೇಷ. ಇದಕ್ಕೆ ಸಾಥ್ ನೀಡಿದ್ದು ಪೊಲೀಸ್ ಇಲಾಖೆ.
ಜಿಂಕೆ ಬೇಟೆಯಾಡಿದ ಮೂವರು ಈಗ ಸಿಕ್ಕಿ ಬಿದ್ದಿದ್ದಾರೆ. ಜಿಂಕೆ ಬೇಟೆ ಹಾಗೂ ಅದರ ಬಳಕೆಯ ಮಾಸ್ಟರ್ ಮೈಂಡ್ ದುಬೈಗೆ ಪರಾರಿಯಾಗಿದ್ದಾನೆ.
ಬೆಂಗಳೂರಿನ ಫ್ರೇಜರ್ ಟೌನ್‌ನಲ್ಲಿರುವ ಮುಸ್ತಾಫ ಯುನಾನಿಯ ಡಾ.ಹಕೀಂ ಸೈಯದ್ ಅಮ್ರಾನ್ ಅಹಮದ್ ಅವರ ಪುತ್ರ ಇಮ್ರಾನ್ ಜಿಂಕೆ ಬೇಟೆಯಾಡಿದ ಪ್ರಮುಖ ಆರೋಪಿ. ಈತ ತಲೆಮರೆಸಿ ಕೊಂಡಿದ್ದಾನೆ. ಈತನೊಂದಿಗೆ ಇದ್ದ ಚಿಕ್ಕಮಗಳೂರಿನ ಪ್ಲಾಂಟರ್ ಶೋಯೆಬ್, ಮೈಸೂರಿನ ಡರ್ಟ್ ಟ್ರಾಕರ್(ಬೈಕ್) ತನ್ವೀರ್ ಹಾಗೂ ಸ್ಥಳೀಯ ಕಾಲೇಜೊಂದರಲ್ಲಿ ಬಿಬಿಎಂ ವಿದ್ಯಾರ್ಥಿ ನವಾಜ್ ಬಂಧಿತರು.
ಕೊಂದು ಪರಾರಿ: ಘಟನೆ ನಡೆದಿದ್ದು ಜೂನ್ ೨೫ ರಂದು. ಚಾಮರಾಜನಗರ ಜಿಲ್ಲೆಯ ಕ್ಯಾತೇದೇವರ ಗುಡಿ (ಕೆ.ಗುಡಿ) ಪ್ರಮುಖ ವನ್ಯಧಾಮ. ಉನ್ನತಾಧಿಕಾರಿ ಗಳ ಅನುಮತಿಯಿಂದ ನಾಲ್ವರ ತಂಡ ಅಲ್ಲಿಗೆ ಆಗ ಮಿಸಿದೆ. ಕೆ.ಗುಡಿಯಿಂದ ಬೂದಿಪಡಗ ಮಾರ್ಗವಾಗಿ ಸಂಜೆ ಹೊರಟ ತಂಡ ಗುಂಡಿನಿಂದ ಜಿಂಕೆಯೊಂದನ್ನು ಕೊಂದಿದೆ. ಕೊಂದ ಜಿಂಕೆಯನ್ನು ಕಾಡಿನ ರಸ್ತೆಯಲ್ಲಿ ಹಾಕಿದ ತಂಡ ಸ್ವಲ್ಪ ಹೊತ್ತಿನ ನಂತರ ಅಲ್ಲಿಗೆ ಬಂದಿದೆ. ಜಿಂಕೆಯನ್ನು ಕಾರಿನ ಡಿಕ್ಕಿಯಲ್ಲಿ ಹಾಕಿಕೊಂಡು ಅಲ್ಲಿಂದ ಹೊರಟಿದೆ. ಇದೇ ವೇಳೆ ಅರಣ್ಯ ಇಲಾಖೆ ಅಧಿಕಾರಿಗಳ ತಂಡ ಅದೇ ಮಾರ್ಗದಲ್ಲಿ ಬಂದಿದೆ. ಕಾರು ಜೋರಾಗಿ ಓಡಿದ್ದನ್ನು ಕಂಡು ಎಚ್ಚೆತ್ತು ಕೊಂಡ ಅಧಿಕಾರಿಗಳು ಬೂದಿಪಡಗ ಮಾರ್ಗದಲ್ಲಿ ತೆರಳಿದ್ದಾರೆ. ಅಷ್ಟರಲ್ಲಿ ಕಾರೊಂದು ಅರಣ್ಯ ಚೆಕ್‌ಪೋಸ್ಟ್‌ನಿಂದ ಪರಾರಿಯಾಗಿ ರುವುದು ಕಂಡಿದೆ. ಕೂಡಲೇ ಅರಣ್ಯ ಇಲಾಖೆಯವರು ಕಾರನ್ನು ಬೆನ್ನಟ್ಟಿ ದರೂ ಪ್ರಯೋಜನವಾಗಲೇ ಇಲ್ಲ. ಕಾರಿನ ಸಂಖ್ಯೆ (ಕೆಎ೧೮-ಎನ್೬೩೩) ಆಧರಿಸಿ ತಪಾಸಣೆ ನಡೆಸಿದಾಗ ಮೊದಲು ಸಿಕ್ಕ ಮಾಹಿತಿ ಚಿಕ್ಕ ಮಗಳೂರಿನ ಪ್ಲಾಂಟರ್ ಶೋಯೆಬ್‌ನದ್ದು. ಆನಂತರ ತನಿಖೆ ಮುಂದುವರೆಸಿದಾಗ ಅಲ್ಪಸ್ವಲ್ಪ ಮಾಹಿತಿ ದೊರೆತರೂ ಅದು ಸಾಕ್ಷಿ ದೃಷ್ಟಿಯಿಂದ ಪರಿಪೂರ್ಣವಾಗಲೇ ಇಲ್ಲ.
ಮೊಬೈಲ್ ಟ್ರ್ಯಾಕರ್: ಪ್ರಕರಣ ಬಯಲಾದಾಗ ಚಾಮರಾಜನಗರ ಡಿಸಿಎಫ್ ಆಗಿದ್ದು ಈಗ ಬೆಂಗ ಳೂರಿಗೆ ವಗಾರ್ವಣೆಗೊಂಡಿರುವ ದಕ್ಷ ಅಧಿಕಾರಿ ಬಿಸ್ವಜೀತ್ ಮಿಶ್ರ, ಜಿಂಕೆ ಬೇಟೆಗಾರರ ಹಿಂದೆ ದೊಡ್ಡ ಜಾಲವೇ ಇರುವ ಅನುಮಾನದೊಂದಿಗೆ ಸಂಪರ್ಕಿ ಸಿದ್ದು ಪರಿಚಿತ ಮೈಸೂರು ಪೊಲೀಸ್ ಅಧಿಕಾರಿಯನ್ನು. ಆಗ ದಕ್ಷಿಣ ವಲಯ ಐಜಿಪಿ ಈ ಪ್ರಕರಣದ ತನಿಖೆಗೆ ನಿಯೋಜಿಸಿದ್ದು ವಿಶೇಷ ತಂಡದ ಡಿವೈಎಸ್ಪಿ ಚನ್ನಬಸವಣ್ಣ ಅವರನ್ನು. ಮಿಶ್ರ ಅವರೊಂದಿಗೆ ಚರ್ಚಿಸಿದ ಚನ್ನಬಸವಣ್ಣ ಹಾಗೂ ಅರಣ್ಯ ಇಲಾಖೆ ತಂಡಕ್ಕೆ ಹೊಳೆದಿದ್ದು ಮೊಬೈಲ್ ಬಳಕೆ.
ಆ ದಿನ(ಜೂನ್ ೨೫) ಕೆ.ಗುಡಿ, ಚಾಮರಾಜನಗರ ಹಾಗೂ ಯಳಂದೂರು ಭಾಗದಲ್ಲಿ ಹೆಚ್ಚು ಬಾರಿ ಬಳಕೆಯಾದ ಮೊಬೈಲ್ ಸಂಖ್ಯೆಯನ್ನು ಟ್ರ್ಯಾಕರ್ ಬಳಸಿ ಪತ್ತೆ ಹಚ್ಚುವ ಯೋಚನೆ ಹೊಳೆಯಿತು. ಅದರಂತೆ ಸಂಸ್ಥೆಯವರಿಗೆ ಕೇಳಿದಾಗ ಸಿಕ್ಕಿ ಬಿದ್ದಿದ್ದು ಪ್ರಮುಖ ಆರೋಪಿ ಬೆಂಗಳೂರಿನ ಸಲ್ಮಾನ್. ಜೂನ್ ೨೫ರಂದು ೨ ಗಂಟೆ ಅವಧಿಯಲ್ಲಿ ನೂರಾರು ಕರೆಗಳನ್ನು ಈತ ಮಾಡಿದ್ದ. ಆತನ ನಂಬರ್ ಆಧರಿಸಿ ತನಿಖೆ ತೀವ್ರಗೊಳಿಸಿದಾಗ ಮೂವರು ಸಿಕ್ಕಿ ಬಿದ್ದರು. ಈಗ ಮೂವರು ಜೈಲು ಸೇರಿದ್ದರೆ, ಜಿಂಕೆ ಬೇಟೆಯ ಕಿಂಗ್ ಪಿನ್ ಇಮ್ರಾನ್ ದುಬೈಗೆ ಪರಾರಿಯಾಗಿದ್ದಾನೆ.
ಬಂಧಿತರನ್ನು ಚಾಮರಾಜನಗರ ಜೆಎಂಎಸ್‌ಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ಸೆ.೪ರವರೆಗೆ ನ್ಯಾಯಾಂಗಬಂಧನಕ್ಕೆ ಒಪ್ಪಿಸಲಾಗಿದೆ. ಜಿಂಕೆ ಹತ್ಯೆ ಮಾಡಿದ ಸಾಕ್ಷಿಗಳನ್ನು ಸಂಗ್ರಹಿಸಲಾಗಿದೆ. ಆದರೆ ತಲೆಮರೆಸಿಕೊಂಡಿರುವ ಪ್ರಮುಖ ಆರೋಪಿ ಸೆರೆಗೆ ಅರಣ್ಯ ಹಾಗೂ ಪೊಲೀಸ್ ಇಲಾಖೆ ಯವರು ಜಂಟಿ ಕಾರ‍್ಯಾಚರಣೆ ಆರಂಭಿಸಿದ್ದಾರೆ.
ಈ ಸಂಬಂಧ ಪ್ರಧಾನ ಮುಖ್ಯ ಅರಣ್ಯ ಸಂರ ಕ್ಷಣಾಧಿಕಾರಿ ಬಿ.ಕೆ.ಸಿಂಗ್ ಕೊಳ್ಳೇಗಾಲಕ್ಕೆ ಆಗಮಿಸಿ ಅಧಿಕಾರಿಗಳೊಂದಿಗೆ ಚರ್ಚಿಸಿದ್ದಾರೆ. ಜತೆಗೆ ಮೈಸೂರು ಮೂಲದ ಸ್ವಯ ಸೇವಾ ಸಂಸ್ಥೆಯೊಂದು ವೈಲ್ಡ್‌ಲೈಫ್ ಕ್ರೈಂ ಕಂಟ್ರೋಲ್ ಬ್ಯೂರೋ ಈ ಪ್ರಕರಣ ಕೈಗೆತ್ತಿಕೊಳ್ಳುವಂತೆ ಒತ್ತಡ ಹೇರಲು ಮುಂದಾಗಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ