ಸೂಳೆಕೆರೆಯ ನೂರಾರು ಎಕರೆ ಒತ್ತುವರಿ

ರವಿ ಸಾವಂದಿಪುರ ಭಾರತಿನಗರ
ಮದ್ದೂರು ತಾಲೂಕಿನ ಅತಿ ದೊಡ್ಡ ಕೆರೆ ಎಂದೇ ಕರೆಯುವ  ಮುಟ್ಟನಹಳ್ಳಿ ಸಮೀಪದ ಸೂಳೆಕೆರೆಯ ನೂರಾರು ಎಕರೆ ಪ್ರದೇಶ ಒತ್ತುವರಿಯಾಗಿದೆ.
೯೭೪ ಎಕರೆ ವಿಸ್ತೀರ್ಣವುಳ್ಳ ಸೂಳೆಕೆರೆಯ ಸುಮಾರು ೨೦೦ ಎಕರೆ ಪ್ರದೇಶವನ್ನು ಅಕ್ಕಪಕ್ಕದ ಜಮೀನುಗಳ ಮಾಲೀಕರು ಮತ್ತು ಕೆಲವು ಪಟ್ಟಭದ್ರರು ಒತ್ತುವರಿ ಮಾಡಿಕೊಂಡು ಸಾಗುವಳಿ ಮಾಡುತ್ತಿದ್ದಾರೆ.
೧೮೯೫ರಲ್ಲಿ  ವೇಶ್ಯೆಯೊಬ್ಬಳು ಸಮಾಜ ಸೇವಾ ದೃಷ್ಟಿಯಿಂದ ಮುಟ್ಟನಹಳ್ಳಿ ಸಮೀಪ ಈ ಕೆರೆ ನಿರ್ಮಿ ಸಿದಳೆಂಬುದನ್ನು ದಾಖಲೆಗಳು ತಿಳಿಸುತ್ತವೆ. ಶತಮಾನ ಕಂಡಿರುವ ಈ ಕೆರೆಯಿಂದ ಅಂದಾಜು ೧೫ ಸಾವಿರ ಎಕರೆ ಪ್ರದೇಶಕ್ಕೆ  ನೀರುಣಿಸಲಾಗುತ್ತಿದೆ.
ಮದ್ದೂರು, ಮಂಡ್ಯ ಎರಡೂ ತಾಲೂಕುಗಳಲ್ಲಿ ಕೆರೆ ಅಚ್ಚುಕಟ್ಟಿನ ಜಮೀನುಗಳಿವೆ. ವಿಶ್ವೇಶ್ವರಯ್ಯ ನಾಲೆಯಿಂದ ಹಾಗೂ ಕೆಆರ್‌ಎಸ್ ಜಲಾಶಯದ ಸೋರಿಕೆ ನೀರು ಮಂಡ್ಯ ಮಾರ್ಗವಾಗಿ ಈ ಕೆರೆಗೆ  ಬರುತ್ತದೆ.
ಕೆರೆಯ ಉತ್ತರ ಮತ್ತು ದಕ್ಷಿಣ ಭಾಗದಲ್ಲಿ ತಲಾ ಎರಡು ನಾಲೆಗಳನ್ನು ನಿರ್ಮಿಸಿ, ಅಚ್ಚುಕಟ್ಟು  ಪ್ರದೇಶಗಳಿಗೆ ನೀರು ಪೂರೈಸಲಾಗುತ್ತಿದೆ.
ಕೆರ ಭರ್ತಿಯಾದ ಬಳಿಕ ಹೆಚ್ಚುವರಿ ನೀರನ್ನು ಹೆಬ್ಬಾಳ ಚೆನ್ನಯ್ಯ ನಾಲೆಗೆ ಹರಿಸಲಾಗುತ್ತದೆ. ಹೀಗಾಗಿ ಹೆಬ್ಬಾಳ ಚೆನ್ನಯ್ಯ ನಾಲೆ ವ್ಯಾಪ್ತಿಯ ರೈತರ ಜಮೀನು ಗಳಿಗೂ ಸೂಳೆಕೆರೆಯ ನೀರು ದೊರೆಯುತ್ತಿದೆ.ವಿಶ್ವೇಶ್ವರಯ್ಯ ನಾಲೆ ವಿಭಾಗದ ನೀರಾವರಿ ಇಲಾಖೆ ವ್ಯಾಪ್ತಿಗೆ ಒಳಪಟ್ಟಿದ್ದ ಈ ಸೂಳೆಕೆರೆ ಯನ್ನು ೧೯೯೭-೯೮ರಲ್ಲಿ ಕಾವೇರಿ ನೀರಾವರಿ ನಿಗಮಕ್ಕೆ ವಹಿಸಲಾ ಯಿತು. ೨೦೦೭- ೦೮ರಲ್ಲಿ  ಕೆರೆ ಹೂಳನ್ನು ೧೪ ಲಕ್ಷ ರೂ. ವೆಚ್ಚದಲ್ಲಿ ತೆಗೆಸಲಾ ಯಿತು.
ಸುಮಾರು ೨೦೦ ಎಕರೆ ಪ್ರದೇಶವನ್ನು ಹತ್ತಾರು ವರ್ಷಗಳಿಂದಲೂ ಒತ್ತುವರಿ ಮಾಡಿಕೊ ಳ್ಳಲಾಗಿದೆ.
ಕೆರೆಯ ಒಡಲಲ್ಲಿ ಮತ್ತೆ ಹೂಳು ಶೇಖ ರಣೆ ಯಾಗುತ್ತಿದೆ. ಗಿಡಗಂಟಿ ಗಳು, ವಡಕೆಗಳು ಬೆಳೆದು ನೀರು ಶೇಖರಣೆಗೆ ಅಡ್ಡಿಯಾಗುತ್ತಿದೆ. ಹೀಗಾಗಿ ಸಾವಿರಾರು ಎಕರೆಗೆ ನೀರುಣಿಸುವ ಈ ಬೃಹತ್ ಕೆರೆ ಒತ್ತುವರಿಯಿಂದಾಗಿ ದಿನಗಳೆದಂತೆ ಕಿರಿದಾಗುತ್ತಿದೆ. ಜತೆಗೆ, ತನ್ನ ಸೊಬಗು, ಮಹತ್ವ ಕಳೆದುಕೊಳ್ಳುತ್ತಿದೆ.
ಕೆರೆಗೆ ಹೊಂದಿಕೊಂಡಂತಿರುವ ಅಕ್ಕಪಕ್ಕದ ಜಮೀನುಗಳ ಮಾಲೀಕರು ಮತ್ತು ಕೆಲ ಪಟ್ಟಭದ್ರರು ಒತ್ತುವರಿ ಮಾಡಿ ಕೊಂಡಿ ರುವ ವಿಷಯ ಈಗ ರಹಸ್ಯವಾಗಿ ಉಳಿದಿಲ್ಲ. ಜಿಲ್ಲೆಯಲ್ಲಿ ಕೆರೆ ಒತ್ತುವರಿ ತೆರವು ಕಾರ‍್ಯಾಚರಣೆ ಆರಂಭ ಗೊಂಡಿದೆ. ಆದರೆ, ಇಂಥ ದೊಡ್ಡ ಕೆರೆಯ ತ್ತುವರಿ ತೆರವಿಗೆ ತಾಲೂಕು ಆಡಳಿತ ಮುಂದಾಗದಿರುವುದು ದುರಂತ.
ಸೂಳೆ ಕೆರೆ ಜಮೀನು ಒತ್ತುವರಿ ವಿಚಾರವಾಗಿ ಸೂಳೆಕೆರೆ ಹಿತರಕ್ಷಣಾ ಸಮಿತಿ ಅಧ್ಯಕ್ಷ ಮುಟ್ಟನಹಳ್ಳಿ ಶಿವಲಿಂಗೇಗೌಡ ಅವರು ನ್ಯಾಯಾಲಯದ ಮೊರೆ ಹೋಗಿ ದ್ದಾರೆ. ಹಲವು ವರ್ಷ ಗಳಿಂದ ಕೆರೆ ಒತ್ತುವರಿ ವಿವಾದ ನ್ಯಾಯಾಲಯದಲ್ಲಿದ್ದು, ಇನ್ನೂ ತೀರ್ಪು ಹೊರ ಬಿದ್ದಿಲ್ಲ.ಜನಪ್ರತಿ ನಿಧಿಗಳು ಹಾಗೂ ಅಧಿಕಾರಿಗಳ ಇಚ್ಛಾಶಕ್ತಿ ಕೊರತೆಯೇ ಕೆರೆಯ ಒತ್ತುವರಿಗೆ ಕಾರಣವೆನ್ನಲಾಗುತ್ತಿದೆ. ಸಂಬಂಧಿಸಿದವರು ಈಗಲಾದರೂ ಇತ್ತ ಗಮನ ಹರಿಸಿ ಕೆರೆ ರಕ್ಷಣೆಗೆ ಮುಂದಾಗಬೇಕಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ