ಪರಿಷತ್ ಚುನಾವಣೆ: ಶೇ.೫೩.೦೬ಮತದಾನ

ವಿಕ ಸುದ್ದಿಲೋಕ ಮೈಸೂರು
ದಕ್ಷಿಣ ಪದವೀಧರ ಕ್ಷೇತ್ರದಿಂದ ವಿಧಾನ ಪರಿಷತ್ತಿಗೆ ಬುಧವಾರ ನಡೆದ ಚುನಾವಣೆ ಯಲ್ಲಿ ಶೇ.೫೩.೦೬ ಮತದಾನ ನಡೆದಿದೆ.
ಪಟ್ಟಿಯಲ್ಲಿ ಹೆಸರಿಲ್ಲ ಎಂದು ನಗರದ ಶ್ರೀರಾಂಪುರ ಮತಗಟ್ಟೆಯಲ್ಲಿ,ಮುಖ್ಯ ಮಂತ್ರಿ‘ಕೈ ಮುಗಿಯುವ ಚಿತ್ರ’ ಇರುವ ಜಾಹೀರು ಫಲಕ  ಮುಚ್ಚಲು ಆಗ್ರಹಿಸಿ ಕೆ.ಆರ್.ನಗರ ಮತಗಟ್ಟೆ ಎದುರು ಪ್ರತಿಭಟನೆ, ಮಾತಿನ ಚಕಮಕಿ ನಡೆ ದಿದ್ದರ ಹೊರತು ಚುನಾವಣೆ ಬಹುತೇಕ ಶಾಂತಿಯುತವಾಗಿತ್ತು.
ಮೈಸೂರು, ಮಂಡ್ಯ, ಚಾಮರಾಜ ನಗರ ಹಾಗೂ ಹಾಸನ ಜಿಲ್ಲೆಯನ್ನೊಳ ಗೊಂಡ ಕ್ಷೇತ್ರದ  ಒಟ್ಟು ೮೮,೨೮೩ ಮತ ದಾರ ಪೈಕಿ ೪೬,೮೪೭ಮಂದಿ ಹಕ್ಕು ಚಲಾ ಯಿಸಿದ್ದಾರೆ. ಶೇ.೪೬ರಷ್ಟು ಪ್ರಜ್ಞಾವಂತ ಮತದಾರರು ಜವಾಬ್ದಾರಿ ಮರೆತು ಮನೆಯಲ್ಲೇ ಕುಳಿತಿದ್ದರು. ಈ ಪೈಕಿ ಹಲವರು ಸರಕಾರ ನೀಡಿದ ‘ಸಾಂದರ್ಭಿಕ ರಜೆ’ ಸೌಲಭ್ಯವನ್ನು ಸದ್ಬಳಕೆ ಮಾಡಿ ಕೊಂಡಿದ್ದಾರೆ  ಎನ್ನುವುದು ವಿಪರ್ಯಾಸ.
ಚಾ.ನಗರ ಹೆಚ್ಚು: ಚಾಮರಾಜನಗರ ದಲ್ಲಿ ಅತಿ ಹೆಚ್ಚು ಶೇ. ೬೧.೬೨ರಷ್ಟು ಮಂದಿ (ಒಟ್ಟು:೫,೮೪೫, ಚಲಾಯಿಸಿದ ವರು: ೩,೬೦೨)ಹಕ್ಕು ಚಲಾಯಿಸಿದ್ದಾರೆ. ಅತಿ ಹೆಚ್ಚು ಮತದಾರರನ್ನು ಹೊಂದಿ ರುವ ಮೈಸೂರು ಜಿಲ್ಲೆಯಲ್ಲಿ (೪೩,೭೮೪ ) ಅತಿ ಕಡಿಮೆ ಶೇ.೪೭.೯೯ರಷ್ಟು (೨೧,೦೧೭) ಮತದಾನವಾಗಿದೆ.
ಮಂಡ್ಯ ಜಿಲ್ಲೆಯ ೨೧,೧೦೬ ಮತ ದಾರ ಪೈಕಿ  ೧೨,೧೪೨ ಮಂದಿ (ಶೇ.೫೭.೦೫) ಹಕ್ಕು ಚಲಾಯಿಸಿದ್ದಾರೆ. ಹಾಸನ ಜಿಲ್ಲೆಯ ೧೭,೫೪೮ ಮತದಾರರ ಪೈಕಿ  ೧೦,೦೮೬ ಮಂದಿ ಮತದಾನ (ಶೇ.೫೭.೪೭ರಷ್ಟು ) ಮಾಡಿದ್ದಾರೆ.
ಆಕ್ಷೇಪ, ಪ್ರತಿಭಟನೆ: ಮತಪಟ್ಟಿ ಕುರಿತಂತೆ ನಾಲ್ಕು ಜಿಲ್ಲೆಯ ಬಹುತೇಕ ಎಲ್ಲಾ ಮತಗಟ್ಟೆಗಳ ಮುಂದೆ ತೀವ್ರ ಆಕ್ಷೇಪ  ಸಾಮಾನ್ಯವಾಗಿತ್ತು. ವಿವಿಧೆಡೆ ಪ್ರತಿಭಟನೆಯೂ ನಡೆಯಿತು. ಮತ ಪಟ್ಟಿಯಲ್ಲಿ ಹೆಸರು ನಾಪತ್ತೆಯಾಗಿದೆ, ಬದುಕಿರುವ ಮತದಾರರ ಹೆಸರಿನ ಮುಂದೆ ‘ನಿಧನ’ವನ್ನು ನಮೂದಿಸ ಲಾಗಿದೆ ಎಂಬಿತ್ಯಾದಿ ಆರೋಪ, ಸ್ವಂತ ಮನೆಯಲ್ಲಿದ್ದರೂ ಪಟ್ಟಿಯ ಪ್ರಕಾರ  ‘ಮನೆ ಖಾಲಿ’ಮಾಡಿಸಿದ ನೂರಾರು ನಿದರ್ಶನಗಳು ವರದಿಯಾಗಿವೆ. ಇದೇ ಕಾರಣಕ್ಕೆ ಹಕ್ಕು ವಂಚಿತರಾದವರ ಸಂಖ್ಯೆ ದೊಡ್ಡದಿತ್ತು.
ಹೊರಗೆ ಕಾವು: ಉಳಿದಂತೆ, ಎಲ್ಲಾ ಮತಗಟ್ಟೆಗಳ ಮುಂದೆ ಮತದಾರರಲ್ಲದ ರಾಜಕಾರಣಿಗಳ ಜಾತ್ರೆಯೇ ನೆರೆದಿತ್ತು. ಅಭ್ಯರ್ಥಿಗಳ ಕಟ್ಟಾ ಬೆಂಬಲಿಗರು, ಪಕ್ಷ ನಿಷ್ಠ ಕಾರ‍್ಯಕರ್ತರು ಕೊನೆಯ ಹಂತದ ಮನವೊಲಿಕೆ ಪ್ರಯತ್ನ ನಿರತರಾಗಿದ್ದರು. ಕೆಲವೆಡೆ ಜನಪ್ರತಿನಿಧಿಗಳು,ಮುಂಚೂಣಿ ಮುಖಂಡರೇ ‘ಚೀಟಿ ಹಂಚುವ’ ಚಪ್ಪರ ಗಳಡಿ ನಿಂತು ಸ್ಪರ್ಧೆಗೆ ಕಾವು ನೀಡಿ ದರು. ಕೆಲವೆಡೆ ಬೆಳಗ್ಗೆ  ಸ್ವಲ್ಪ ಹೊತ್ತು ಮಳೆ ಸಿಂಚನವಾಯಿತಾದರೂ ಮತದಾನದ ಉತ್ಸಾಹವನ್ನು ಕುಂದಿಸಲಿಲ್ಲ.
ಜು.೩ಕ್ಕೆ ಎಣಿಕೆ: ಪ್ರಮುಖ ಪಕ್ಷಗಳ ನಾಲ್ವರು, ಕಠಿಣ ಸ್ಪರ್ಧೆ ನೀಡಿದ ಕೆಲವು ಪಕ್ಷೇತರರು ಸೇರಿದಂತೆ ೨೫ ಅಭ್ಯರ್ಥಿಗಳ ಹಣೆ ಬರಹ  ಮತಪೆಟ್ಟಿಗೆಯಲ್ಲಿ ಅಡ ಗಿದ್ದು, ಜು.೩ರಂದು ಪ್ರಕಟವಾಗಲಿದೆ. ಅಂದು ನಗರದ ಊಟಿ ರಸ್ತೆಯ ಜೆಎಸ್‌ಎಸ್ ಕಾಲೇಜಿನಲ್ಲಿ  ಎಣಿಕೆ ಪ್ರಕ್ರಿಯೆ ನಡೆಯಲಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ