ಪಡಿತರ ಭ್ರಷ್ಟಾಚಾರ ಗಣಿಯಷ್ಟೇ ಘನಘೋರ !

*ವಿಕ ಸುದ್ದಿಲೋಕ ಮೈಸೂರು
`ಹದಿನಾಲ್ಕು ತಿಂಗಳ ಅವಧಿಯಲ್ಲಿ ಗಣಿಗಾರಿಕೆಯಿಂದ ರಾಜ್ಯದ ಬೊಕ್ಕಸಕ್ಕೆ ಆಗಿರುವ ನಷ್ಟ ೧೮೨೭ ಕೋಟಿ ರೂಪಾಯಿ. ಆದರೆ  ರಾಜ್ಯದ ಸಾರ್ವಜನಿಕ ಪಡಿತರ ವಿತರಣಾ ವ್ಯವಸ್ಥೆಯಲ್ಲಿ ನಡೆದಿರುವ  ಭ್ರಷ್ಟಾಚಾರ ಹಾಗೂ ಅಕ್ರಮದ  ಪರಿಣಾಮ ವಾರ್ಷಿಕ ೧೭೩೭.೬೦ ಕೋಟಿ ರೂ. ಸೋರಿಕೆಯಾಗಿದೆ. ಪರಿಣಾಮದಲ್ಲಿ ಯೋಚಿಸಿದಾಗ, ಗಣಿಗಾರಿಕೆ ಅಕ್ರಮಕ್ಕಿಂತ, ಪಡಿತರ ಅಕ್ರಮವೇ ಆತಂಕಕಾರಿ' ಎಂದು ಪಡಿತರ   ತನಿಖೆ ನಡೆಸಿರುವ ಡಾ.ಆರ್. ಬಾಲಸುಬ್ರಮಣ್ಯಂ ಹೇಳಿದ್ದಾರೆ.
ಗಣಿ ಹಗರಣದಲ್ಲಿ ಒಂದಿಷ್ಟು ಮಂದಿ ಸೇರಿಕೊಂಡು ಬೊಕ್ಕಸಕ್ಕೆ ಬರಬೇಕಿದ್ದ ಕೋಟ್ಯಂತರ ರೂ. ಹಣವನ್ನು ತಾವಷ್ಟೇ ನುಂಗಿ ಹಾಕಿದ್ದಾರೆ. ಆದರೆ, ಪಡಿತರ ಅಕ್ರಮದಲ್ಲಿ  ಸೋರಿಕೆಯಾಗಿರುವುದು ಸರಕಾರದ ಹಣ ಮಾತ್ರವಲ್ಲ.  ಲಕ್ಷಾಂತರ ಶ್ರೀ ಸಾಮಾನ್ಯರ ಹಣವನ್ನೂ ವ್ಯವಸ್ಥೆಯಲ್ಲಿರುವ ವಂಚಕರು ಸೇರಿಕೊಂಡು ಲೂಟಿ ಮಾಡಿದ್ದಾರೆ. ಪ್ರಮಾಣದಲ್ಲೂ  ಪಡಿತರ ಅಕ್ರಮ  ಗಣಿಗಾರಿಕೆಗಿಂತ  ೯೦ ಕೋಟಿ ರೂ. ಕಡಿಮೆಯಷ್ಟೆ. ಆದರೂ ಗಣಿ ಅಕ್ರಮದ ಅಬ್ಬರದಲ್ಲಿ , ಪಡಿತರದ ಅಕ್ರಮ ಸದ್ದು ಮಾಡಲಿಲ್ಲ' ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ