ಕಾವೇರಿ ಕಣಿವೆಯಲ್ಲಿ ಗೌಡರ ಪ್ರಭಾವ ನಡೆದೀತೆ?

ಕೂಡ್ಲಿ ಗುರುರಾಜ ಮೈಸೂರು
ರಾಜ್ಯದ  ನೂತನ ಮುಖ್ಯಮಂತ್ರಿಯಾಗಲಿರುವ ಒಕ್ಕಲಿಗ ಸಮುದಾಯದ ಬಿಜೆಪಿಯ ಡಿ.ವಿ. ಸದಾನಂದ ಗೌಡರು ಕಾವೇರಿ ಕಣಿವೆ ಪ್ರದೇಶದಲ್ಲಿ ಒಕ್ಕಲಿಗ ಸಮಾಜವನ್ನು ಪಕ್ಷದ ಕಡೆಗೆ ಸೆಳೆಯಬಲ್ಲರೇ?
ಸದಾನಂದಗೌಡರು ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ ಚುನಾಯಿತರಾಗುತ್ತಿದ್ದಂತೆ ಇಂಥ ದ್ದೊಂದು ಪ್ರಶ್ನೆ ಕೇಳಿ ಬಂದಿದೆ. ಯಾಕೆಂದರೆ, ಈ ಭಾಗದಲ್ಲಿ ಬಿಜೆಪಿಗೆ ಒಕ್ಕಲಿಗ ಸಮಾಜದಲ್ಲಿ ಹೇಳಿ ಕೊಳ್ಳುವಂತ ನೆಲೆ ಇಲ್ಲ. ಆ ಸಮುದಾಯದ ಮೇಲೆ ರಾಜಕೀಯವಾಗಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹಾಗೂ ಅವರ ಪುತ್ರ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೊಂದಿ ರುವ ಪ್ರಾಬಲ್ಯ ಬಿಜೆಪಿಗೆ ಇಲ್ಲ. ಇಂತಹ ಸ್ಥಿತಿಯಲ್ಲಿ ಸದಾನಂದಗೌಡರ ನಾಯಕತ್ವ ಬಿಜೆಪಿ ಕಡೆಗೆ ಈ ಸಮುದಾಯ ಒಲಿಯುವಂತೆ ಮಾಡಬಲ್ಲದೇ ಎಂಬುದೇ ಪ್ರಶ್ನೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ