ಇದು ಚಿತ್ರಕಥೆಯಲ್ಲ...ಸತ್ಯ ಕಥೆ

ಆರ್. ಕೃಷ್ಣ ಮೈಸೂರು
ಇದು `ಚಲುವಿನ ಚಿತ್ತಾರ' ಚಿತ್ರದ್ದೇ ತದ್ರೂಪ ಕಥೆ!
ಆಶ್ಚರ್‍ಯ ಎಂದರೆ ಈ ಚಿತ್ರ, ಚಿತ್ರೀಕರಣಗೊಂಡ ತಿ.ನರಸೀಪುರದ ನೆಲದಲ್ಲಿಯೇ ನಡೆದ ಸತ್ಯ ಘಟನೆ. ಆದರೆ ಇಲ್ಲಿ ಪ್ರೇಮಿಗಳು ಒಂದಾಗಿ ಸುಖ ಜೀವನಕ್ಕೆ ನಾಂದಿ ಹಾಡಿದ್ದಾರೆ. ಅಪ್ರಾಪ್ತ ವಯಸ್ಸಿ ನಲ್ಲಿಯೇ ಚಿಗುರಿದ ಪ್ರೀತಿಗೆ ಜಾತಿ, ಅಂತಸ್ತು ಅಡ್ಡ ಬಂದರೂ, ಅದನ್ನು ಲೆಕ್ಕಿಸದೆ ಪ್ರೇಮಿಗಳು ಒಂದಾಗಿದ್ದಾರೆ.
ಪ್ರೇಮ ಪಾಶಕ್ಕೆ ಸಿಲುಕಿದ್ದ ಹುಡುಗಿ, ಮನೆ ಯವರ ಬಲವಂತಕ್ಕೆ ಬೇರೊಬ್ಬನನ್ನು ಮದುವೆ ಆದರೂ, ನಾಲ್ಕೇ ದಿನದಲ್ಲಿ ಗಂಡನನ್ನು ತೊರೆದು ಪ್ರೇಮಿಯನ್ನು ಕೂಡಿಕೊಂಡಿದ್ದಾಳೆ. ತಿ.ನರಸೀಪುರದ ಮಹಾದೇವಸ್ವಾಮಿ (೨೪) ಹಾಗೂ ಹೇಮಲತಾ (೧೯) ಒಂದಾದ ಪ್ರೇಮಿಗಳು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ