ಇದು `ಕತ್ತಿ ವೀರ' ಅಲೆಮಾರಿಗಳ ಜನಪದ

 ವಿಕ ವಿಶೇಷ ಮೈಸೂರು
`ಮನುಷ್ಯನ ತಲೆ ಮೇಲೆ ಇಟ್ಟಿರುವ ಈರುಳ್ಳಿಯನ್ನು, ನಮ್ಮ ಹುಡುಗರು ಕುಣಿಯುತ್ತಾ ಕತ್ತಿ ಬೀಸಿ,  ಕ್ಷಣ ಮಾತ್ರದಲ್ಲಿ ತುಂಡು ಮಾಡುತ್ತಾರೆ. ಹೊಟ್ಟೆಯ ಮೇಲೆ ನಿಂಬೆ ಹಣ್ಣು ಇಟ್ಟು, ಅದನ್ನೂ ಡಾಲು ಕತ್ತಿಯಿಂದ ಕತ್ತರಿಸಬಲ್ಲರು.  ನಮ್ಮ  ಈ ಕಲೆಯನ್ನು ಮೈಸೂರು ದಸರಾಗೆ ಪರಿಚಯಿಸಬೇಕೆಂಬ ಇರಾದೆ ಸ್ವಾಮಿ. ಅವಕಾಶ ನೀಡುವಿರಾ ?' 
- ಉತ್ತರ ಕರ್ನಾಟಕ ಸೀಮೆಯ ಅಲೆಮಾರಿ ಜನಾಂಗಕ್ಕೆ ಸೇರಿದ ದಾಲಪಟಾ ಕಲಾವಿದರು  ಮೈಸೂರು ಜಿಲ್ಲಾಧಿಕಾರಿ  ಮುಂದಿಟ್ಟರುವ ಮನವಿ ಇದು. ದಸರಾ ಸಮೀಪಿಸಿತು ಅಂದ್ರೆ ಬಗೆಬಗೆಯ ಜನಪದ ಕಲಾವಿದರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ  ಪ್ರಭಾವ ಬೀರಿ ದಸರಾ ಮಹೋತ್ಸವ ಕಾರ್ಯಕ್ರಮದಲ್ಲಿ ಪ್ರದರ್ಶನ ನೀಡುವುದು ಸಾಮಾನ್ಯ. 
ಆದರೆ, ಗುರುವಾರ  ಜಿಲ್ಲಾಧಿಕಾರಿ ಪಿ. ಎಸ್. ವಸ್ತ್ರದ್ ಅವರನ್ನು ಕಾಣಲು ಬಂದಿದ್ದ ಕಲಾವಿದರು ಮಾತ್ರ ಮೈಸೂರು ದಸರೆಗೆ ಹೊಸಬರು.
ಹಳ್ಳಿ-ಹಳ್ಳಿಗೆ ತೆರಳಿ ಹೆಂಗಸರ ಕೂದಲು ಪಡೆದು, ಬಳೆ, ಕ್ಲಿಪ್, ಮುತ್ತಿನ ಸರದಂತಹ ಹೆಣ್ಣು  ಮಕ್ಕಳ ಅಲಂಕಾರಿಕ ವಸ್ತುಗಳನ್ನು ಮಾರಾಟ ಮಾಡುವ  ಈ ಮಂದಿ, ಮನರಂಜನೆಗಾಗಿ ರೂಢಿಸಿಕೊಂಡಿರುವ ಕಲೆಯ ಹೆಸರು ದಾಲಪಟಾ !

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ