ಯಶಸ್ಸಿಗೆ ವಿಎಂಐ ಸೂತ್ರ

ಪ್ರಾಧಿಕಾರ ಎನ್ನುವುದು ನಾಡಹಬ್ಬ ವನ್ನು ಜಾಗತಿಕ ಮಟ್ಟದಲ್ಲಿ ಬ್ರ್ಯಾಂಡ್ ಮಾಡುವ, ಮೈಸೂರಿನ ಅಭಿವೃದ್ಧಿಗೆ ಪೂರಕವಾಗುವ ವೇದಿಕೆಯಾಗಬೇಕು. ಇದಕ್ಕೆ ಪೂರಕವಾಗಿ ದಸರೆ ಕಾರ್‍ಯಕ್ರಮ ಗಳಿಗೂ ಮೂರು ಹಂತದ ಸಮಿತಿ ಗಳಿರಬೇಕು. ಒಂದು ದೂರದೃಷ್ಟಿಯ ಸಮಿತಿ(ವಿಷನ್ ಕಮಿಟಿ) ಮತ್ತೊಂದು ನಿರ್ವಹಣಾ ಸಮಿತಿ(ಮಾನಿಟರಿಂಗ್ ಕಮಿಟಿ), ಹಾಗೂ ಅನುಷ್ಠಾನ ಸಮಿತಿ (ಇಂಪ್ಲಿಮೆಂಟೇಷನ್ ಕಮಿಟಿ).
ದಸರೆ ಹೇಗಿರಬೇಕು, ಕಾರ್ಯಕ್ರಮಗಳ ಗಂಭೀರತೆ, ಅಭಿ ವೃದ್ಧಿ ಪೂರ್ವಪರ ಚರ್ಚೆಯಾಗಿ ಒಂದು ಸೂಕ್ತ ರೂಪರೇಷೆ ಇಲ್ಲೇ ಸಿದ್ಧವಾಗಬೇಕು. ವಿವಿಧ ಕ್ಷೇತ್ರದಲ್ಲಿ ತಜ್ಞರಾದವರು, ಸಾಧಕರನ್ನು ವಿಷನ್ ಕಮಿಟಿಗೆ ಆಯ್ಕೆ ಮಾಡಬೇಕು.
೨ನೇ ಹಂತದಲ್ಲಿ ಬೇಕಾಗಿದ್ದು ಮಾನಿಟರಿಂಗ್ ಕಮಿಟಿ. ಇಲ್ಲಿ ದಸರೆಗೆ ಆಗುವ ಕೆಲಸಗಳು ಹೇಗೆ ನಡೆಯುತ್ತಿವೆ. ತಪ್ಪಾಗಿದ್ದರೆ ಅದನ್ನು ಗುರುತಿಸಿ ಹೇಳುವ, ಯೋಜನೆಯಲ್ಲೇ ಆಗುತ್ತಿರುವ ಲೋಪಗಳ ಮೇಲೆ ನಿಗಾ ಇಡುವುದು ಈ ಸಮಿತಿ ಹೊಣೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ