ವಿಕ ಅಭಿಯಾನ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ವಿಕ ಅಭಿಯಾನ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ತಲೆ ಕೆಡಿಸಿಕೊಳ್ಳದ ಜನಪ್ರತಿನಿಧಿಗಳು, ಜನತೆಗೆ ನಿತ್ಯ ಬವಣೆ

ಪುರುಷೋತ್ತಮ್ ಸಂತೇಮರಹಳ್ಳಿ
ಚಾ.ನಗರ ತಾ.ಹೋಬಳಿ ಕೇಂದ್ರಗಳ ಪೈಕಿ ಸಂತೇಮರಹಳ್ಳಿ ಪ್ರಮುಖವಾದದ್ದು. ಇದು ಜಿಲ್ಲಾ ಕೇಂದ್ರ ಸೇರಿದಂತೆ ೫ ತಾಲೂಕು ಕೇಂದ್ರಗಳಿಗೆ ಸಂಪರ್ಕ ಕಲ್ಪಿಸುವ ಜಂಕ್ಷನ್. ಆದರೆ ಈ ಊರಿನ ರಸ್ತೆಗಳು ಓಡಾಟಕ್ಕೆ ಯೋಗ್ಯವಾಗಿಲ್ಲ. ಇಲ್ಲಿನ ರಸ್ತೆಗಳ ಸ್ಥಿತಿ ಬಗ್ಗೆ ಜನಪ್ರತಿನಿಧಿಗಳಾದವರೂ ಕಿಂಚಿತ್ತೂ ತಲೆ ಕೆಡಿಸಿಕೊಂಡಿಲ್ಲ.  ಇದರಿಂದಾಗಿ ಜನತೆ ನಿತ್ಯ ಬವಣೆ ಪಡುವಂತಾಗಿದೆ.
ಮರಹಳ್ಳಿಯಲ್ಲಿ ಪ್ರತಿ ಮಂಗಳವಾರ ಬೃಹತ್ ಪ್ರಮಾಣದ ಸಂತೆ ನಡೆಯುತ್ತದೆ. ಹೀಗಾಗಿಯೇ ಇದಕ್ಕೆ ಸಂತೇಮರಹಳ್ಳಿ ಎಂಬ ಹೆಸರು ಬಂದಿದೆ. ಜಿಲ್ಲೆ ಸೇರಿದಂತೆ ಹೊರ ಜಿಲ್ಲೆಗಳಿಂದಲೂ ರೈತರು ತಮ್ಮ ಕೃಷಿ ಉತ್ಪನ್ನಗಳನ್ನು ತಂದು ಈ ಸಂತೆಯಲ್ಲಿ  ಮಾರಾಟ ಮಾಡುತ್ತಾರೆ. ಊರು ಇಷ್ಟು ಜನಪ್ರಿಯವಾಗಿದ್ದರೂ ರಸ್ತೆಗಳ ವಿಚಾರದಲ್ಲಿ ಶಾಪಗ್ರಸ್ತ. ಊರಿನ ಮಧ್ಯೆ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ ೨೦೯ ಅನ್ನು ಹೊರತು ಪಡಿಸಿ ಇನ್ನಾವ ರಸ್ತೆಯೂ `ಸುಮಾರು' ಎಂಬ ಮಟ್ಟಿಗೂ ಇಲ್ಲ.

ಪ್ರಸಾದದಂತೆ ಗುತ್ತಿಗೆ ಹಂಚಿಕೆ, ಕಳಪೆಯಾದ ಗುಣಮಟ್ಟ

ಮಡಹಳ್ಳಿ ಮಹೇಶ್ ಗುಂಡ್ಲುಪೇಟೆ
ಒಳಚರಂಡಿ ನಿರ್ಮಾಣ ಕಾಮಗಾರಿ ಪರಿಣಾಮ ಪಟ್ಟಣದ ಬಹುತೇಕ ಎಲ್ಲ ರಸ್ತೆಗಳು ಹಾಳಾಗಿವೆ. ಗುಂಡ್ಲುಪೇಟೆಯ ಮುಖ್ಯ ರಸ್ತೆಗಳನ್ನು ಹೊರತು ಪಡಿಸಿ ಉಳಿದವುಗಳಲ್ಲಿ ಗುಂಡಿ ನಡುವೆ ರಸ್ತೆ ಹುಡುಕುವ ಸ್ಥಿತಿ. ರಸ್ತೆಗಳ ವಿಚಾರದಲ್ಲಿ  ಪುರಸಭೆ ನಿದ್ರೆಗೆ ಜಾರಿದೆ. ಹೀಗಾಗಿ ಹದಗೆಟ್ಟ ರಸ್ತೆಗಳದ್ದೇ ಕಾರುಬಾರು.
ಈಚೆಗೆ ನಿರ್ಮಿಸಿದ್ದ ಡಾಂಬರು ಹಾಗೂ ಮೆಟ್ಲಿಂಗ್ ರಸ್ತೆಗಳನ್ನು ಒಳ ಚರಂಡಿ ನಿರ್ಮಾಣಕ್ಕಾಗಿ ಅಗೆಯಲಾಗಿದೆ. ಮ್ಯಾನ್ ಹೋಲ್‌ಗಳು ರಸ್ತೆಗಿಂತ ಎತ್ತರವಾಗಿದ್ದು, ಅಪಾಯಕ್ಕೆ ಆಹ್ವಾನಿಸುತ್ತಿವೆ.  ಇದರಿಂದ ವಾಹನ ಸಂಚಾರ ಪಟ್ಟಣದಲ್ಲಿ ತ್ರಾಸದಾಯಕ. ರಸ್ತೆ ಅಭಿವೃದ್ಧಿಗೆ ಬಿಡುಗಡೆಯಾದ ಹಣ ಜಲ್ಲಿ ಕಲ್ಲಿನಡಿ ಹೂತು ಹೋಗಿದೆ. 
ರಸ್ತೆ ಕಾಮಗಾರಿಗಳ ಗುತ್ತಿಗೆಯನ್ನು `ಪ್ರಸಾದ' ಹಂಚಿದಂತೆ ಹಂಚಿದ ಪರಿಣಾಮ ಗುಣಮಟ್ಟವೂ ಅವಿತುಕೊಂಡಿದೆ. ಮಳೆ ಬಿದ್ದ ವೇಳೆಯಲ್ಲಂತೂ ಕಾಮಗಾರಿ ಬಂಡವಾಳ ಎಲ್ಲರಿಗೂ ರಾಚುತ್ತದೆ.

ಕಳಪೆ ಕಾಮಗಾರಿ ಅವಾಂತರ, ಮಳೆ ಬಂದರೆ ಬಣ್ಣಗೇಡು

ಕೋಟಂಬಳ್ಳಿ ಗುರುಸ್ವಾಮಿ ಕೊಳ್ಳೇಗಾಲ 
ಪಟ್ಟಣದಲ್ಲಿ  ರಸ್ತೆ ಕಳೆದಿದೆ! ಹುಡುಕಿಕೊಡಿ ಎನ್ನುವುದು ಜನತೆ ಒಕ್ಕೊರಲು. ರಸ್ತೆಯನ್ನು ಕಾಲುದಾರಿ ನುಂಗಿದೆಯೋ, ಕಾಲು ದಾರಿಯಲ್ಲಿ ರಸ್ತೆ ಕಳೆದು ಹೋಗಿದೆಯೋ, ತಿಳಿಯುತ್ತಿಲ್ಲ್ಲ. ಕಾಲುದಾರಿಯನ್ನೇ ರಸ್ತೆ ಎನ್ನಬೇಕು ಅಷ್ಟರ ಮಟ್ಟಿಗೆ ಸ್ಥಿತಿ ಹೀನಾಯ. ಹಗಲಿನಲ್ಲಿ ದೀಪ ಹಿಡಿದು ಹುಡುಕಿದರೂ ಸುಸ್ಥಿತಿ ರಸ್ತೆ ಒಂದೂ ಕಂಡುಬರದು. ಕಾಲು ದಾರಿಯಂತಿರುವ ಮಾರ್ಗವನ್ನು ರಸ್ತೆ ಎನ್ನಬೇಕು.
ಇದಕ್ಕೆ ಅಪೂರ್ಣ ಕಾಮಗಾರಿಯ ಕೃಪೆ ಒಂದೆಡೆ ಇದ್ದರೆ, ಕೆಲ ರಸ್ತೆಗಳ ಕಾಮಗಾರಿ ನಡೆದಿರುವುದು ನೀಜ. ಆದರೆ, ಡಾಂಬರೀಕರಣವಾಗಿದೆ ಎನ್ನುವುದಕ್ಕೆ ಪುರಾವೆಯೇ ಸಿಗದಂತಿದೆ ಇನ್ನೊಂದೆಡೆ. ಅಲ್ಲದೇ, ಮಳೆ ಬಂದರೆ ಕಾಮಗಾರಿ ಬಣ್ಣ ಪೂರ್ಣ ಪ್ರಮಾಣದಲ್ಲಿ ಬಯಲು. ಡಾಂಬರೀಕರಣ ಮಾಡುವಾಗ ಒಂದು ರಸ್ತೆಯನ್ನು ಎರಡು ಭಾಗ ಮಾಡಿ  ಕೆಲಸ ಮಾಡಲಾಗುತ್ತದೆ. ಒಂದು ಭಾಗ ಪೂರ್ಣವಾಗಿ ಇನ್ನೊಂದರ ಕೆಲಸ ಕೈಗೆತ್ತಿಕೊಳ್ಳುವಷ್ಟರಲ್ಲಿ  ಮೊದಲ ಭಾಗ ಯಥಾಸ್ಥಿತಿಗೆ ಬರುತ್ತದೆ.

ಸಾವು ಬಂದು ಕುಂತೈತಲ್ಲೋ...

ತಿ.ನರಸೀಪುರ
ಬೃಹತ್ ವರುಣಾ ಕೆರೆಯ ಪಕ್ಕದಲ್ಲಿ ರಾಷ್ಟ್ರೀಯ ಹೆದ್ದಾರಿ ೨೧೨ ಹಾದು ಹೋಗಿದೆ. ಆದರೆ ಈ ಕೆರೆಗೂ ತಡೆಗೋಡೆಗಳೂ ಇಲ್ಲ, ಅಪಾಯವನ್ನು ಎಚ್ಚರಿಸುವ ಫಲಕಗಳೂ ಇಲ್ಲ. ಸದಾ ನೀರಿರುವ ಈ ಕೆರೆಯ ಮತ್ತೊಂದು ಬದಿಯಲ್ಲಿ ೧೫ ರಿಂದ ೨೦ ಅಡಿ ಆಳ ಹೊಂದಿದ ಅಚ್ಚುಕಟ್ಟು ಪ್ರದೇಶವಿದೆ.
ನಿತ್ಯವೂ ಬಸ್ ಸೇರಿದಂತೆ ನೂರಾರು ವಾಹನಗಳು ಸಾಗುತ್ತವೆ. ಓವರ್‌ಲೋಡ್ ಮರಳು ಲಾರಿಗಳಿಗೂ ಕಡಿಮೆ ಇಲ್ಲ. ಸುಮಾರು ೫೦೦-೬೦೦ ಮೀಟರ್ ಉದ್ದದ ಕೆರೆ ಏರಿ ಮೇಲಿನ ಮೈಸೂರು- ತಿ.ನರಸೀಪುರ ಮುಖ್ಯರಸ್ತೆಯಲ್ಲಿ ಸಾಗುವ ವಾಹನಗಳಿಗೆ ವೇಗ ಮಿತಿಯೇ ಇಲ್ಲ. ಖಾಸಗಿ ಬಸ್‌ಗಳಲ್ಲಂತೂ ಪೈಪೋಟಿ.
ಹೀಗಿದ್ದರೂ ಸುರಕ್ಷಿತ ದೃಷ್ಟಿಯಿಂದ ಎರಡೂ ಬದಿಯಲ್ಲೂ ಕಬ್ಬಿಣದ ಕಂಬಗಳನ್ನು ಅಳವಡಿಸಿಲ್ಲ. ಕೆಲ ತಿಂಗಳ ಹಿಂದೆ ಖಾಸಗಿ ಬಸ್ ಅಚ್ಚುಕಟ್ಟು ಪ್ರದೇಶಕ್ಕೆ ಉರುಳಿತ್ತಾದರೂ ಪ್ರಾಣಾಪಾಯ ಸಂಭವಿಸಿರ ಲಿಲ್ಲ. ಒಂದುವೇಳೆ ಕೆರೆಗೆ ಬಿದ್ದಿದ್ದರೆ ಹೇಳುವಂತಿರಲಿಲ್ಲ.

ದಸರಾ ಅದರ ಪ್ರಾಧಿಕಾರ

ದಸರಾ ಉತ್ಸವದ ವ್ಯವಸ್ಥಿತ ಸಂಘಟನೆಗೆ ನಿರಂತರ ಕಾರ್ಯಚಟುವಟಿಕೆ ನಡೆಸುವ ಪ್ರತ್ಯೇಕ ವ್ಯವಸ್ಥೆ ಅಗತ್ಯ.  ಪ್ರಾಧಿಕಾರ ಮೈಸೂರಿನಲ್ಲೇ ಕಾರ್ಯನಿರ್ವಹಿಸಬೇಕು, ಅದರ ಎಲ್ಲಾ ಕಾರ್ಯಗಳು ಪಾರದರ್ಶಕವಾಗಿದ್ದು, ಉತ್ತರದಾಯಿತ್ವ ಹೊಂದಿರಬೇಕು ಎಂಬುದು ಗಣ್ಯರ ಅಭಿಮತ. 

ಪ್ರಾಧಿಕಾರ ಅದರ ವಿಸ್ತಾರ

ಸಾಂಸ್ಕೃತಿಕ ಹಿನ್ನೆಲೆಯುಳ್ಳವರು ಹಾಗೂ ಸಂಪ್ರದಾಯಕ್ಕೆ ಧಕ್ಕೆಯಾಗದಂತೆ  ಪರಂಪರೆಯನ್ನು ಮುಂದುವರಿಸುವುದರ ಜತೆಗೆ ಹಿರಿಯ ನಾಗರಿಕರನ್ನೊಳಗೊಂಡಂತೆ ದೇಸಿ ಸೊಗಡನ್ನು ಬಿಂಬಿಸುವ ದಸರಾ ಕಾರ್ಯಕ್ರಮಗಳನ್ನು ರೂಪಿಸುವಂತಹ ಮಾದರಿ ಪ್ರಾಧಿಕಾರ ರಚನೆಯಾಗಬೇಕು ಎಂಬುದು ಇಲ್ಲಿನ ಗಣ್ಯರ ಅಭಿಪ್ರಾಯ.

ಪ್ರವಾಸೋದ್ಯಮ ಸದೃಢತೆಗೆ ದಸರೆಯೇ ವೇದಿಕೆ

ಮೈಸೂರು ದಸರೆ ಹಾಗೂ ಪ್ರವಾಸೋದ್ಯಮ...
ಈ ಎರಡು ಒಂದನ್ನು ಬಿಟ್ಟು ಇನ್ನೊಂದಿಲ್ಲ. ಪ್ರವಾಸೋದ್ಯಮದ ಅಭಿವೃದ್ಧಿ ಯಲ್ಲಿ ಮೈಸೂರು ದಸರೆಯ ಪಾತ್ರ ಪ್ರಮುಖವಾದದ್ದು. ದಸೆರೆಗೆ ಪ್ರವಾ ಸೋದ್ಯಮವೇ ಚಿಮ್ಮು ಹಲಗೆ. ದಸರೆ ಎಂದರೆ ಅದೊಂದು ಧಾರ್ಮಿಕ, ಪಾರಂಪರಿಕ, ಸಾಂಸ್ಕೃತಿಕ ಉತ್ಸವ ಎನ್ನುವ ಪರಿಕಲ್ಪನೆ ಈಗಲೂ ಜನಮಾನಸ ದಲ್ಲಿ ಉಳಿದಿದೆ.ಆಯಾ ಸಾಲಿನ ದಸರೆ ಆರಂಭವಾಗಬೇಕು ಎನ್ನುವ ಮಾತು ಕೇಳಿಬರುತ್ತಿದ್ದಂತೆ ಒಂದೆರಡು ತಿಂಗಳು ಮುಂಚೆ ಸಭೆ, ಸಿದ್ಧತೆ ಚಟುವಟಿಕೆ ಗಳು ಆರಂಭವಾಗುತ್ತವೆ. ಇದು ಮೊದಲಿನಿಂದ ನಡೆದುಕೊಂಡು ಬಂದಿದೆ. ಸ್ಥಳೀಯವಾಗಿ ಅಧಿಕಾರಿಗಳು ದಸರೆಯನ್ನು ಯಶಸ್ವಿಯಾಗಿ ನಿಭಾಯಿಸಲು ಶ್ರಮಿಸಬಹುದೇ ಹೊರತು ವರ್ಷವಿಡೀ ದಸರೆಯ ಕುರಿತೇ ಚಿಂತಿಸುತ್ತಾ ಕೂರಲು ಆಗುವುದಿಲ್ಲ.ಇದಕ್ಕಾಗಿ ಪ್ರಾಧಿಕಾರ ರೂಪದ ಒಂದು ಸಂಸ್ಥೆ ಬೇಕು. ನಾನಾ ಕ್ಷೇತ್ರಗಳ ತಜ್ಞರನ್ನೊಳಗೊಂಡ ಸಮಿತಿಗಳನ್ನು ರಚಿಸಿ ಅವರಿಂದ ಸೂಕ್ತ ಸಲಹೆ, ಸಹಕಾರ ಪಡೆದುಕೊಳ್ಳಬೇಕು. ದಸರೆಯ ಸಾಂಸ್ಕೃತಿಕ ಕಾರ್‍ಯಕ್ರಮಗಳಿಗೆ ಯಾವ್ಯಾವ  ಕಲಾವಿದರು ಆಗಮಿಸಲಿದ್ದಾರೆ. ಈ ವರ್ಷದ ದಸರೆ ವಿಶೇಷತೆ ಏನು ಎನ್ನುವ ಸ್ಪಷ್ಟ ಮಾಹಿತಿ ಮೂರ್‍ನಾಲ್ಕು ತಿಂಗಳು ಮೊದಲೇ ಜಾಗತಿಕ ಮಟ್ಟದಲ್ಲೂ ತಿಳಿಯುವಂತಾಗ ಬೇಕು. ಪ್ರವಾಸೋದ್ಯಮದ ನೆಪದಲ್ಲಿ ಮೂಲ ಸೌಕರ್‍ಯ ಕಲ್ಪಿಸುವಲ್ಲಿ ದಸರೆಯೂ ವೇದಿಕೆಯಾಗಬೇಕು. ದಸರೆಗೆ ನೀಡುವ ಅನುದಾನದಲ್ಲಿ ಪ್ರವಾಸಿಗರಿಗೆ ಅಗತ್ಯವಿರುವ ಮೂಲ ಸೌಕರ್‍ಯ ಕಲ್ಪಿಸುವ ಕೆಲಸವಾದರೆ ನಿಜಾರ್ಥದಲ್ಲಿ ಪ್ರವಾಸೋದ್ಯಮ ಬೆಳವಣಿಗೆಯಾಗುತ್ತದೆ.
ದಸರೆಗೆ ನವನವೀನತೆ ತರುವ ಜತೆಯಲ್ಲಿ ಜಾಗತಿಕ ಮಟ್ಟದಲ್ಲಿ ಇನ್ನಷ್ಟು ಪ್ರವಾಸಿಗರನ್ನು ಸೆಳೆಯಲು ಸಮಯ ಬೇಕು. ಅವಸರ ದಲ್ಲಿಯೇ ದಸರೆಗೆ ತಯಾರಿ ಮಾಡಿಕೊಂಡಾಗ ಪ್ರವಾಸೋದ್ಯಮಕ್ಕೆ ಸದೃಢತೆಯೇ ಬರುವುದಿಲ್ಲ. ಅದರ ಬದಲು ದೀರ್ಘಾವಧಿಯ ಯೋಜನೆಗಳನ್ನು ಹಾಕಿಕೊಂಡು ಅದನ್ನು ಹಂತ ಹಂತವಾಗಿ ಅನುಷ್ಠಾನ ಗೊಳಿಸಲು ಪ್ರಾಧಿಕಾರದ ಅಗತ್ಯ ಇದ್ದೇ ಇದೆ.
-ಜಿ.ಕುಮಾರನಾಯಕ್, ಹಿರಿಯ ಐಎಎಸ್ ಅಧಿಕಾರಿ, ಮೈಸೂರು ಹಿಂದಿನ ಜಿಲ್ಲಾಧಿಕಾರಿ

ತರಾತುರಿ ಬೇಡ, ಪ್ರಯೋಗ ನಡೆಯಲಿ

ಪ್ರತಿ ಸಂಚಿಕೆಯಲ್ಲೂ ದಸರಾ ಪ್ರಾಧಿಕಾರ ಕುರಿತು ವ್ಯವಸ್ಥಿತವಾಗೇ ರೂಪುಗೊಳ್ಳಬೇಕು, ಕಾಟಾಚಾರಕ್ಕೆ ಮತ್ತೊಂದು ಪ್ರಾಧಿಕಾರ ಬಲಿಯಾಗಬಾರದು ಎಂಬುದೇ  ಗಣ್ಯರು ವ್ಯಕ್ತಪಡಿಸುತ್ತಿರುವ ಒಕ್ಕೊರಲ ಅಭಿಪ್ರಾಯ.

ಶಿಸ್ತಿನ ದಸರೆಗೆ ಭೂಮಿಕೆಯಾಗಲಿ

ಪ್ರಾಧಿಕಾರ ಮೂರು ತಿಂಗಳ ವ್ಯವಸ್ಥೆಯಾಗಬೇಕೇ ? ವರ್ಷಪೂರ್ತಿ ಕ್ರಿಯಾಶೀಲವಾಗಬೇಕಾದ ಸಂಸ್ಥೆ ಯಾಗಬೇಕೇ ? ಎಂಬುದೇ ಚರ್ಚೆಯ ಮೂಲ ನೆಲೆ.
ಆ ಕುರಿತೇ - ಇಂದಿನ ಗಣ್ಯರು ಪ್ರಸ್ತಾಪಿಸಿದ್ದಾರೆ.

ಯಶಸ್ಸಿಗೆ ವಿಎಂಐ ಸೂತ್ರ

ಪ್ರಾಧಿಕಾರ ಎನ್ನುವುದು ನಾಡಹಬ್ಬ ವನ್ನು ಜಾಗತಿಕ ಮಟ್ಟದಲ್ಲಿ ಬ್ರ್ಯಾಂಡ್ ಮಾಡುವ, ಮೈಸೂರಿನ ಅಭಿವೃದ್ಧಿಗೆ ಪೂರಕವಾಗುವ ವೇದಿಕೆಯಾಗಬೇಕು. ಇದಕ್ಕೆ ಪೂರಕವಾಗಿ ದಸರೆ ಕಾರ್‍ಯಕ್ರಮ ಗಳಿಗೂ ಮೂರು ಹಂತದ ಸಮಿತಿ ಗಳಿರಬೇಕು. ಒಂದು ದೂರದೃಷ್ಟಿಯ ಸಮಿತಿ(ವಿಷನ್ ಕಮಿಟಿ) ಮತ್ತೊಂದು ನಿರ್ವಹಣಾ ಸಮಿತಿ(ಮಾನಿಟರಿಂಗ್ ಕಮಿಟಿ), ಹಾಗೂ ಅನುಷ್ಠಾನ ಸಮಿತಿ (ಇಂಪ್ಲಿಮೆಂಟೇಷನ್ ಕಮಿಟಿ).
ದಸರೆ ಹೇಗಿರಬೇಕು, ಕಾರ್ಯಕ್ರಮಗಳ ಗಂಭೀರತೆ, ಅಭಿ ವೃದ್ಧಿ ಪೂರ್ವಪರ ಚರ್ಚೆಯಾಗಿ ಒಂದು ಸೂಕ್ತ ರೂಪರೇಷೆ ಇಲ್ಲೇ ಸಿದ್ಧವಾಗಬೇಕು. ವಿವಿಧ ಕ್ಷೇತ್ರದಲ್ಲಿ ತಜ್ಞರಾದವರು, ಸಾಧಕರನ್ನು ವಿಷನ್ ಕಮಿಟಿಗೆ ಆಯ್ಕೆ ಮಾಡಬೇಕು.
೨ನೇ ಹಂತದಲ್ಲಿ ಬೇಕಾಗಿದ್ದು ಮಾನಿಟರಿಂಗ್ ಕಮಿಟಿ. ಇಲ್ಲಿ ದಸರೆಗೆ ಆಗುವ ಕೆಲಸಗಳು ಹೇಗೆ ನಡೆಯುತ್ತಿವೆ. ತಪ್ಪಾಗಿದ್ದರೆ ಅದನ್ನು ಗುರುತಿಸಿ ಹೇಳುವ, ಯೋಜನೆಯಲ್ಲೇ ಆಗುತ್ತಿರುವ ಲೋಪಗಳ ಮೇಲೆ ನಿಗಾ ಇಡುವುದು ಈ ಸಮಿತಿ ಹೊಣೆ.