ನಾಡಹಬ್ಬಕ್ಕೆ ಅಣಿಯಾದ ಸಾಂಸ್ಕೃತಿಕ ನಗರಿ

ಕುಂದೂರು ಉಮೇಶಭಟ್ಟ ಮೈಸೂರು
ರಾಜಕೀಯ ಸುನಾಮಿಯಲ್ಲಿ ಸಿಲುಕಿದ ಸರಕಾರದ ಸಂಕಷ್ಟಗಳ ಮಧ್ಯೆಯೇ ಮೈಸೂರಿನಲ್ಲಿ ೪೦೦ನೇ ವರ್ಷದ ದಸರೆ ಸಂಭ್ರಮ.
ಶುಕ್ರವಾರ ಬೆಳಗ್ಗೆ ನಾಡಿನ ಅಧಿದೇವತೆ ಚಾಮುಂಡೇಶ್ವರಿ ತಾಯಿಗೆ ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರು ಪೂಜೆ ಸಲ್ಲಿಸುವ ಮೂಲಕ ೧೦ ದಿನಗಳ ನಾಡಹಬ್ಬಕ್ಕೆ ಸಿಗಲಿದೆ ಅಧಿಕೃತ ಚಾಲನೆ.
ಬಂಡಾಯದ ಬಿಸಿಯಿಂದ ಬಸವಳಿದಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ  ಶುಕ್ರವಾರ ಬೆಳಗ್ಗೆ ನಗರಕ್ಕೆ ಆಗಮಿಸಿ ನಾಡಹಬ್ಬದ ಉದ್ಘಾಟನೆ ವೇಳೆ ಚಾಮುಂಡೇಶ್ವರಿ ತಾಯಿ ಆಶೀರ್ವಾದಕ್ಕೆ ಕಾದಿದ್ದಾರೆ. ದಶಕದ ಹಿಂದೆ ಹೊಸತನಕ್ಕೆ ತೆರೆದಿದ್ದ ದಸರೆಗೆ ಈ ವರ್ಷ ವಿಭಿನ್ನ ರೂಪ ನೀಡುವ ಪ್ರಯತ್ನವೂ  ನಡೆದಿದೆ. ಇದರ  ಜತೆಗೆ ಉಳಿತಾಯದ ಮಂತ್ರವನ್ನೂ ಪಠಿಸಲಾಗುತ್ತಿದೆ. ನಾಡಹಬ್ಬದ ಪ್ರಮುಖ ಆಕರ್ಷಣೀಯ ಕೇಂದ್ರ ಚಾಮುಂಡಿಬೆಟ್ಟ, ಅರಮನೆ ಒಳಗೊಂಡಂತೆ ಇಡೀ ನಗರವೇ ಸಿಂಗಾರಗೊಂಡಿದೆ. ಪ್ರತಿವರ್ಷದಂತೆ ಕೊನೆ ಕ್ಷಣದ ಕಾಮಗಾರಿಗಳ ಮಧ್ಯೆ ಬೆಳಕಿನಲ್ಲಿ ಮೈಸೂರು ಝಗಮಗಿಸುತ್ತಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ