ದಸರಾ ಪ್ರಾಧಿಕಾರ ಹೇಗಿರಲಿ

ಅರವಿಂದ ನಾವಡ ಮೈಸೂರು
ನಾಡಹಬ್ಬ ದಸರಾ ನಡೆಸಲೊಂದು ಪ್ರತ್ಯೇಕ ಪ್ರಾಧಿಕಾರ ಬೇಕೆಂಬ ಚಿಂತನೆ ಕೊನೆಗೂ ಮೂರ್ತ ಸ್ವರೂಪ ಪಡೆಯುವ ಹೊತ್ತು ಬಂದಿದೆ. ಈ ದಸರೆ ಮುಗಿಯುವವರೆಗೂ ಮೊಟ್ಟೆಯಾಗಿಯೇ ಇತ್ತು. ಅದಕ್ಕೆ ಕಾವು ಕೊಟ್ಟರೆ ಮರಿಯಾದೀತೆಂಬ ವಿಶ್ವಾಸವೂ ಬಹಳಷ್ಟು ಮಂದಿಯಲ್ಲಿರಲಿಲ್ಲವೇನೋ ? ಅದಕ್ಕೇ ದಿನದೂಡುವುದರಲ್ಲೇ ಆ ಮೊಟ್ಟೆ ಹಳತಾಯಿತು.
ಈಗ ಮತ್ತೊಮ್ಮೆ ಪ್ರಾಧಿಕಾರದ ಅಗತ್ಯ ಪ್ರಸ್ತಾಪವಾಗಿದೆ. ಆದರೆ ಮೊದಲ ಬಾರಿಗೆ ಕಾಲನಿಗದಿಗೊಂಡಿದೆ. ಸ್ವತಃ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎ. ರಾಮದಾಸ್ ಅವರೇ ನಾಲ್ಕು ತಿಂಗಳೊಳಗೆ ಅದರ ಕುರಿತಾದ ಕರಡು ಸಿದ್ಧಪಡಿಸಿ ಸರಕಾರಕ್ಕೆ ಸಲ್ಲಿಸುವ ಬಗ್ಗೆ ಹೇಳಿದ್ದಾರೆ. ಒಂದು ಕರಡು ಸಿದ್ಧಗೊಳ್ಳುವ ಮುನ್ನ ಅದರ ಹಿಂದೆ ನಡೆಯಬಹುದಾದ ಕಸರತ್ತು ದೊಡ್ಡದೇ. ಸಾರ್ವಜನಿಕ ಅಭಿಪ್ರಾಯ ಸಂಗ್ರಹ, ಗಣ್ಯರ ಸಲಹೆ, ಹಿಂದೆ ದಸರಾ ಆಚರಿಸಿದಾಗಿನ ಅನುಭವಗಳ ಸಂಗ್ರಹ...ಹತ್ತು ಹಲವು ಮೂಲೆಗಳಿಂದ ಬರುವ ಒಳ್ಳೆಯದನ್ನು ಕ್ರೋಡೀಕರಿಸಿ ಕರಡನ್ನು ರೂಪಿಸುವುದು ಸಹಜವೇ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ