`ಗಾಳಕ್ಕೆ ಬೀಳೋದಿಲ್ಲ

ಮತ್ತೀಕೆರೆ ಜಯರಾಮ್ ಮಂಡ್ಯ 
ಸರಕಾರ ಸುಭದ್ರಗೊಳಿಸಲು ಪುನಾರಂಭಿಸಿರುವ `ಆಪರೇಷನ್ ಕಮಲ' ಕಾರ್ಯಾಚರಣೆಯಲ್ಲಿ ಬಿಜೆಪಿ ಗಾಳಕ್ಕೆ ಬೀಳೋದಿಲ್ಲ. ಹಣ, ಅಧಿಕಾರದ ಆಮಿಷ ತಮ್ಮ ಮುಂದೆ ನಡೆಯೋದಿಲ್ಲ ಎನ್ನುವ ಸಂದೇಶವನ್ನು ಜಿಲ್ಲೆಯ ಶಾಸಕರು ಬಿಜೆಪಿಗೆ ನೀಡಿದ್ದಾರೆ.
ಬಿಜೆಪಿ ಮುಖಂಡರು ಜಿಲ್ಲೆಯ ೭ ಶಾಸಕರ ಪೈಕಿ ಜಾ.ದಳದ ಎಂ. ಶ್ರೀನಿವಾಸ್(ಮಂಡ್ಯ), ಎ.ಬಿ. ರಮೇಶ್ ಬಂಡಿಸಿದ್ದೇಗೌಡ(ಶ್ರೀರಂಗಪಟ್ಟಣ), ಕಾಂಗ್ರೆಸ್‌ನ ಕೆ. ಸುರೇಶಗೌಡ(ನಾಗಮಂಗಲ), ಕೆ.ಬಿ. ಚಂದ್ರಶೇಖರ್(ಕೆ.ಆರ್.ಪೇಟೆ) ಅವರನ್ನು ಸೆಳೆಯಲು ಸ್ಕೆಚ್ ರೂಪಿಸಿದ್ದರು.
ತಮಗೆ ಗಾಳ ಬೀಸಲು ಬಿಜೆಪಿ ರೆಡಿಯಾಗಿದೆ ಎನ್ನುವ ಸುದ್ದಿಯಿಂದ ನಾಲ್ವರು ಶಾಸಕರು ಎಚ್ಚೆತ್ತುಕೊಂಡಿದ್ದಾರೆ. ಯಾವುದೇ ಕಾರಣಕ್ಕೂ ತಾವಿರುವ ಪಕ್ಷ ತೊರೆಯುವ ಪ್ರಶ್ನೆಯೇ ಇಲ್ಲ ಎನ್ನುವುದನ್ನು ಸ್ಪಷ್ಟಪಡಿಸುವ ಮೂಲಕ ಗೊಂದಲ ನಿವಾರಣೆಗೆ ಮುಂದಾಗಿದ್ದಾರೆ.
ನಿಷ್ಠೆ ಬದಲಿಸಿದಕ್ಕೆ ತಕ್ಕ ಶಾಸ್ತಿ: ನಿಷ್ಠೆ ಬದಲಿಸಿದ್ದಕ್ಕಾಗಿ ಸಚಿವ ಸ್ಥಾನದ ಜತೆಗೆ ಶಾಸಕತ್ವಕ್ಕೂ ಕುತ್ತು ತಂದೊಡ್ಡಿಕೊಂಡಿರುವ ಮಳವಳ್ಳಿಯ ಪಕ್ಷೇತರ ಶಾಸಕ ಪಿ.ಎಂ. ನರೇಂದ್ರಸ್ವಾಮಿ ಅವರೀಗ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಜತೆ ಗುರ್ತಿಸಿಕೊಂಡಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ