ಗೆದ್ದ ಮಿತವ್ಯಯ ಮಂತ್ರ

ಪಿ. ಓಂಕಾರ್ ಮೈಸೂರು
ಹೇಳಿಕೆ ಒಂದು: ದಸರೆ ಎಂದರೆ ಕಳೆದೆರಡು ವರ್ಷಗಳದ್ದು. ಎಷ್ಟೊಂದು `ಸಂಭ್ರಮ', ಏನ್ ಕತೇ. ಈ ವರ್ಷ ಫುಲ್ ಡಲ್. ಎಲ್ಲಾ ಅಧಿಕಾರಿಗಳದ್ದೇ ದರ್ಬಾರು. ಕಾರ್‍ಯಕ್ರಮ ವೈವಿಧ್ಯದಲ್ಲಿ ಸ್ವಾರಸ್ಯಗಳೇ ಇರಲಿಲ್ಲ.
ಇನ್ನೊಂದು: ಕಳೆದೆರಡು ವರ್ಷ ಹಣವೇ ವಿಜೃಂಭಿಸಿತ್ತು. ಈ ವರ್ಷ ಕಡಿವಾಣ ಬಿದ್ದಿತಾದರೂ ಸಂಭ್ರಮಕ್ಕೆ ಕೊರತೆ ಇರಲಿಲ್ಲ. ರಾಜಕೀಯ ಅನಿಶ್ಚಿತತೆ ಮತ್ತಿತರ  ಕಾರಣಕ್ಕೆ ರಾಜಕಾರಣಗಳ `ಅತಿ ಪಾಲ್ಗೊಳ್ಳುವಿಕೆ' ತಪ್ಪಿದ್ದು ಒಳ್ಳೆಯದೇ ಆಯಿತೇನೋ. ಇದ್ದುದ ರಲ್ಲಿಯೇ ಶಿಸ್ತುಬದ್ಧ ಉತ್ಸವ ನಡೆಯಿತು.
- ಒಂದನೇ ಹೇಳಿಕೆ ದಸರೆಯ ಸಂಘಟನೆಗೆ ನಿಯೋಜಿತ ಉಪ ಸಮಿತಿಗಳ ಅಧ್ಯಕ್ಷ, ಉಪಾಧ್ಯಕ್ಷರು ಮತ್ತು ನುಂಗಣ್ಣ ಅಧಿಕಾರಗಳದ್ದು. ಸಂಭ್ರಮವನ್ನು ಹಿಂದಿನ ವರ್ಷಗಳಿಗೆ ಹೋಲಿಸಿ ನೋಡಿದ ಶ್ರೀಸಾಮಾನ್ಯ ರದ್ದು ಎರಡನೆಯದು. ಎರಡರಲ್ಲೂ ಸತ್ಯವಿದೆ.ಅಷ್ಟೇ `ಮಿತ್ಯ'ವೂ ಅಡಗಿದೆ.
ಅವಸರದ ಹೆರಿಗೆ: ಉತ್ಸವ ಸಿದ್ಧತೆ, ಸಾಂಸ್ಕೃತಿಕ ಕಾರ್‍ಯಕ್ರಮ ಗಳ ಆಯೋಜನೆ, ಸುಧಾರಣೆ, ವೈವಿಧ್ಯಕ್ಕೆ `ಜೀವ'ತುಂಬುವ ಭರವಸೆ  ಈಡೇರಿಕೆಯಲ್ಲಿ ಹಿಂದಿನ ವರ್ಷಗಳಂತೆ  ಈ ವರ್ಷವೂ ಜಿಲ್ಲಾಡಳಿತ  ಎಡವಿತು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ