ಪಿ.ಓಂಕಾರ್ ಮೈಸೂರು
ಮಿತವ್ಯಯದ ಮಂತ್ರ,ರಾಜಕೀಯ ಅನಿಶ್ಚಿತತೆ, ಕೊನೆ ಘಳಿಗೆಯ ತರಾತುರಿ, ಸಂಭ್ರಮ ತುಂಬುವ `ಶತ ಪ್ರಯತ್ನ'ದ ನಡುವೆಯೇ ನಡೆದ `ಮೈಸೂರು ದಸರೆ ' ಯ ೪೦೦ನೇ ವರ್ಷದ ಸೊಬಗು ಇನ್ನೆರಡೇ ದಿನ. ಶನಿವಾರ ನವರಾತ್ರಿ ಸಾಂಸ್ಕೃತಿಕ ರಂಗಿಗೆ ತೆರೆ. ಭಾನುವಾರ ಜಂಬೂ ಸವಾರಿ,ಪಂಜಿನ ಕವಾಯಿತು ವೈಭವ.
ಕಲೆ,ಸಾಹಿತ್ಯ,ಸಂಸ್ಕೃತಿ,ಕ್ರೀಡೆ,ಸಾಹಸ ಸಹಿತ ವೈವಿಧ್ಯಮಯ ಚಟುವಟಿಕೆಗಳನ್ನೊಳಗೊಂಡು ಮೈದಳೆದ ಹತ್ತು ದಿನದ ಸಂಭ್ರಮವನ್ನು ಸಂಪನ್ನ ಗೊಳಿಸಲು ಜಿಲ್ಲಾಡಳಿತ, ಪೊಲೀಸ್ ವ್ಯವಸ್ಥೆ ಅಂತಿಮ ಸ್ಪರ್ಶ ನೀಡುತ್ತಿದೆ.
ಅಡ್ಡಿ ಆತಂಕವಿಲ್ಲ: ಇತ್ತೀಚಿನ ವರ್ಷಗಳಲ್ಲಿ ಜಂಬೂಸವಾರಿ ಸಂಪೂರ್ಣ ನಿರಾತಂಕವಾಗಿ ನಡೆದದ್ದು ಕಡಿಮೆ. ಒಂದಿಲ್ಲೊಂದು `ವಿಘ್ನ'ದ ಪರಿಣಾಮ ಖಾಕಿ ದರಬಾರಿನಲ್ಲೇ ಜನೋತ್ಸವ ನಡೆ ಯುತ್ತಿತ್ತು. ಆದರೆ,೪೦೦ನೇ ವರ್ಷದ ದಸರೆ ವಿಶೇಷವೋ ಏನೋ ಈ ಬಾರಿ ಯಾವುದೇ `ಆತಂಕ'ದ ಸ್ಥಿತಿ ಇಲ್ಲ. ಗುರುವಾರದವ ರೆಗಿನ ರಾಜಕೀಯ ಅನಿಶ್ಚಿತತೆಯೂ ಸದ್ಯ ತಿಳಿಯಾಗಿರುವುದು `ಸವಾರಿ' ಸಂಭ್ರಮವನ್ನು ಹೆಚ್ಚಿಸುವ ನಿರೀಕ್ಷೆ ಮೂಡಿಸಿದೆ.
ಮೈಸೂರು ದಸರಾ ಎಷ್ಟೊಂದು ಸುಂದರ ! ಸುಸ್ವಾಗತ : ವಿಕ ವೀಕ್ಷಣೆ - ದಸರಾ ೨೦೧೧
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ