ಒಕ್ಕೂಟ ಹೋರಾಟಕ್ಕೆ ೬೩ ವರ್ಷ

ಆರ್.ಕೃಷ್ಣ  ಮೈಸೂರು
ಅಗಸ್ಟ್ ೧೫. ಹೊಸದಿಲ್ಲಿಯಲ್ಲಿ ತ್ರಿವರ್ಣ ಧ್ವಜ ಹಾರುತ್ತಿದ್ದಂತೆ ಇಡೀ ದೇಶ ಸಂಭ್ರಮಪಟ್ಟಿತು. ಆದರೆ ಕರ್ನಾಟಕದ ಉತ್ತರದ ತುದಿ, ದಕ್ಷಿಣದ ಕೊನೆಯ ಭಾಗದಲ್ಲಿ ಸ್ವಾತಂತ್ರ್ಯೋತ್ಸವದ ಸಡಗರ ಕಾಣಲೇ ಇಲ್ಲ. ಅಲ್ಲಿ ಹೈದರಾಬಾದ್ ನಿಜಾಮ, ಇಲ್ಲಿ ಮೈಸೂರು ಸಂಸ್ಥಾನದ ಒಡೆಯರು ಒಕ್ಕೂಟದಲ್ಲಿ ಸೇರ್ಪಡೆಯಾಗಲು ಸಮ್ಮತಿಸಲೇ ಇಲ್ಲ. ಪರಿಣಾಮ ಈ ಎರಡೂ ಪ್ರಭುತ್ವಗಳ ಆಳ್ವಿಕೆಗೆ ಒಳಪಟ್ಟಿದ್ದ ಪ್ರದೇಶಗಳಲ್ಲಿ ಮತ್ತೊಂದು ಸ್ವಾತಂತ್ರ್ಯ ಸಂಗ್ರಾಮ.
ತಮ್ಮ ಆಳ್ವಿಕೆಯ ಪ್ರದೇಶಗಳನ್ನು ಒಕ್ಕೂಟದಲ್ಲಿ ವಿಲೀನ ಮಾಡುವುದು ರಾಜರಿಗೆ ಬಿಟ್ಟ ವಿಚಾರ ಎಂದು ಅಧಿಕಾರ ಹಸ್ತಾಂತರ ಸಂದರ್ಭದಲ್ಲಿ ಆಯ್ಕೆ ಇಟ್ಟಿದ್ದರು. ಅದನ್ನೇ ಮುಂದಿಟ್ಟುಕೊಂಡು ಮೈಸೂರು ಸಂಸ್ಥಾನದ ದಿವಾನ ಆರ್ಕಾಟ ರಾಮಸ್ವಾಮಿ ಜನರ ಕೈಗೆ ಅಧಿಕಾರ ಕೊಡಲು ಒಪ್ಪಲಿಲ್ಲ. ಜತೆಗೆ ಐಕ್ಯತೆಯ ಸಂಕೇತವಾದ ತ್ರಿವರ್ಣಧ್ವಜ ಹಾರಿಸಲೂ ಬಿಡಲಿಲ್ಲ. ಒಕ್ಕೂಟ ವ್ಯವಸ್ಥೆ ಸೇರಿಕೊಳ್ಳಲು ಮಹಾರಾಜರು ಸಮ್ಮತಿಸಿದರೂ ಜನರ ಸರ್ಕಾರ ದೂರದ ಮಾತಾಗಿಯೇ ಉಳಿಯಿತು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ