ಪಿ.ಓಂಕಾರ್ ಮೈಸೂರು
ಪಾರಂಪರಿಕ,ಸಾಂಸ್ಕೃತಿಕ ನಗರಿ ಮೈಸೂರಿಗೆ `ಹಸಿರು ತೋರಣ'ದಂತಿರುವ,ಅಳಿದುಳಿದ ಸಾಲುಮರಗಳಿಗೆ ಇನ್ನು ಉಳಿಗಾಲವಿಲ್ಲ !
-ಹಸಿರು ಹನನಕ್ಕೆ ಸರಳ ಅವಕಾಶಗಳಿಲ್ಲದಿದ್ದರೂ ಅಭಿವೃದ್ದಿಯ `ಮಾಯೆ` ಇತ್ತೀಚಿನ ವರ್ಷಗಳಲ್ಲಿ ನಗರದ ಮೂರ್ನಾಲ್ಕು ಸಾವಿರ ಮರಗಳನ್ನು ಉರುಳಿಸಿದೆ. ಇನ್ನು ಮುಂದೆ ಕೇಳುವಂತೆಯೇ ಇಲ್ಲ,`ಮಾಯೆ'ಯ ವಶದಲ್ಲಿರುವ ಸ್ವಹಿತಾಸಕ್ತರ ಕೈಗೇ ಸರಕಾರ `ಮರ ಪ್ರಾಧಿಕಾರ 'ಅಧಿಕಾರದ ಕೊಡಲಿ ಕೊಡುವ ಮೂಲಕ ಅಭಿವೃದ್ಧಿಗೆ `ಅಡ್ಡಿ'ಯಾದ ಮರಗಳ ತೆರವಿಗೆ ಸರಳ ಮಾರ್ಗ ತೋರಿಸಿದೆ.
ಅಂದರೆ ?: ಹಿಂದೆ, ನಗರದಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿ ನೆಪದಲ್ಲಿ ಮರ ಕಡಿಯುವುದು ಸುಲಭವಿರಲಿಲ್ಲ. ಅರಣ್ಯಾಧಿಕಾರಿ, ಸೇವಾ ಸಂಸ್ಥೆ ಪ್ರತಿನಿಧಿಗಳನ್ನು ಒಳಗೊಂಡ `ವೃಕ್ಷ ನ್ಯಾಯಾಲಯ'ದ ಮುಂದೆ ವಿಷಯ ಪ್ರಸ್ತಾಪವಾಗಿ, ಆಕ್ಷೇಪಣೆ ಆಹ್ವಾನಿಸಿ,ವಿಚಾರಣೆ ನಡೆದು ತೀರಾ ಅಗತ್ಯ ಎನ್ನಿಸಿದರೆ ಮಾತ್ರ ಅನುಮತಿ ನೀಡಲಾಗುತ್ತಿತ್ತು.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ