೨ನೇ ದಿನ: ಸಂಭ್ರಮಕ್ಕೆ ಇನ್ನಷ್ಟು ರಂಗು

ಪಿ. ಓಂಕಾರ್ ಮೈಸೂರು
ನವರಾತ್ರಿಯ ೨ನೇ ದಿನ ಶನಿವಾರ  ದಸರಾ ಮಹೋ ತ್ಸವದ ಸಂಭ್ರಮಕ್ಕೆ ಇನ್ನಷ್ಟು ವೈವಿಧ್ಯಗಳ ಸೇರ್ಪಡೆ.
ನಾಡಿನಲ್ಲಿ ರಾಜಕೀಯ ಕಾರ್ಮೋಡ  ದಟ್ಟೈಸಿ ದ್ದರೂ ಉತ್ಸವ ಉತ್ಸಾಹಕ್ಕೆ ಯಾವುದೇ ಭಂಗವಿರಲಿಲ್ಲ. ಮೊದಲ ದಿನ ಚೆಲ್ಲಾಟವಾಡಿದ್ದ ಮಳೆ ‘ರಜೆ ’ಹಾಕಿ ಆಹ್ಲಾದಕರ  ಸಂಜೆಯ ಆಸ್ವಾದಕ್ಕೆ ಅವಕಾಶ ನೀಡಿತ್ತು.
ಆದರೆ, ಕ್ಷಣ ಕ್ಷಣದ ‘ರಾಜಕೀಯ ಮನರಂಜನೆ’ ಯನ್ನು ವೀಕ್ಷಿಸಲು ಜನ ಟೀವಿ ಪರದೆಗಳಿಗೆ ಅಂಟಿ ಕೊಂಡಿದ್ದ ರಿಂದಲೋ ಏನೋ ಅರಮನೆ, ಮನರಂಜನಾ ದಸರಾ ಸೇರಿದಂತೆ ವಿವಿಧೆಡೆ  ನಿರೀಕ್ಷೆಯಂತೆ ಜನಸ್ತೋಮ ಇರ ಲಿಲ್ಲ. ರಾಜಕಾರಣಗಳ ‘ದಟ್ಟಣೆ’ಯೂ ಕಡಿಮೆ ಇತ್ತು.
ಶೋಭಾ ಊಟ: ವಿವಿಧ ಕಾರ‍್ಯಕ್ರಮಗಳ ಉದ್ಘಾಟನೆಗೆ ಆಗಮಿಸಬೇಕಿದ್ದ ಆಹ್ವಾನಿತ ಮಂತ್ರಿಗಳು ಬರಲಿಲ್ಲ. ಆದರೆ, ಶುಕ್ರವಾರವೇ ‘ಅನಿರೀಕ್ಷಿತ’ ಭೇಟಿ ನೀಡಿದ  ಸಚಿವೆ ಶೋಭಾ ಕರಂದ್ಲಾಜೆ  ಶನಿವಾರ ಮಧ್ಯಾಹ್ನ ಅರಮನೆ ಅಂಗಳದಲ್ಲಿ ದಸರೆ ಗಜಪಡೆಯ ಮಾವುತರು,ಕಾವಾಡಿಗಳ ಕುಟುಂಬದವರಿಗೆ ‘ಭೋಜನ ಕೂಟ’ ಏರ್ಪಡಿಸಿ ಗಮನ  ಸೆಳೆದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ