‘ರೈತ ದರ್ಬಾರ್’ ಶುರು

ವಿಕ ಸುದ್ದಿಲೋಕ ಮೈಸೂರು
ದಸರಾ ಮಹೋತ್ಸವದ ಸೊಬಗಿಗೆ ಶನಿವಾರ ಅನ್ನದಾತ ರೈತರ ಸಂಭ್ರಮ ಸೇರ್ಪಡೆ.
ಕೃಷಿ ವಸ್ತುಪ್ರದರ್ಶನ, ವಿವಿಧ ಸ್ಪರ್ಧೆ, ಗ್ರಾಮೀಣ ಕ್ರೀಡೆ, ಉಪನ್ಯಾಸ, ಚರ್ಚೆ ಮತ್ತಿತರ ಕಾರ‍್ಯಕ್ರಮಗಳನ್ನೊಳಗೊಂಡು ಜೆಕೆ ಮೈದಾನದಲ್ಲಿ ಆಯೋಜಿಸಿರುವ ‘ರೈತ ದಸರಾ’ವನ್ನು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎ.ರಾಮದಾಸ್ ಉದ್ಘಾಟಿಸಿ, ವೀಕ್ಷಿಸಿದರು.
ಅಧಿಕಾರಿಗಳಿಗೆ ಸೂಚನೆ: ನಂತರ, ನಡೆದ ಕಾರ‍್ಯಕ್ರಮದಲ್ಲಿ ರೈತರೊಂದಿಗೆ ‘ಸಂವಾದ’ ನಡೆಸಿದ ಅವರು ರೈತರಿಗೆ ಮಾಹಿತಿ ನೀಡಲು ಪ್ರತಿ ಪ್ರದರ್ಶನ ಮಳಿಗೆಗೆ ಪ್ರಗತಿಪರ ರೈತರನ್ನು ಸಂಪ ನ್ಮೂಲ ವ್ಯಕ್ತಿಗಳನ್ನಾಗಿ ನಿಯೋಜಿಸುವಂತೆ, ಉತ್ತಮ ಇಳುವರಿ ಪಡೆದ ರೈತರ ವಿವರ, ಭಾವಚಿತ್ರವನ್ನು ಮಳಿಗೆಗಳಲ್ಲಿ ಪ್ರದರ್ಶಿಸು ವಂತೆ ಅಧಿಕಾರಿಗಳಿಗೆ ಸೂಚಿಸಿದರು.
ರೈತ ದಸರೆಯನ್ನು ರೈತರಷ್ಟೆ ನೋಡು ವುದಲ್ಲ. ನಗರದ ಜನರು, ವಿಶೇಷವಾಗಿ ಶಾಲಾ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡಿ ಅನ್ನದಾತರ ಕಷ್ಟ, ನಷ್ಟಗಳನ್ನು, ಕೃಷಿಯ ಹಿಂದಿನ ಶ್ರಮವನ್ನು ಅರಿಯ ಬೇಕು. ಅ.೧೦ರಿಂದ ದಸರೆ ವೀಕ್ಷಿಸಲು ಬರುವ ಶಾಲಾ ಮಕ್ಕಳನ್ನು ಇಲ್ಲಿಗೂ ಭೇಟಿ ನೀಡಲು ಕಲ್ಪಿಸುವುದಾಗಿ ತಿಳಿಸಿದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ