ಚಿಗುರು ಕವಿಗೋಷ್ಠಿಯಲ್ಲಿ ಅರಳಿದೆಲ್ಲವೂ ಹೂವು

ವಿಕ ಸುದ್ದಿಲೋಕ ಮೈಸೂರು
ನಾಡಹಬ್ಬ ದಸರೆಯಲ್ಲಿ ಚಿಗುರು ಕವಿಗಳ ಕಾವ್ಯ ವೈಭವ. ನವರಾತ್ರಿ ವೈಭೋಗವನ್ನು ಸಾರುವ ಕವಿತೆ, ಅಂದು ಇಂದಿನ ದಸರಾ ಸಂಭ್ರಮ, ದೇಶ ಪ್ರೇಮ, ಕನ್ನಡ ಪ್ರೀತಿ ಕವಿತೆಗಳಲ್ಲಿ ಹೊರಹೊಮ್ಮಿದರೆ, ಗಾಂಧಿ ತತ್ತ್ವಗಳ ಹರಣ, ಕಾಣೆಯಾದ ಕೋಮು ಸೌಹಾರ್ದ, ಕುವೆಂಪು ಚಿಂತನೆಗಳು ಅಡಕವಾಗಿದ್ದ ಕಾವ್ಯವೂ ಪಲ್ಲವಿಸಿದ್ದವು. ಪ್ರೇಮ ರಾಗವೂ ಅರಳಿತ್ತು.
ಅದು ನಟರಾಜ ಕಾಲೇಜು ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ದಸರಾ ಚಿಗುರು ಕವಿಗೋಷ್ಠಿ.`ಹೊಸ ಚಿಗುರು ಹಳೆ ಬೇರು ಕೂಡಿರಲು ಮರ ಸೊಬಗು' ಎಂಬಂತೆ ಹಿರಿಯರ ಸಾನ್ನಿಧ್ಯದಲ್ಲಿ ಕಿರಿಯರು ಕಾವ್ಯ ವಾಚಿಸಿ ಪ್ರಶಂಸೆಗೆ ಒಳಗಾದರು. ೭೭ ರ ವಯಸ್ಸಿನ ಹಿರಿಯ ಸಾಹಿತಿ ಎ.ಕೆ.ರಾಮೇಶ್ವರ ಅವರು ಮಕ್ಕಳ ಕಾವ್ಯಗೋಷ್ಠಿಗೆ ಚಾಲನೆ ನೀಡಿದರೆ, ೧೭ರ ಹರೆಯದ ಕಿರಿಯ ಕವಯಿತ್ರಿ ಚೈತ್ರಾ ಬೇವಿನಗಿಡದ ಅಧ್ಯಕ್ಷತೆ ವಹಿಸಿದ್ದು ವಿಶೇಷ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ