ದಸರಾ ದರ್ಶನ: ಊಟವಿಲ್ಲದ್ದಕ್ಕೇ ಅಸಮಾಧಾನ

ವಿಕ ಸುದ್ದಿಲೋಕ ಮೈಸೂರು
ಈ ಬಾರಿಯ ದಸರಾ ದರ್ಶನ ಇಂದಿಗೆ ಮುಗಿಯಿತು. ಅಷ್ಟೂ ದಿನ ಸಾರ್ವಜನಿಕರಿಂದ ಕೇಳಿಬಂದ ಒಂದೇ ಒಂದು ದೂರೆಂದರೆ `ಊರೆಲ್ಲಾ ತೋರಿಸಿದಿರಿ, ಉಪವಾಸ ಹಾಕಿಸಿದಿರಿ'.
ಕಳೆದ ವರ್ಷ ದಸರಾ ದರ್ಶನಕ್ಕೆ ಬಂದವರಿಗೆ ಬೆಳಗ್ಗೆ ತಿಂಡಿ ಮತ್ತು ಮಧ್ಯಾಹ್ನ ಊಟದ ವ್ಯವಸ್ಥೆ ಕಲ್ಪಿಸಲಾಗಿತ್ತು. ಈ ವರ್ಷ ಅದೇ ವ್ಯವಸ್ಥೆ ಮುಂದುವರಿಸಲು  ಜಿಲ್ಲಾಧಿಕಾರಿಗಳನ್ನೊಳಗೊಂಡ ಉನ್ನತ ಸಮಿತಿ ಒಪ್ಪಲಿಲ್ಲ. ಹಾಗಾಗಿ ದಸರಾ ದರ್ಶನ ಸಮಿತಿಯವರು ೫೦ ರೂ. ಪಡೆದು ಊರನ್ನಷ್ಟೇ ತೋರಿಸಿದರು. ಈ ಹಿನ್ನೆಲೆಯಲ್ಲಿ ಸಾರ್ವತ್ರಿಕ ಟೀಕೆ ಗುರಿಯಾಗಿದ್ದು ಉನ್ನತ ಸಮಿತಿಯ ತೀರ್ಮಾನ.
`ಮಧ್ಯಾಹ್ನವೆಲ್ಲಾ ಹೊಟ್ಟೆ ಹಸಿದಾಗ ನೋಡೋಕೆ ಎಲ್ಲಿ ಮನಸ್ಸು ಬರುತ್ತೆ. ವರ್ಷಕ್ಕೊಂದು ಥರ ವ್ಯವಸ್ಥೆ ಆದ್ರೆ ಕಷ್ಟ ' ಎಂಬುದು ದಸರಾ ನೋಡಲು ಬಂದವರ ಅಭಿಪ್ರಾಯವಲ್ಲ, ಅಸಮಾಧಾನ.
ಗುರುವಾರ ಮೈಸೂರು, ಚಾಮರಾಜನಗರ, ಕೊಡಗು ಜಿಲ್ಲೆಗಳ ವಿವಿಧ ತಾಲೂಕುಗಳ ಜನರನ್ನು ಪೂರ್ವನಿಗದಿ ಯಂತೆ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಮೈಸೂರಿಗೆ ಕರೆತರ ಲಾಗಿತ್ತು. ಆಗಮಿಸಿದ ಸಾವಿರಾರು ಜನರಿಗೆ ಅರಮನೆ, ಮೃಗಾಲಯ, ಚಾಮುಂಡಿಬೆಟ್ಟಗಳ ದರ್ಶನ ಮಾಡಿಸ ಲಾಯಿತು. ದಸರಾ ದರ್ಶನದ ಬಗ್ಗೆ ಹಳ್ಳಿಗರು ಉತ್ತಮ ಅಭಿಪ್ರಾಯ ವ್ಯಕ್ತಪಡಿಸಿದರೂ, ಹಿಂದೆ ಊಟ ಕೊಡ್ತಾ ಇದ್ರು, ಈ ಬಾರಿ ಏಕಿಲ್ಲ? ಈ ಸರಕಾರವೇ ಸರಿ ಇಲ್ಲ ಎಂದು ಟೀಕಿಸಿದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ