ಅರಳು ಕವಿಗಳ ಕಾವ್ಯದಲ್ಲಿ ಅರಳಲಿಲ್ಲ ರೂಪಕ


ವಿಕ ಸುದ್ದಿಲೋಕ ಮೈಸೂರು
`ಯಾವುದು ಮಾತುಗಳನ್ನು ಕಡಿಮೆಗೊಳಿಸಿ, ರೂಪಕ ಗಳ ಮೂಲಕ ರೂಪಿತವಾಗುತ್ತದೆಯೋ ಅದೇ ಶ್ರೇಷ್ಠ ಕಾವ್ಯ' ಎಂಬ ಭಾಷಣ ಕೇಳಿ ಕಾವ್ಯ ಓದಲು ಸಾಲು ಗಟ್ಟಿದ ಉದಯೋನ್ಮುಖ ಕವಿಗಳು ವಾಚಿಸಿದ್ದು ಮಾತ್ರ `ವಾಚಾಳಿ'ಕವನಗಳನ್ನೇ !
ಎಲ್ಲವೂ ನೇರ-ನೇರ. ಕೆಲವಂತೂ ಕಾವ್ಯವೆಂಬ ಗದ್ಯಗಳು. ದಸರಾ ಅಂಗವಾಗಿ ಮಂಗಳವಾರ ಬೆಳಗ್ಗೆ ನಡೆದ ಅರಳು ಕವಿಗೋಷ್ಠಿ `ಎಂದಿನ' ಕವಿಗೋಷ್ಠಿ ಯಾಗಿ ದಸರೆಯ ಇತಿಹಾಸದಲ್ಲಿ ದಾಖಲಾಯಿತು.
ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದ ಪ್ರಾಧ್ಯಾಪಕ ಪ್ರೊ. ರಾಜಪ್ಪ ದಳವಾಯಿ ಕಾವ್ಯಗೋಷ್ಠಿ ಉದ್ಘಾಟಿಸಿದರು. ಬಳಿಕ ಮಾತನಾಡಿ, ಕಾವ್ಯ ಎಲ್ಲ ಕಾಲದ ತತ್ತ್ವಜ್ಞಾನ. ಅದು ಎಲ್ಲ ಸಮಕಾಲೀನ ಬದುಕಿನ ಸ್ಪಂದನೆಯೂ ಸಹ. ವ್ಯವಸ್ಥೆಯ ಗ್ರಹಿಕೆ, ಅದರ ಅಪಾಯಗಳನ್ನು ಮುಂಜಾಗ್ರತೆಯಾಗಿ ಗ್ರಹಿಸುವುದು ಕಾವ್ಯದ ಸ್ವಭಾವ ಎಂದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ