ಜನರಿಗೆ ದರ್ಶನವಿತ್ತ ತೀರ್ಥರೂಪಿಣಿ

ಅಜ್ಜಮಾಡ ರಮೇಶ್ ಕುಟ್ಟಪ್ಪ, ತಲಕಾವೇರಿ
ಪ್ರಕೃತಿ ವೈಭವದ ವನಸಿರಿಯ ಬ್ರಹ್ಮಗಿರಿ ಬೆಟ್ಟದಲ್ಲಿ ಉಗಮವಾಗಿರುವ ನಾಡಿನ ಅಸಂಖ್ಯಾತ ಜನರ ಪಾಲಿನ ಜೀವಾಳ ಕಾವೇರಿ ನದಿಯ ಉಗಮ ಸ್ಥಾನ ಬ್ರಹ್ಮಕುಂಡಿಕೆಯಲ್ಲಿ ಸೋಮವಾರ ನಸುಕಿನ ವೇಳೆ (೩.೧೨) ತೀರ್ಥರೂಪಿಣಿಯಾಗಿ ಮೇಲೇರಿ ಕಾವೇರಿ ಮಾತೆ ಭಕ್ತ ಸಮೂಹಕ್ಕೆ ದರ್ಶನ ನೀಡಿದಳು.
ಪ್ರಾತಃಕಾಲದಲ್ಲಿ ಪವಿತ್ರ ತೀರ್ಥೋದ್ಭವ ಘಟಿಸಿದ ಹಿನ್ನೆಲೆಯಲ್ಲಿ ಈ ಹಿಂದಿನ ವರ್ಷಗಳಲ್ಲಿ ಕಂಡುಬರುತ್ತಿದ್ದ ಭಕ್ತ ಸಮೂಹದ ಭಾರಿ  ಒತ್ತಡ ಈ ವರ್ಷ ಕಾಣಿಸಿಕೊಳ್ಳಲಿಲ್ಲ. ಸಹಾಸ್ರಾರು ಸಂಖ್ಯೆಯಲ್ಲಿ ಸೇರಿದ್ದ ಭಾವಪರವಶರಾಗಿದ್ದ ಭಕ್ತ ಸಮೂಹ ಮಾತ್ರ ಕಾವೇರಿ ತೀರ್ಥಕ್ಕಾಗಿ ಮುಗಿಬಿದ್ದಿದ್ದರಿಂದ ಅರ್ಚಕ ಸಮೂಹ ಕುಂಡಿಕೆಯಲ್ಲಿ ಮುಂಜಾನೆ ವೇಳೆ ಸಂಕಷ್ಟ ಅನುಭವಿಸಿದರು.
ಬ್ರಹ್ಮಗಿರಿ ಬೆಟ್ಟವನ್ನು ಸಂಪೂರ್ಣವಾಗಿ ಆವರಿಸಿದ್ದ ದಟ್ಟ ಮಂಜು, ಮೈನಡುಗುವ ಚಳಿ, ಹನಿ- ಹನಿಯಾಗಿ ಬೀಳುತ್ತಿದ್ದ ಇಬ್ಬನಿ, ತಂಪಾ ದ ಹವಾಮಾನದ ಆಹ್ಲಾದಕರ ವಾತಾವರಣದಲ್ಲಿ ನಂಬಿಕೆಯ ತೀರ್ಥೋದ್ಭವ  ನಡೆಯಿತು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ