*ಅಜ್ಜಮಾಡ ರಮೇಶ್ ಕುಟ್ಟಪ್ಪ ಮಡಿಕೇರಿ
ರಾಜ್ಯದ ಮುಖ್ಯಮಂತ್ರಿಯಾಗಿ ಕೊಡಗಿನ ಅಳಿಯ ಡಿ.ವಿ. ಸದಾನಂದ ಗೌಡ ಅಧಿಕಾರ ವಹಿಸಿಕೊಂಡ ಬಳಿಕ ಆಡಳಿತಾರೂಢ ಬಿಜೆಪಿಯಲ್ಲಿ ಕೂಡುವ- ಕಳೆಯುವ ಲೆಕ್ಕಾಚಾರ ಪ್ರಾರಂಭವಾಗಿವೆ.
ಚಿರಪರಿಚಿತ ಡಿವಿ ಆಯ್ಕೆ ಕೊಡಗಿನಲ್ಲಿ ಹಲವರಿಗೆ ಸಿಹಿ, ಮತ್ತೆ ಕೆಲವರಿಗೆ ಕಹಿಯಾಗಿ ಪರಿಣಮಿಸಿದೆ. ಕೆಲವರು ಪರಿಸ್ಥಿತಿ ಲಾಭ ಪಡೆಯುವುದು ಹೇಗೆ ಎಂಬ ಹವಣಿಕೆಯಲ್ಲಿದ್ದಾರೆ.
೩ನೇ ಬಾರಿಗೆ ಶಾಸಕರಾಗಿರುವ ಮಡಿಕೇರಿ ಕ್ಷೇತ್ರದ ಎಂ.ಪಿ. ಅಪ್ಪಚ್ಚು ರಂಜನ್ ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನ ಅಲಂಕರಿಸಿದ ಕಾಲಘಟ್ಟದಲ್ಲಿಯೇ ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದರು. ಸಚಿವ ಸಂಪುಟದ ಪ್ರಥಮ ವಿಸ್ತರಣೆ ಸಂದರ್ಭದಲ್ಲಿ ಇದ್ದ ಹೆಸರು ಅಂತಿಮ ಕ್ಷಣದಲ್ಲಿ ನಡೆದ ಕಸರತ್ತಿನಿಂದ ತಪ್ಪಿಹೋಯಿತು. ಅನಂತರದ ವಿದ್ಯಮಾನದಲ್ಲಿ ಅಪ್ಪಚ್ಚು ಪರ ಲಾಬಿ ಮಾಡುವವರಿಗಿಂತ ಅಡ್ಡಗಾಲು ಹಾಕುವವರ ಪ್ರಭಾವವೇ ಹೆಚ್ಚಾಯಿತು. ಹೀಗಾಗಿ ಅವರ ಆಸೆ ಕೈಗೂಡಲೇ ಇಲ್ಲ.
ರಾಜ್ಯದ ಮುಖ್ಯಮಂತ್ರಿಯಾಗಿ ಕೊಡಗಿನ ಅಳಿಯ ಡಿ.ವಿ. ಸದಾನಂದ ಗೌಡ ಅಧಿಕಾರ ವಹಿಸಿಕೊಂಡ ಬಳಿಕ ಆಡಳಿತಾರೂಢ ಬಿಜೆಪಿಯಲ್ಲಿ ಕೂಡುವ- ಕಳೆಯುವ ಲೆಕ್ಕಾಚಾರ ಪ್ರಾರಂಭವಾಗಿವೆ.
ಚಿರಪರಿಚಿತ ಡಿವಿ ಆಯ್ಕೆ ಕೊಡಗಿನಲ್ಲಿ ಹಲವರಿಗೆ ಸಿಹಿ, ಮತ್ತೆ ಕೆಲವರಿಗೆ ಕಹಿಯಾಗಿ ಪರಿಣಮಿಸಿದೆ. ಕೆಲವರು ಪರಿಸ್ಥಿತಿ ಲಾಭ ಪಡೆಯುವುದು ಹೇಗೆ ಎಂಬ ಹವಣಿಕೆಯಲ್ಲಿದ್ದಾರೆ.
೩ನೇ ಬಾರಿಗೆ ಶಾಸಕರಾಗಿರುವ ಮಡಿಕೇರಿ ಕ್ಷೇತ್ರದ ಎಂ.ಪಿ. ಅಪ್ಪಚ್ಚು ರಂಜನ್ ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನ ಅಲಂಕರಿಸಿದ ಕಾಲಘಟ್ಟದಲ್ಲಿಯೇ ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದರು. ಸಚಿವ ಸಂಪುಟದ ಪ್ರಥಮ ವಿಸ್ತರಣೆ ಸಂದರ್ಭದಲ್ಲಿ ಇದ್ದ ಹೆಸರು ಅಂತಿಮ ಕ್ಷಣದಲ್ಲಿ ನಡೆದ ಕಸರತ್ತಿನಿಂದ ತಪ್ಪಿಹೋಯಿತು. ಅನಂತರದ ವಿದ್ಯಮಾನದಲ್ಲಿ ಅಪ್ಪಚ್ಚು ಪರ ಲಾಬಿ ಮಾಡುವವರಿಗಿಂತ ಅಡ್ಡಗಾಲು ಹಾಕುವವರ ಪ್ರಭಾವವೇ ಹೆಚ್ಚಾಯಿತು. ಹೀಗಾಗಿ ಅವರ ಆಸೆ ಕೈಗೂಡಲೇ ಇಲ್ಲ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ