ತಲೆ ಕೆಡಿಸಿಕೊಳ್ಳದ ಜನಪ್ರತಿನಿಧಿಗಳು, ಜನತೆಗೆ ನಿತ್ಯ ಬವಣೆ

ಪುರುಷೋತ್ತಮ್ ಸಂತೇಮರಹಳ್ಳಿ
ಚಾ.ನಗರ ತಾ.ಹೋಬಳಿ ಕೇಂದ್ರಗಳ ಪೈಕಿ ಸಂತೇಮರಹಳ್ಳಿ ಪ್ರಮುಖವಾದದ್ದು. ಇದು ಜಿಲ್ಲಾ ಕೇಂದ್ರ ಸೇರಿದಂತೆ ೫ ತಾಲೂಕು ಕೇಂದ್ರಗಳಿಗೆ ಸಂಪರ್ಕ ಕಲ್ಪಿಸುವ ಜಂಕ್ಷನ್. ಆದರೆ ಈ ಊರಿನ ರಸ್ತೆಗಳು ಓಡಾಟಕ್ಕೆ ಯೋಗ್ಯವಾಗಿಲ್ಲ. ಇಲ್ಲಿನ ರಸ್ತೆಗಳ ಸ್ಥಿತಿ ಬಗ್ಗೆ ಜನಪ್ರತಿನಿಧಿಗಳಾದವರೂ ಕಿಂಚಿತ್ತೂ ತಲೆ ಕೆಡಿಸಿಕೊಂಡಿಲ್ಲ.  ಇದರಿಂದಾಗಿ ಜನತೆ ನಿತ್ಯ ಬವಣೆ ಪಡುವಂತಾಗಿದೆ.
ಮರಹಳ್ಳಿಯಲ್ಲಿ ಪ್ರತಿ ಮಂಗಳವಾರ ಬೃಹತ್ ಪ್ರಮಾಣದ ಸಂತೆ ನಡೆಯುತ್ತದೆ. ಹೀಗಾಗಿಯೇ ಇದಕ್ಕೆ ಸಂತೇಮರಹಳ್ಳಿ ಎಂಬ ಹೆಸರು ಬಂದಿದೆ. ಜಿಲ್ಲೆ ಸೇರಿದಂತೆ ಹೊರ ಜಿಲ್ಲೆಗಳಿಂದಲೂ ರೈತರು ತಮ್ಮ ಕೃಷಿ ಉತ್ಪನ್ನಗಳನ್ನು ತಂದು ಈ ಸಂತೆಯಲ್ಲಿ  ಮಾರಾಟ ಮಾಡುತ್ತಾರೆ. ಊರು ಇಷ್ಟು ಜನಪ್ರಿಯವಾಗಿದ್ದರೂ ರಸ್ತೆಗಳ ವಿಚಾರದಲ್ಲಿ ಶಾಪಗ್ರಸ್ತ. ಊರಿನ ಮಧ್ಯೆ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ ೨೦೯ ಅನ್ನು ಹೊರತು ಪಡಿಸಿ ಇನ್ನಾವ ರಸ್ತೆಯೂ `ಸುಮಾರು' ಎಂಬ ಮಟ್ಟಿಗೂ ಇಲ್ಲ.

ಎಲ್ಲಾ ಶಿವಮಯವೋ

ದಿನವಿಡೀ ಬಿಲ್ವಪ್ರಿಯ ಪರಶಿವನ ದರ್ಶನ ಪಡೆದ ಭಕ್ತರು, ಧ್ಯಾನ, ಜಾಗರಣೆಯಲ್ಲಿ ಹರನಾಮ ಜಪಿಸಿದರು. ಲಿಂಗರೂಪಿಗೆ ಸಹಸ್ರ ಸಹಸ್ರ ಬಿಲ್ವಪತ್ರೆ ಅರ್ಚನೆ, ಹಾಲಿನ ಅಭಿಷೇಕ, ಪೂಜೆ ಪುನಸ್ಕಾರಗಳು ಶಿವ ದೇವಾಲಯಗಳಲ್ಲಿ ನಡೆದವು. ಅಲಂಕಾರಭೂಷಿತ ಗಂಗಾಧರನನ್ನು ಕಣ್ತುಂಬಿಕೊಳ್ಳಲು ಭಕ್ತ ಸಮೂಹ ಸಾಲುಗಟ್ಟಿ ನಿಂತಿತ್ತು.

ಪ್ರಸಾದದಂತೆ ಗುತ್ತಿಗೆ ಹಂಚಿಕೆ, ಕಳಪೆಯಾದ ಗುಣಮಟ್ಟ

ಮಡಹಳ್ಳಿ ಮಹೇಶ್ ಗುಂಡ್ಲುಪೇಟೆ
ಒಳಚರಂಡಿ ನಿರ್ಮಾಣ ಕಾಮಗಾರಿ ಪರಿಣಾಮ ಪಟ್ಟಣದ ಬಹುತೇಕ ಎಲ್ಲ ರಸ್ತೆಗಳು ಹಾಳಾಗಿವೆ. ಗುಂಡ್ಲುಪೇಟೆಯ ಮುಖ್ಯ ರಸ್ತೆಗಳನ್ನು ಹೊರತು ಪಡಿಸಿ ಉಳಿದವುಗಳಲ್ಲಿ ಗುಂಡಿ ನಡುವೆ ರಸ್ತೆ ಹುಡುಕುವ ಸ್ಥಿತಿ. ರಸ್ತೆಗಳ ವಿಚಾರದಲ್ಲಿ  ಪುರಸಭೆ ನಿದ್ರೆಗೆ ಜಾರಿದೆ. ಹೀಗಾಗಿ ಹದಗೆಟ್ಟ ರಸ್ತೆಗಳದ್ದೇ ಕಾರುಬಾರು.
ಈಚೆಗೆ ನಿರ್ಮಿಸಿದ್ದ ಡಾಂಬರು ಹಾಗೂ ಮೆಟ್ಲಿಂಗ್ ರಸ್ತೆಗಳನ್ನು ಒಳ ಚರಂಡಿ ನಿರ್ಮಾಣಕ್ಕಾಗಿ ಅಗೆಯಲಾಗಿದೆ. ಮ್ಯಾನ್ ಹೋಲ್‌ಗಳು ರಸ್ತೆಗಿಂತ ಎತ್ತರವಾಗಿದ್ದು, ಅಪಾಯಕ್ಕೆ ಆಹ್ವಾನಿಸುತ್ತಿವೆ.  ಇದರಿಂದ ವಾಹನ ಸಂಚಾರ ಪಟ್ಟಣದಲ್ಲಿ ತ್ರಾಸದಾಯಕ. ರಸ್ತೆ ಅಭಿವೃದ್ಧಿಗೆ ಬಿಡುಗಡೆಯಾದ ಹಣ ಜಲ್ಲಿ ಕಲ್ಲಿನಡಿ ಹೂತು ಹೋಗಿದೆ. 
ರಸ್ತೆ ಕಾಮಗಾರಿಗಳ ಗುತ್ತಿಗೆಯನ್ನು `ಪ್ರಸಾದ' ಹಂಚಿದಂತೆ ಹಂಚಿದ ಪರಿಣಾಮ ಗುಣಮಟ್ಟವೂ ಅವಿತುಕೊಂಡಿದೆ. ಮಳೆ ಬಿದ್ದ ವೇಳೆಯಲ್ಲಂತೂ ಕಾಮಗಾರಿ ಬಂಡವಾಳ ಎಲ್ಲರಿಗೂ ರಾಚುತ್ತದೆ.

ಬಿಪಿ ಗುಳಿಗೆ ಹೋಲುವ ಪೆಪ್ಪರಮೆಂಟು !

ವಿಕ ವಿಶೇಷ ಮೈಸೂರು
ತರಹೇವಾರಿ ಮಾತ್ರೆಗಳು ಗೊತ್ತು.ಪೆಪ್ಪರಮೆಂಟುಗಳಲ್ಲೂ ವೈವಿಧ್ಯ ಸಾಮಾನ್ಯ.ಮಾತ್ರೆ ಮಾದರಿ ಪೆಪ್ಪರಮೆಂಟುಗಳೂ ಇವೆ ಗೊತ್ತಾ?
ನಗರ ಮತ್ತು ಜಿಲ್ಲೆಯ ಸಣ್ಣ ಪುಟ್ಟ ಅಂಗಡಿಗಳಲ್ಲಿ ಮಾತ್ರೆಯನ್ನು ಹೋಲುವ  ಪೆಪ್ಪರಮೆಂಟು ಮಾರಾಟ ಭರ್ಜರಿ. ಈವರೆಗೆ ಯಾವುದೇ ಅನಾಹುತ ಆಗಿಲ್ಲ ವಾದರೂ, ಸಂಭವಿಸುವ  ಸಾಧ್ಯತೆಯನ್ನು ತಳ್ಳಿಹಾಕಲಾಗದು.

ಗೆದ್ದು ಬಾ ಭಾರತ

ಮೊನ್ನೆ ನಡೆದ ಭಾರತ-ಇಂಗ್ಲೆಂಡ್ ವಿಶ್ವಕಪ್ ಕ್ರಿಕೆಟ್ ಪಂದ್ಯ ಚಿಣ್ಣರಿಂದ ಹಿಡಿದು ಅಜ್ಜರವರೆಗೂ ರೋಮಾಂಚನ ಮೂಡಿಸಿತ್ತು. ಚಾನಲ್ ಬದಲಾಯಿಸದೇ, ಕುಳಿತ್ತಲ್ಲಿಂದ ಮೇಲೆರದೇ, ಉಸಿರು ಬಿಗಿ ಹಿಡಿದು ನೋಡಿದಂಥ ಮ್ಯಾಚ್ ಅದು. ಆ ಕುರಿತು ಅಭಿಮಾನಿಗಳು ಪ್ರತಿಕ್ರಿಯೆ ನೀಡಿರುವುದು ಹೀಗೆ...

ಕಳಪೆ ಕಾಮಗಾರಿ ಅವಾಂತರ, ಮಳೆ ಬಂದರೆ ಬಣ್ಣಗೇಡು

ಕೋಟಂಬಳ್ಳಿ ಗುರುಸ್ವಾಮಿ ಕೊಳ್ಳೇಗಾಲ 
ಪಟ್ಟಣದಲ್ಲಿ  ರಸ್ತೆ ಕಳೆದಿದೆ! ಹುಡುಕಿಕೊಡಿ ಎನ್ನುವುದು ಜನತೆ ಒಕ್ಕೊರಲು. ರಸ್ತೆಯನ್ನು ಕಾಲುದಾರಿ ನುಂಗಿದೆಯೋ, ಕಾಲು ದಾರಿಯಲ್ಲಿ ರಸ್ತೆ ಕಳೆದು ಹೋಗಿದೆಯೋ, ತಿಳಿಯುತ್ತಿಲ್ಲ್ಲ. ಕಾಲುದಾರಿಯನ್ನೇ ರಸ್ತೆ ಎನ್ನಬೇಕು ಅಷ್ಟರ ಮಟ್ಟಿಗೆ ಸ್ಥಿತಿ ಹೀನಾಯ. ಹಗಲಿನಲ್ಲಿ ದೀಪ ಹಿಡಿದು ಹುಡುಕಿದರೂ ಸುಸ್ಥಿತಿ ರಸ್ತೆ ಒಂದೂ ಕಂಡುಬರದು. ಕಾಲು ದಾರಿಯಂತಿರುವ ಮಾರ್ಗವನ್ನು ರಸ್ತೆ ಎನ್ನಬೇಕು.
ಇದಕ್ಕೆ ಅಪೂರ್ಣ ಕಾಮಗಾರಿಯ ಕೃಪೆ ಒಂದೆಡೆ ಇದ್ದರೆ, ಕೆಲ ರಸ್ತೆಗಳ ಕಾಮಗಾರಿ ನಡೆದಿರುವುದು ನೀಜ. ಆದರೆ, ಡಾಂಬರೀಕರಣವಾಗಿದೆ ಎನ್ನುವುದಕ್ಕೆ ಪುರಾವೆಯೇ ಸಿಗದಂತಿದೆ ಇನ್ನೊಂದೆಡೆ. ಅಲ್ಲದೇ, ಮಳೆ ಬಂದರೆ ಕಾಮಗಾರಿ ಬಣ್ಣ ಪೂರ್ಣ ಪ್ರಮಾಣದಲ್ಲಿ ಬಯಲು. ಡಾಂಬರೀಕರಣ ಮಾಡುವಾಗ ಒಂದು ರಸ್ತೆಯನ್ನು ಎರಡು ಭಾಗ ಮಾಡಿ  ಕೆಲಸ ಮಾಡಲಾಗುತ್ತದೆ. ಒಂದು ಭಾಗ ಪೂರ್ಣವಾಗಿ ಇನ್ನೊಂದರ ಕೆಲಸ ಕೈಗೆತ್ತಿಕೊಳ್ಳುವಷ್ಟರಲ್ಲಿ  ಮೊದಲ ಭಾಗ ಯಥಾಸ್ಥಿತಿಗೆ ಬರುತ್ತದೆ.