ನಮ್ಮನೆ ಹೆಣ್ ಸಂತಾನವೇ ಹೋಯ್ತಲ್ಲ...ದೇವ್ರೇ !

ವಿಕ ಸುದ್ದಿಲೋಕ ಮೈಸೂರು
ಒಂದೆಡೆ  ನೋವು-ಆಕ್ರಂದನ, ಇನ್ನೊಂದೆಡೆ ಸಿಟ್ಟು, ಆಕ್ರೋಶ- ಪ್ರತಿಭಟನೆ, ಮತ್ತೊಂದೆಡೆ ಕನಿಕರ, ವಿಷಾದ...
ಸೂತಕದ ಮನೆಯಲ್ಲಿ ದುಃಖ ಮಾತ್ರ ಮನೆ  ಮಾಡಿರುತ್ತದೆ. ಆದರೆ, ಸಾಕ್ಷಾತ್ ಜವರಾಯ ಕಣ್ಣೆದುರಿಗೆ  ಜನರನ್ನು ಎಳೆದೊಯ್ದರೆ, ಉಳಿದವರು ಏನು ಮಾಡಬೇಕು ? ಮಹಿಳೆಯರು ಮತ್ತು ಮಕ್ಕಳು ಸೇರಿ ೨೭ ಜನರನ್ನು ಆಪೋಷನ ತೆಗೆದುಕೊಂಡ ಮೈಸೂರು-ನಂಜನಗೂಡು ಹೆದ್ದಾರಿಯ ಉಂಡಬತ್ತಿನ ಕೆರೆಯ ದಂಡೆ ಮಂಗಳವಾರ ಸಂಜೆ ಶೋಕದ ಮಡುವು. ಜನರ ಸಿಟ್ಟು-ಸೆಡವು-ಆಕ್ರೋಶಕ್ಕೆ ಬಲಿಯಾದ ಕೆಲವು ಅಧಿಕಾರಿಗಳು ಮತ್ತು ಚುನಾಯಿತ ಪ್ರತಿನಿಧಿಗಳು ಸ್ವಲ್ಪದರಲ್ಲಿ  ಸಾರ್ವಜನಿಕರ ಧರ್ಮದೇಟಿನಿಂದ ಪಾರಾದರು !

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ