ಮೈಸೂರು ದಸರಾ ಎಷ್ಟೊಂದು ಸುಂದರ ! ಸುಸ್ವಾಗತ : ವಿಕ ವೀಕ್ಷಣೆ - ದಸರಾ ೨೦೧೧
ಗುಂಡಿ ಗುಂಡಿ = ಗುಂಡೀ
ಶ್ರೀಮಂಗಲ/ ಗೋಣಿಕೊಪ್ಪಲು
ದಕ್ಷಿಣ ಕೊಡಗು ಅಂದ್ರೆ ಮೊದಲು ಕಣ್ಣ ಮುಂದೆ ಹಾದು ಹೋಗುವುದು ದುಸ್ಥಿತಿಗೆ ತಲುಪಿರುವ ರಸ್ತೆಗಳು. ಇಲ್ಲಿ ಆಡಳಿತ ವ್ಯವಸ್ಥೆ ಇದೆಯೇ ಎಂಬುದರ ಬಗ್ಗೆಯೇ ಅನುಮಾನ. ಕೆಸರುಗದ್ದೆ ಕ್ರೀಡಾಕೂಟಕ್ಕೆ ಈ ರಸ್ತೆಗಳು ಯೋಗ್ಯ. ಬೇಡದ್ದಕ್ಕೆಲ್ಲ ಬೊಬ್ಬೆ ಹೊಡೆಯುವ ಜನಪ್ರತಿನಿಧಿಗಳು, ಸಂಘಟನೆಗಳು, ರಾಜಕೀಯ ಪಕ್ಷಗಳು ಹದಗೆಟ್ಟ ರಸ್ತೆ ವಿಷಯದಲ್ಲಿ ಮೌನವಷ್ಟೇ ಅಲ್ಲ, ಜಾಣ ಕುರುಡು. ಮುಖ್ಯರಸ್ತೆ ಸೇರಿದಂತೆ ಗ್ರಾಮೀಣ ಭಾಗದ ರಸ್ತೆಗಳು ಸಂಚಾರಕ್ಕೆ ಅಯೋಗ್ಯ. ಪೊನ್ನಂಪೇಟೆ- ಕುಟ್ಟ (೨೭ ಕಿ.ಮೀ.) ಹೆಸರಿಗೆ ಮಾತ್ರ ಅಂತಾರಾಜ್ಯ ಹೆದ್ದಾರಿ. ಹೇಳಲಾಗದಷ್ಟು ಕುಲಗೆಟ್ಟುಹೋಗಿದೆ. ಶ್ರೀಮಂಗಲ, ಕುಟ್ಟ, ಪೊನ್ನಂ ಪೇಟೆ, ಗೋಣಿಕೊಪ್ಪಲು, ಬಾಳೆಲೆ, ಬಿ.ಶೆಟ್ಟಿಗೇರಿ ಸೇರಿದಂತೆ ದಕ್ಷಿಣ ಕೊಡಗಿನ ಬಹುತೇಕ ಗ್ರಾಮಗಳ ರಸ್ತೆಗಳ ಬಗ್ಗೆ ಹೇಳುವಂತೇ ಇಲ್ಲ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ