ಕ್ಲೀನ್ ಸಿಟಿ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಕ್ಲೀನ್ ಸಿಟಿ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಎಲ್ ನೋಡಿದ್ರೂ ಇದೇ ಕಥೆ... !

ಮೈಸೂರು ನಿವೃತ್ತರ ಸ್ವರ್ಗ, ಉತ್ತಮ ಹವಾಗುಣವಿರುವ ನಿರ್ಮಲ ನಗರ ಎಂಬಿತ್ಯಾದಿ ಅಭಿದಾನಕ್ಕೆ ಪಾತ್ರವಾಗಿದೆ. ಆದರೆ ನಗರವನ್ನೊಮ್ಮೆ  ಸುತ್ತಿ ಬಂದರೆ  ನಿರ್ಮಲ ನಗರದ ಬಣ್ಣ ಬಟಬಯಲು. ಯಾವುದೇ ರಸ್ತೆಗೆ ಅಡಿಯಿಟ್ಟರೂ  ತ್ಯಾಜ್ಯರಾಶಿ, ಗಬ್ಬುನಾರುವ ಚರಂಡಿಗಳು, ಅಂದಗೆಡಿಸುವ ದೃಶ್ಯಗಳು ಎದ್ದು ಕಾಣುತ್ತದೆ. ತ್ಯಾಗರಾಜ , ನಾರಾಯಣಶಾಸ್ತ್ರಿ  ರಸ್ತೆ ಮತ್ತು ಇಲ್ಲಿನ ಅಕ್ಕಪಕ್ಕದ ಪ್ರದೇಶಗಳಲ್ಲಿ ಕಣ್ಣು ಹಾಯಿಸಿದರೆ ಸಾಕ್ಷಾತ್ ಕಾಣಬಹುದು.

ಕ್ಲೀನ್ ಅಲ್ಲ, ಡರ್ಟಿ ಸಿಟಿ


‘ನಮ್ಮದು ಸ್ವಚ್ಛ ನಗರ’ ಎಂದು ಬೀಗುವ ಮಂದಿ ಒಮ್ಮೆ ಹೃದಯ ಭಾಗದಲ್ಲಿ ಕಣ್ಣು ಬಿಟ್ಟು ನೋಡುತ್ತಾ ನಡೆದರೆ ಅನೈರ್ಮಲ್ಯದ ದಿವ್ಯದರ್ಶನ ಖಂಡಿತ. ದೇವರಾಜ ಮಾರುಕಟ್ಟೆ  ಮತ್ತು ರೈಲ್ವೆ ನಿಲ್ದಾಣ ಸುತ್ತಲಿನ ‘ಕ್ಲೀನ್ ಸಿಟಿ’ಯ ನೋಟಗಳಿವು.

ಮೈಸೂರಲ್ಲಿ ಕ್ಲೀನೇ ಇಲ್ಲ ರೀ... !

ಮೈಸೂರಿಗೆ ಬಸ್ ಮೂಲಕ ಬರುವ ಪ್ರಯಾಣಿಕರು ಗ್ರಾಮಾಂತರ ಬಸ್ ನಿಲ್ದಾಣದ ಸುತ್ತಮುತ್ತಲಿನ  ಈ ಸ್ಥಿತಿ ನೋಡಿದರೆ, ವಾಪಸ್ ಹೋಗುವಾಗ ಅವರು ಕೊಂಡೊಯ್ಯವ ಭಾವನೆ ಹೇಗಿರಬೇಡ ? ಅಯ್ಯೋ ಮೈಸೂರೇನ್ರಿ ?, ಸ್ವಲ್ಪನೂ ಕ್ಲೀನ್ ಇಲ್ಲ. ಅದ್ಯಾವ ಸಂಸ್ಥೆಯವರು ಸ್ವಚ್ಛತೆಯಲ್ಲಿ ಎರಡನೇ ನಗರ ಎಂದು ಬಿರುದು ನೀಡಿದರೋ, ದೇವರೇ ಬಲ್ಲ ಎಂದು ಗೇಲಿ ಮಾಡುವುದು ನಿಶ್ಚಿತ.

ಇದೇ ನಮ್ಮ ಸಿಟಿ..ಕಣ್ಣುಮುಚ್ಚಿ ಮೂಗುಮುಚ್ಚಿ !

ನಗರದ ‘ಅಶುಚಿತ್ವ’ ಸಾರುವ ಮತ್ತಷ್ಟು ಚಿತ್ರಗಳು ಇಲ್ಲಿ ಸೆರೆ ಯಾಗಿವೆ. ಇದು ಇಟ್ಟಿಗೆಗೂಡು ಹಾಗೂ ಅರಮನೆ ಸುತ್ತ ಮುತ್ತಲಿನ ‘ಅವ್ಯವಸ್ಥೆ’!. ಕಟ್ಟಡ ನಿರ್ಮಾಣಕ್ಕೆ ತಂದ ಇಟ್ಟಿಗೆ, ಕಲ್ಲು. ರಸ್ತೆಯನ್ನೇ ಆಕ್ರಮಿಸಿಕೊಂಡಿವೆ. ಗೋಡೆ ಪೋಸ್ಟರ್, ಪಕ್ಕದಲ್ಲೇ ಕಸದ ರಾಶಿ... ನಗರದ ಅಂದಗೆಡಿ ಸುತ್ತಿರುವುದಕ್ಕೆ ಸಾಕ್ಷೀಭೂತವಾಗಿವೆ. ಸಾರ್ವಜನಿಕರೂ ಇದಕ್ಕೆ ಛಾಯಾಚಿತ್ರ, ಅಭಿಪ್ರಾಯ ಕಳುಹಿಸಬಹುದು.

ಹೊಂಡ ಸಿಟಿಯಾಯ್ತು; ಈಗ ಕ್ಲೀನ್ ಸಿಟಿ

ವಿಜಯ ಕರ್ನಾಟಕ ಪತ್ರಿಕೆ ಆರಂಭಿಸಿದ ‘ಸ್ವಲ್ಪ ಅಡ್ಜಸ್ಟ್ ಮಾಡಬೇಡಿ’ಯ ‘ಹೊಂಡ ಸಿಟಿ’ ಪ್ರಚಾರೋಂದಲನಕ್ಕೆ ಸಿಕ್ಕ ಸಾರ್ವಜನಿಕರ ಪ್ರತಿಕ್ರಿಯೆ ನಿಜಕ್ಕೂ ಅಚ್ಚರಿ ಮೂಡಿಸುವಂಥದ್ದು. ಈಗ ನಮ್ಮ ನಗರದ ಸ್ಥಿತಿಯ ಅನಾವರಣಗೊಳಿಸಲು ಹೊರಟಿದ್ದೇವೆ. ಈ ಪ್ರಚಾರೋಂದಲನದ ಹೆಸರು ‘ಕ್ಲೀನ್ ಸಿಟಿ’. ನಮ್ಮ ನಗರ ಚೆನ್ನಾಗಿದೆಯೇ ಎಂಬ ಪ್ರಶ್ನೆ ಕೇಳುವ ಹಾಗೂ ಒಂದಿಷ್ಟು ಛಾಯಾಚಿತ್ರಗಳ ಜತೆಗೇ ತಾಜಾ ಸ್ಥಿತಿಯನ್ನು ಅನಾವರಣಗೊಳಿಸುವ ಪ್ರಯತ್ನವಿದು. ಪತ್ರಿಕೆಯ ಛಾಯಾಗ್ರಾಹಕ ನಾಗೇಶ್ ಪಾಣತ್ತಲೆಯವರು ತಮ್ಮ ಚಿತ್ರಗಳ ಮೂಲಕವೇ ಬಿಚ್ಚಿಟ್ಟಿದ್ದಾರೆ. ದಸರೆಗೆ ಕಳೆಗಟ್ಟಲು ಕೊಳೆ ತೊಲಗಿಸಿ ಎಂಬುದೇ ನಮ್ಮ ಧ್ಯೇಯ.