*ಡಿ.ಆರ್.ಅಶೋಕ ರಾಮ್/ ಪಿ.ಓಂಕಾರ್
`ಸಂಸತ್ತಿನಲ್ಲಿ ಚೆನ್ನಾಗಿ ಮಾತನಾಡುವವರು, ಪ್ರಶ್ನೆ ಕೇಳುವವರು ಒಳ್ಳೆಯ ಸಂಸದರು. ಜನರಿಗೆ ಇಂಥವರೇ ಬೇಕು, ಇವರಿದ್ದರೇ ಅಭಿವೃದ್ಧಿ' ಇಂತಹ ಮಾತುಗಳು ಹಳೆಯ ಕಾಲದ್ದು . ಈ ಕಾಲದಲ್ಲಿ ಇದೆಲ್ಲಾ ರಾಜಕಾರಣಿಗೆ ಅರ್ಹತೆಯಲ್ಲ ಅನ್ನೋ ಮಾತುಗಳು ಸಾಮಾನ್ಯ. ಆದರೆ, ಇವಿಷ್ಟು ಗುಣವಿದ್ದರೂ ಐದೂವರೆ ದಶಕಗಳ ಹಿಂದೆಯೂ ಚುನಾವಣೆಯಲ್ಲಿ ಸೋತವರು ಈಗ ಬದುಕಿನಿಂದಲೂ ಹೊರ ನಡೆದಿದ್ದಾರೆ. ಮೈಸೂರಿನಿಂದ ಮೊದಲ ಲೋಕಸಭೆ ಪ್ರವೇಶಿಸಿ ಘಟಾನುಘಟಿಗಳ ನಡುವೆ ನಿಂತು ಹೆಸರು ಮಾಡಿದ ಎಂ.ಎಸ್. ಗುರುಪಾದಸ್ವಾಮಿ ಅವರೇ ಈ ರಾಜಕಾರಣಿ.
೧೯೫೨ ರಲ್ಲಿ ಮೈಸೂರು ದ್ವಿಸದಸ್ಯ ಕ್ಷೇತ್ರದಿಂದ ಅಂದಿನ ಹಣಕಾಸು ಸಚಿವ ಎಚ್.ಸಿ.ದಾಸಪ್ಪ ಅವರ ವಿರುದ್ಧ ಸ್ಪರ್ಧಿಸಿದಾಗ ಮಾಲಂಗಿ ಶಿವಲಿಂಗ ಗುರುಪಾದಸ್ವಾಮಿ ಅವರಿಗೆ ಕೇವಲ ೨೯ ವರ್ಷ. ಕಿಸಾನ್ ಮೋರ್ಚಾ ಪ್ರಜಾಪಾರ್ಟಿ ಅಭ್ಯರ್ಥಿಯಾಗಿದ್ದ ಗುರುಪಾದಸ್ವಾಮಿ ಎಲ್ಲರೂ ಅಚ್ಚರಿಗೊಳ್ಳುವಂತೆ ಗೆದ್ದರು. ನಂತರ ೧೯೫೬ ರಲ್ಲಿ ಪ್ರಜಾ ಸೋಷಿಯಲಿಸ್ಟ್ ಪಾರ್ಟಿಯಿಂದ ಸ್ಪರ್ಧಿಸಿ ಎಲ್ಲರೂ ಅಚ್ಚರಿಗೊಳ್ಳು ವಂತೆ ಸೋತರು. ಪಿಎಸ್ಪಿಯ ರಾಜ್ಯ ಅಧ್ಯಕ್ಷರೂ ಆಗಿದ್ದರು.
ಎಲ್ಲಿಯ ದಾಸಪ್ಪ ಎಲ್ಲಿಯ ಗುರುಪಾದ?
*ಚೀ.ಜ.ರಾಜೀವ
ಸ್ವಾತಂತ್ರ್ಯ ಭಾರತದ ಮೊದಲ ಸಾರ್ವತ್ರಿಕ ಚುನಾವಣೆಯಿಂದ ಹಿಡಿದು ಕಳೆದ ಲೋಕಸಭೆ ಚುನಾವಣೆಯನ್ನು ಕಂಡಿರುವ, ಈ ಎಲ್ಲ ಚುನಾವಣೆಗಳಲ್ಲಿ ಭೌತಿಕವಾಗಿ ಇಲ್ಲವೇ ಬೌದ್ಧಿಕವಾಗಿ ತೊಡಗಿಸಿಕೊಂಡಿದ್ದ ದೇಶದ ಬೆರಳೆಣಿಕೆ ರಾಜಕಾರಣಿಗಳ ಪೈಕಿ ಎಂ. ಎಸ್. ಗುರುಪಾದಸ್ವಾಮಿ ಒಬ್ಬರು. ಹಾಗಾಗಿಯೇ ಏನೋ ಗುರುಪಾದಸ್ವಾಮಿ ಅವರೊಂದಿಗೆ ಮಾತಿಗಿಳಿದರೆ ರಾಜಕೀಯದಲ್ಲಿ ದೇಶ ಪರ್ಯಟನೆ ಮಾತ್ರವಲ್ಲ, ವಿಶ್ವ ಪರ್ಯಟನೆಯನ್ನೇ ಮಾಡಿಕೊಂಡು ಬರಬಹುದಿತ್ತು.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ