ವಿಕ ಸುದ್ದಿಲೋಕ ಮೈಸೂರು
ರಾತ್ರಿ ಸರಿಯಾಗಿ ನಿದ್ದೆ ಬರಲ್ಲ. ಸ್ವಲ್ಪ ಸದ್ದಾದರೂ ಏನೋ ಆತಂಕ. ಕಳ್ಳರ ಭಯ. ಹಾವು, ಚೇಳು, ಹುಳು ಹುಪ್ಪಟೆಗಳ ಭೀತಿ. ಒಟ್ಟಿನಲ್ಲಿ ನೆಮ್ಮದಿ ಎಂಬುದೇ ಇಲ್ಲ !
-ನಿವೇದಿತ ನಗರದ ನಿವಾಸಿಯೊಬ್ಬರ ಆತಂಕ ಅವರದಷ್ಟೆ ಅಲ್ಲ. ನಗರದ ವಿವಿಧ ಬಡಾವಣೆಯ ಸಾವಿರಾರು ಜನರದ್ದು. ಕಾರಣ ಒಂದೇ. ಖಾಲಿ ನಿವೇಶನಗಳು.
ಮನೆ ಪಕ್ಕ, ಎದುರು,ಹಿಂಭಾಗ, ಕೆಲವೆಡೆ ಅಕ್ಕ ಪಕ್ಕ-ಹಿಂದೆ ಮುಂದೆ ಎರಡು-ಮೂರು ಕಡೆಯ ಖಾಲಿ ನಿವೇಶನಗಳಲ್ಲಿ `ದಟ್ಟ ಅಡವಿ' ಯಂತೆ ಪೊದೆ ಬೆಳೆದು ನಿಂತಿದ್ದರೆ, ಅಲ್ಲಿಂದ ಆಗಾಗ ಹಾವು, ಚೇಳು, ಹುಳು ಹುಪ್ಪಟೆಗಳು ದರ್ಶನ ನೀಡುತ್ತಿದ್ದರೆ ಯಾರಿಗೆ ನೆಮ್ಮದಿ ಇದ್ದೀತು?
ಕಸ, ಕಳೆಮಯ: ಜೆ.ಪಿ.ನಗರ,ವಿಜಯನಗರದ ವಿವಿಧ ಹಂತ, ಕುವೆಂಪು ನಗರ, ವಿವೇಕಾನಂದ ನಗರ, ರಾಮಕೃಷ್ಣ ನಗರ, ನಿಮಿಷಾಂಬ ಬಡಾವಣೆ, ಶ್ರೀರಾಂಪುರ, ಅರವಿಂದನಗರ,ಶಾರದಾದೇವಿ ನಗರ ಮತ್ತಿತರ ಕಡೆ ಮುಖ್ಯರಸ್ತೆ, ಅಡ್ಡರಸ್ತೆ ಎಂಬ ಭೇದವಿಲ್ಲದೆ ಖಾಲಿ ನಿವೇಶನಗಳು `ಕಸ ಕಳೆ ಪೊದೆ ಮಯ'ವಾಗಿವೆ. ಕಳ್ಳ ಹೊಕ್ಕು ಕುಳಿತರೂ ಗೊತ್ತಾಗದಷ್ಟು ದಟ್ಟ ಪೊದೆ. ಹಲವು ನಿವೇಶನಗಳಂತೂ ಸಾರ್ವಜನಿಕ ಶೌಚಾಲಯ ಮತ್ತು ಕಸದ ತೊಟ್ಟಿಗಳಾಗಿ `ರೂಪಾಂತರ'ಗೊಳ್ಳುವ ಮೂಲಕ ಒಟ್ಟು ಪರಿಸರವನ್ನೇ ಅಸಹನೀಯಗೊಳಿಸಿವೆ. ಜಯನಗರದ ಕೆಲವೆಡೆಯೂ ಇದೇ ಸ್ಥಿತಿ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ