ರಸ್ತೆಯಲ್ಲಿ ಪವಡಿಸುವೆ


ರಾಜ್ಯ ಸರಕಾರದ ಗಮನ ಸೆಳೆಯಲು ರಸ್ತೆಯಲ್ಲಿ ಪವಡಿಸಿಯೇ ಪ್ರತಿಭಟಿಸುತ್ತೇನೆ ಎಂದು ಶಾಸಕ ಕೆ.ವೆಂಕಟೇಶ್ ತೀಕ್ಷ್ಣ ಪ್ರತಿಕ್ರಿಯೆ ನೀಡಿದರು.
ವಿಜಯ ಕರ್ನಾಟಕದಲ್ಲಿ ಸೋಮವಾರ `ಪವಡಿಸಿದ ವೆಂಕಟೇಶ' ತಲೆಬರಹದಲ್ಲಿ ಪ್ರಕಟವಾದ `ಹೊಂಡ ಸಿಟಿ ವಿಕ ಅಭಿ ಯಾನ'ಕ್ಕೆ ಪ್ರತಿಕ್ರಿಯಿಸಿ, ಪಟ್ಟಣ ಸೇರಿದಂತೆ ತಾಲೂಕಿನ ಮುಖ್ಯರಸ್ತೆಗಳ ದುಸ್ಥಿತಿಯ ಬಗ್ಗೆ ಅನೇಕ ಬಾರಿ ಸಂಬಂಧಿಸಿದ ಅಧಿಕಾರಿಗಳು, ಮಂತ್ರಿಗಳ ಕಚೇರಿಗೆ ಪತ್ರ ಬರೆದು, ಮೌಖಿಕವಾಗಿ ವಿವರಿಸಿದ್ದರೂ ಪ್ರಯೋಜ ನ ವಾಗಿಲ್ಲ. ಮೂಲಸೌಕರ್ಯಗಳ ಅಭಿವೃದ್ಧ್ದಿಗೆ ಕಿಂಚಿತ್ ಅನುದಾನ ನೀಡದೆ ಸರಕಾರ ತಾರತಮ್ಯ ಅನುಸರಿಸುತ್ತಿದೆ ಎಂದು ಆರೋಪಿಸಿದರು.
ಮೂರ್ಖ ಮುಖ್ಯಮಂತ್ರಿ :ಮೈಸೂರು ಜಿಲ್ಲೆಯಲ್ಲಿ ಅತಿಹೆಚ್ಚು  ಮಳೆಯಿಂದ ಕೋಟ್ಯಂತರ ರೂ. ನಷ್ಟ ಅನುಭವಿಸುತ್ತಿರುವ ತಾಲೂಕಿನ ಜನತೆಗೆ ಸೂಕ್ತ ಪರಿಹಾರ ದೊರಕಿಸದೆ ಆದ್ಯತೆ ಅಲ್ಲದ ಸೀರೆ, ಲಂಗ ಹಂಚಲು ಮುಂದಾಗಿರುವ ಯಡಿಯೂರಪ್ಪ ಮೂರ್ಖ ಮುಖ್ಯಮಂತ್ರಿ ಎಂದು ಟೀಕಿಸಿದ ಅವರು, ಆಡಳಿತ ಪಕ್ಷದಲ್ಲೇ ಹೆಚ್ಚು ಕಾಲ ಕಳೆದ ನಾವು ಎಂದೂ ಇತರೆ ಪಕ್ಷದ ಸದಸ್ಯರ ಕ್ಷೇತ್ರಗಳಿಗೆ ಈ ಧೋರಣೆ ತೋರಿಲ್ಲ.
 ಇಂದು ಹೋರಾಟ  ಅನಿವಾರ್‍ಯವಾಗಿದ್ದು ರಸ್ತೆಗಳ ನಿರ್ಮಾಣದ ಬಗ್ಗೆ ಸರಕಾರದ ಗಮನ ಸೆಳೆಯಲು ಪಟ್ಟಣದ ಬೆಟ್ಟದಪುರ ಸರ್ಕಲ್ ಬಳಿ ೫ ಸಾವಿರಕ್ಕೂ ಹೆಚ್ಚು  ಕಾರ್ಯಕರ್ತರೊಂದಿಗೆ ಅನಿರ್ದಿಷ್ಟಾವಧಿ ರಸ್ತೆ ತಡೆ ನಡೆಸುವುದಾಗಿ ತಿಳಿಸಿದ್ದಾರೆ.
ಪ.ಪಂ.ನಿರ್ಲಕ್ಷ್ಯದ ಬಗ್ಗೆ ನಾಚಿಕೆ
ಟೌನ್ ಪಂಚಾಯಿತಿ ಸದಸ್ಯರಿಗೆ ಸ್ವಾರ್ಥ ವೇ ಹೆಚ್ಚಾಗಿದ್ದು ಜನರ ಅಭಿವೃದ್ಧಿಯ ಬಗ್ಗೆ ಗಮನಹರಿಸುತ್ತಿಲ್ಲ . ಇಂಥ ಸದಸ್ಯರನ್ನು ಒಳಗೊಂಡ ಪ.ಪಂ.ಗೆ ತೆರಳಲು ನಾಚಿಕೆ ಯಾಗುತ್ತಿದೆ ಎಂದು ವಿಷಾದದಿಂದ ಹೇಳಿದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ