ನಾಟಕ ಕರ್ನಾಟಕ ರಂಗಾಯಣದ ನಿರ್ದೇಶಕ ಸ್ಥಾನಕ್ಕೆ ಬಿ.ಜಯಶ್ರೀ ರಾಜೀನಾಮೆ ನೀಡಿದ್ದಾರೆ. ಆ ಮೂಲಕ 3 ತಿಂಗಳಿಂದ ರಂಗಾಯಣದ ಅಂಗಳದಲ್ಲಿ ನಡೆದ 'ಕದನ ಕುತೂಹಲಭರಿತ ನಾಟಕ'ಕ್ಕೆ ತಾವೇ ಮುಂದಾಗಿ ತಾತ್ಕಲಿಕ ತೆರೆ ಎಳೆದಿದ್ದಾರೆ.
ಈಗಾಗಲೇ ಮೂವರು ಹಳೆ ಸದಸ್ಯ(ರಿಪೀಟರ್ಸ್)ರಿಂದಲೇ ತುಂಬಿರುವ ಮೈಸೂರಿನ ರಂಗಾಯಣದ ರಂಗ ಸಮಾಜಕ್ಕೆ ಮತ್ತೊಬ್ಬ ಹಳಬರನ್ನೇ ಸೇರಿಸುವ ಪ್ರಯತ್ನ ನಡೆದಿರುವುದು ರಂಗವಲಯದಲ್ಲಿ ವಿವಾದಕ್ಕೆ ಗುರಿಯಾಗಿದೆ.
ರಂಗಸಮಾಜಕ್ಕೆ ಮೂರು ಹಿಂದಿನ ಸದಸ್ಯರನ್ನೇ ನೇಮಕ ಮಾಡುವ ಮೂಲಕ ವಿವಾದ ಸೃಷ್ಟಿಸಿದ್ದ ರಾಜ್ಯ ಸರಕಾರ, ಕೆ.ಶ್ರೀನಿವಾಸ್ ಎಂಬ 'ಅನಾಮಧೇಯ'ವ್ಯಕ್ತಿಯನ್ನು ಸದಸ್ಯರನ್ನಾಗಿ ನೇಮಕ ಮಾಡಿರುವುದು ಮತ್ತೊಂದು 'ಹಾಸ್ಯ ನಾಟಕ'ಕ್ಕೆ ಕಾರಣವಾಗಿದೆ.
ಒಂದೂವರೆ ವರ್ಷದಿಂದ ಕಾಲಿ ಇದ್ದ ನಿರ್ದೇಶಕ ಸ್ಥಾನ ಕೊನೆಗೂ ಭರ್ತಿಯಾಗಿದೆ. ರಂಗಾಯಣಕ್ಕೆ ಹೊಸ ನೀರು ಹರಿದು ಹೊಸದಾಗಬೇಕು ಎಂಬ ಮಾತು ಕೇಳಿ ಬರುತ್ತಿರುವಾಗಲೇ ರಂಗಕರ್ಮಿ ಹಾಗೂ ಕಲಾವಿದೆ ಬಿ.ಜಯಶ್ರೀ ನಿರ್ದೇಶಕರಾಗಿ ಬರುತ್ತಿದ್ದಾರೆ.