ಮೈಸೂರು ದಸರಾ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಮೈಸೂರು ದಸರಾ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಈ ದಸರೆಗೆ ವಾಹನ ನಿಲುಗಡೆ ಶುಲ್ಕವಿರದು ?


ದಸರಾ ವಸ್ತುಪ್ರದರ್ಶನ ವೀಕ್ಷಣೆಗೆ ಬರುವವರಿಗೆ ಈ ಬಾರಿ ವಾಹನ ಪಾರ್ಕಿಂಗ್ 'ಶುಲ್ಕ ಸುಲಿಗೆ'ಯ ಕಿರಿಕಿರಿ ಇಲ್ಲ. ದಸರಾ ವಿಶೇಷಾಧಿಕಾರಿ ಮಣಿವಣ್ಣನ್ ಅವರ ಮೌಖಿಕ ಆದೇಶ ಜಾರಿಯಾದರೆ ವಾಹನ ನಿಲುಗಡೆ ಸೌಲಭ್ಯ ಸಂಪೂರ್ಣ ಉಚಿತ.

ಯೋಗ ದಸರಾ ಉದ್ಘಾಟನೆ 20ಕ್ಕೆ


ನಗರದಲ್ಲಿ 73ಕ್ಕೂ ಹೆಚ್ಚು ಯೋಗ ಕೇಂದ್ರಗಳಿದ್ದು, ಈ ಬಾರಿ ವಿಭಿನ್ನವಾಗಿ ಯೋಗ ದಸರೆ ಆಚರಿಸುವ ಉದ್ದೇಶದಿಂದ ಒಂದೆಡೆ ಸಂಘಟಿತರಾಗಿ ವಿವಿಧೆಡೆ ಯೋಗ ಶಿಬಿರ, ಯೋಗ ನಡಿಗೆ, ಯೋಗಾಸನ ಪ್ರದರ್ಶನ ಇತ್ಯಾದಿಗಳನ್ನು ಆರಂಭಿಸಿವೆ.

ಅಪ್ ಡೇಟ್ ಆಗುತ್ತಿದೆ ವೆಬ್ ಸೈಟ್


ಈ ಸಾಲಿನ ದಸರಾ ವೆಬ್ ಸೈಟ್ (http://www.mysoredasara2009.com/dasara)ನಲ್ಲಿ ಇದೀಗ ಅಪ್ ಡೇಟ್ ಮಾಹಿತಿ ಲಭ್ಯ.

ದಸರೆ ವೆಬ್ ಸೈಟ್: ಮಾಹಿತಿ ಅಪೂರ್ಣ


ನಾಡಹಬ್ಬಕ್ಕೆ ದಿನಗಣನೆ ಆರಂಭಗೊಂಡಿದ್ದರೂ ಇನ್ನೂ ವೆಬ್ ಸೈಟ್ ಅಪೂರ್ಣ.

ಏರ್ ಶೋ: ಅಧಿಕಾರಿಗಳ ಸ್ಥಳ ಪರಿಶೀಲನೆ


ನಾಡಹಬ್ಬ ದಸರೆಯ ಆಕರ್ಷಣೆಗಳಲ್ಲಿ ಒಂದಾದ ಲೋಹದ ಹಕ್ಕಿಗಳ ಹಾರಾಟ-ಏರ್ ಶೋ ನಡೆಯಲಿರುವ ಬನ್ನಿಮಂಟಪ ಕವಾಯಿತು ಮೈದಾನಕ್ಕೆ ಭಾರತೀಯ ವಾಯುಪಡೆ ಅಧಿಕಾರಿಗಳು ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿದರು.

ಯುವ ದಸರೆಯಲ್ಲಿ ಖ್ಯಾತ ಕಲಾವಿದರ ಜೈ ಹೋ


ಈ ಬಾರಿ ದಸರೆಯಲ್ಲಿ ಯುವ ಮನಸುಗಳಿಗೆ ಖ್ಯಾತ ಕಲಾವಿದರ ಗಾನ ಲಹರಿ.

ದಸರೆಯಲ್ಲಿ ಮೇಯರ್ 'ಅಶ್ವಸವಾರಿ' ಅನುಮಾನ


ನಾಡಹಬ್ಬ ಸಿದ್ಧತಾ ಸಭೆ ಹಾಗೂ ಕಾರ್ಯಕ್ರಮಗಳಿಗೆ ಸರಿಯಾಗಿ ಆಹ್ವಾನ ಸಿಗದೇ ಇದ್ದುದಕ್ಕೆ ನಗರದ ಪ್ರಥಮ ಪ್ರಜೆ ಪುರುಷೋತ್ತಮ್ ಜಂಬೂಸವಾರಿಯಂದು ಕುದುರೆ ಏರುವುದು ಅನುಮಾನ.

ದಸರಾ ಭದ್ರತೆಗೆ ಆರ್ಎಎಫ್, ಸಿಐಎಸ್ಎಫ್ ಯೋಧರು


ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ಸೂಕ್ತ ರಕ್ಷಣೆ ಹಾಗೂ ಬಿಗಿಭದ್ರತೆ ನೀಡುವ ಸಂಬಂಧ ಕ್ಷಿಪ್ರ ಪಡೆಯ ಜತೆ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯ ನೆರವು ಪಡೆಯಲು ಸರಕಾರ ಚಿಂತನೆ ನಡೆಸಿದೆ.

ದಸರೆ ಗಜಪಯಣಕ್ಕೆ ಅದ್ಧೂರಿ ಚಾಲನೆ


ವಿಶ್ವವಿಖ್ಯಾತ ಮೈಸೂರು ದಸರೆಯ ಪ್ರಮುಖ ಆಕರ್ಷಣೆ ಜಂಬೂಸವಾರಿಯಲ್ಲಿ ಪಾಲ್ಗೊಳ್ಳುವ 'ಬಲರಾಮ'ನೇತೃತ್ವದ ಗಜಪಡೆ ಗುರುವಾರ ಹುಣಸೂರು ತಾಲೂಕಿನ ಕಾಡಂಚಿನ ಗ್ರಾಮ ವೀರನಹೊಸಹಳ್ಳಿಯಿಂದ ನಾಡಿಗೆ ಪ್ರಯಾಣ ಬೆಳೆಸಿತು. ಜಿಲ್ಲಾ ಉಸ್ತುವಾರಿ ಸಚಿವೆ ಶೋಭಾ ಕರಂದ್ಲಾಜೆ ಪುಷ್ಪಾರ್ಚನೆ ಮಾಡಿ 'ಗಜಪಯಣ'ಕ್ಕೆ ಚಾಲನೆ ನೀಡಿದರು.

ಗಜಪಯಣಕ್ಕೆ ರಂಗು: ಡಿಸಿ ಸೂಚನೆ


ದಸರಾ ಮಹೋತ್ಸವದ ಮೊದಲ ಕಾರ್ಯಕ್ರಮ 'ಗಜಪಯಣ'ಕ್ಕೆ ಅದ್ಧೂರಿ ಚಾಲನೆ ನೀಡಲು ಸರ್ವಸಿದ್ಧತೆ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಪಿ.ಮಣಿವಣ್ಣನ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಬಂತು ದಸರೆ; ಆನೆಗಳಿಗೂ ಹೊಸ ಕಾವಾಡಿಗಳ ಆಸರೆ...


ಈ ಬಾರಿ ನಾಡಹಬ್ಬಕ್ಕೆ ಬರುವ ಗಜಪಡೆಯೊಂದಿಗೆ ಹೊಸ ಕಾವಾಡಿಗಳು ಬರಲಿದ್ದಾರೆ.