ಚಾಮರಾಜನಗರ ವಿಶೇಷ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಚಾಮರಾಜನಗರ ವಿಶೇಷ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಮೈಮುಲ್‌ನಲ್ಲಿ ಕ್ಷೀರ ಕ್ರಾಂತಿ

ಫಾಲಲೋಚನ ಆರಾಧ್ಯ ಚಾಮರಾಜನಗರ
ಮೈಸೂರು-ಚಾಮರಾಜನಗರ ಜಿಲ್ಲಾ ಹಾಲು ಒಕ್ಕೂಟ (ಮೈಮುಲ್) ಈ ವರ್ಷ ಕ್ಷೀರ ಕ್ರಾಂತಿ ನಡೆಸಿದೆ.
ಪ್ರತಿ ದಿನ ೫.೫ ಲಕ್ಷ ಲೀಟರ್ ಹಾಲು ಸಂಗ್ರಹ ಮಾಡುವ ಮೂಲಕ ಇತಿಹಾಸ ನಿರ್ಮಿಸಿದೆ.  ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಮೈಮುಲ್ ಇದೀಗ ಗಣನೀಯ ಪ್ರಮಾಣದಲ್ಲಿ ಹಾಲು ಸಂಗ್ರಹವನ್ನು ವೃದ್ಧಿಸಿಕೊಂಡಿದೆ. ಕಳೆದ ವರ್ಷ ಇದೇ ವೇಳೆಯಲ್ಲಿ ಮೈಮುಲ್ ಸಂಗ್ರಹಿಸುತ್ತಿದ್ದ  ಹಾಲು ೪.೫ ಲಕ್ಷ ಲೀಟರ್. ಈ ಬಾರಿ ಜೂನ್ ತಿಂಗಳಲ್ಲಿ  (೧೩ ರಂದು) ೫,೫,೨೭೦ ಲೀಟರ್ ಸಂಗ್ರಹ ಮಾಡಿದೆ. ಒಟ್ಟಾರೆ ಮೇ ತಿಂಗಳಿಂದೀಚೆಗೆ ಮೈಮುಲ್‌ನ ಪ್ರತಿದಿನದ ಸಂಗ್ರಹ ೫.೫ ಲಕ್ಷ ಲೀಟರ್.

ಪ್ರಭಾವಿಗಳೇ ಇಲ್ಲಿ `ಫಲಾನುಭವಿಗಳು'

ಈ ಯೋಜನೆ ಅಕ್ಷರಶಃ ಪೂರ್ಣಗೊಂಡಿದ್ದರೆ ಗ್ರಾಮಸ್ಥರ ಬಾಳು `ಸುವರ್ಣ'ವಾಗಬೇಕಿತ್ತು. ಆದರೆ ಕೆಲ ಜನಪ್ರತಿನಿಧಿಗಳ, ಗುತ್ತಿಗೆದಾರರ, ಅಧಿಕಾರಿಗಳ ಬದುಕು ಸುವರ್ಣವಾಗಿದೆ. ಈ ಮಾತಿಗೆ ಇವೆಲ್ಲಾ ಗ್ರಾಮಗಳಲ್ಲಿ ನಡೆದ ಕಾಮಗಾರಿಗಳೇ ನಿದರ್ಶನ. ಅಂದರೆ ಪ್ರಭಾವಿಗಳೇ ಇಲ್ಲಿ ಫಲಾನುಭವಿಗಳು ಎನ್ನುತ್ತಾರೆ ಕೋಟಂಬಳ್ಳಿ  ಗುರುಸ್ವಾಮಿ.