ಕೊಡಗು - ಅಭಿಯಾನ(ಆಸ್ಪತ್ರೆ ಯೋಗಕ್ಷೇಮ) ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಕೊಡಗು - ಅಭಿಯಾನ(ಆಸ್ಪತ್ರೆ ಯೋಗಕ್ಷೇಮ) ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಸರಿದಾರಿಗೆ ಮರಳಿದ ಜಿಲ್ಲೆಯ ಕೆಲ ಆಸ್ಪತ್ರೆಗಳು

ವಿಕ ಸುದ್ದಿಲೋಕ ಮಡಿಕೇರಿ  
ಅವ್ಯವಸ್ಥೆಯ ಆಗರವಾಗಿರುವ ಕೊಡಗು ಜಿಲ್ಲೆಯ ಸಾಕಷ್ಟು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ  `ಆಸ್ಪತ್ರೆ ಯೋಗಕ್ಷೇಮ' ವಿಕ ಅಭಿಯಾನವು  ತುರ್ತು ಚಿಕಿತ್ಸೆ ನೀಡುವಲ್ಲಿ ಯಶಸ್ವಿಯಾಗಿದೆ.
ಕೊಡಗು ಜಿಲ್ಲೆಯ ೨೯ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಅವ್ಯವಸ್ಥೆ, ಉತ್ತಮ ಸೇವೆಯ ಸಂಪೂರ್ಣ ಚಿತ್ರಣವನ್ನು ಒಂದು ವಾರಗಳ ಕಾಲ ವಿಜಯ ಕರ್ನಾಟಕ ದೈನಿಕವು `ಆಸ್ಪತ್ರೆ ಯೋಗ ಕ್ಷೇಮ' ಮಾಲಿಕೆಯಲ್ಲಿ ತೆರೆದಿಟ್ಟಿತು. ಅಭಿಯಾನದಿಂದಾಗಿ ಅವ್ಯವಸ್ಥೆಯಿಂದ ಕೂಡಿದ್ದ ಕೆಲವು ಆಸ್ಪತ್ರೆಗಳು ಸರಿದಾರಿಗೆ ಮರಳಿವೆ.
ಚೆನ್ನಯ್ಯನಕೋಟೆ  ಆಸ್ಪತ್ರೆಗೆ ಭಾನುವಾರ ಬಂತೆಂದರೆ ರಜೆ. ನಿಯಮದ ಪ್ರಕಾರ ಭಾನುವಾರ ಮಧ್ಯಾಹ್ನದವರೆಗೆ ಕರ್ತವ್ಯ ನಿರ್ವಹಿಸಬೇಕು. ಆದರೆ ಇಲ್ಲಿ ಭಾನುವಾರ ಬಾಗಿಲೇ ತೆರೆಯುವುದೇ ಇಲ್ಲ. ಈ ಬಗ್ಗೆ  `ವಿಕ' ಬೆಳಕು ಚೆಲ್ಲಿದಾಗ ತಕ್ಷಣ ಸ್ಪಂದಿಸಿದ  ವೀರಾಜಪೇಟೆ ತಾ.ಪಂ. ಅಧ್ಯಕ್ಷ ಎಚ್.ಕೆ. ದಿನೇಶ್, ಆಸ್ಪತ್ರೆ ಭಾನುವಾರ ಕೂಡ ತೆರೆದಿರುವಂತೆ ಅಗತ್ಯ ಕ್ರಮ ಕೈಗೊಳ್ಳಲು ತಾಲೂಕು ವೈದ್ಯಾಧಿಕಾರಿಗೆ ನಿರ್ದೇಶನ ನೀಡಿದರು. ಅಲ್ಲದೆ  `ವಿಕ ಅಭಿಯಾನ'ವು ವೀರಾಜಪೇಟೆ ತಾ.ಪಂ. ಕೆಡಿಪಿ  ಸಭೆಯಲ್ಲಿ ಪ್ರಸ್ತಾಪಗೊಂಡು ಆಸ್ಪತ್ರೆಗಳನ್ನು ಸರಿದಾರಿಗೆ ಕೊಂಡೊಯ್ಯುವ ಕುರಿತು ಸಮಾಲೋಚನೆಗೆ ವೇದಿಕೆಯೊದಗಿಸಿತು.